ಆಗಿದ್ದೇನು?
ಛತ್ತರ್ಪುರ ಜಿಲ್ಲೆಯ ಮಂಕಾರಿ ಗ್ರಾಮಕ್ಕೆ ಕೋವಿಡ್ ಲಸಿಕೆ ಹಾಕಲು ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದರು. ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದ ಹುಡುಗಿ ವೈದ್ಯರನ್ನು ನೋಡಿದ ಕೂಡಲೇ ಮನೆಯಿಂದ ಓಡಿಹೋಗಿ ಮರವೇರಿ ಕುಳಿತಿದ್ದಳು. ಆದರೆ, ಅಷ್ಟಕ್ಕೆ ಸುಮ್ಮನಾಗದ ವೈದ್ಯರು ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ವೈದ್ಯರು ಎಷ್ಟೇ ಮನವೊಲಿಸಿದರೂ ಯುವತಿ ಮರದಿಂದ ಕೆಳಗಿಳಿಯಲಿಲ್ಲ. ಬಳಿಕ ಪೋಷಕರು ಹಾಗೂ ಗ್ರಾಮಸ್ಥರು ಲಸಿಕೆ ಕುರಿತು ತಿಳಿ ಹೇಳಿದ ಬಳಿಕ ಹುಡುಗಿ ಮರದಿಂದ ಕೆಳಗಿಳಿದು ಲಸಿಕೆ ಪಡೆದಿದ್ದಾಳೆ.