ಕೆ.ಆರ್. ಪುರ ಠಾಣಾ ವ್ಯಾಪ್ತಿಯ ಅಕ್ಷಯನಗರದಲ್ಲಿ ನಡೆದ ನಿರ್ಮಲಾ ಕೊಲೆ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಅಂಬರೀಷ್ ನೇತೃತ್ವದಲ್ಲಿ ಪೊಲೀಸರ ತಂಡ ಅಂಡಮಾನ್ ನಿಕೋಬಾರ್ಗೆ ತೆರಳಿದೆ. ಹೀಗಾಗಿ, ನೋಟಿಸ್ ಇನ್ನೂ ಅವರ ಕೈ ಸೇರಿಲ್ಲ. ಅಂಬರೀಷ್ ಅವರು ಬೆಂಗಳೂರಿಗೆ ಬಂದ ಬಳಿಕ, ಅವರು ನೀಡುವ ಹೇಳಿಕೆ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು. ಬೈರತಿ ಬಸವರಾಜ್ ಅವರು ತಮ್ಮ ಬೆಂಬಲಿಗರ ಸಮ್ಮುಖದಲ್ಲಿ ಫೆ. 4 ರಂದು ಜನ್ಮದಿನ ಆಚರಿಸಿಕೊಂಡರು. ಅಲ್ಲಿಗೆ ಇನ್ಸ್ಪೆಕ್ಟರ್ ಅಂಬರೀಷ್ ಸೇರಿ ಕೆಲವು ಪೊಲೀಸ್ ಅಧಿಕಾರಿಗಳು ಶುಭ ಕೋರಲು ತೆರಳಿದ್ದರು. ಶಾಸಕರಿಗಾಗಿ ವಿಶೇಷವಾಗಿ ಕೇಕ್ ಮಾಡಿಸಿಕೊಂಡು ಹೋಗಿದ್ದ ಅಂಬರೀಷ್, ಅದನ್ನು ಶಾಸಕರ ಕೈಯಿಂದ ಕತ್ತರಿಸಿ ಗದೆ ನೀಡಿದರು.