ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಕೆಯ ಹಾದಿಯಲ್ಲಿ ಸ್ವರ ಸಾಮ್ರಾಟ, ಪಂಡಿತ್ ಬಸವರಾಜ ರಾಜಗುರು ಅವರು 2 ಬಾರಿ ಸಾವಿನ ಮನೆಯ ಕದ ತಟ್ಟಿ ಬಂದವರು. ಬಹಳ ಸೂಕ್ಷ್ಮ ಸ್ವಭಾವದವರಾಗಿದ್ದ ರಾಜಗುರು ಅವರು ತಮ್ಮ ಇಷ್ಟದ ವಸ್ತುಗಳನ್ನು ಮನಸಾರೆ ಹಚ್ಚಿಕೊಳ್ಳುತ್ತಿದ್ದರು. ಅವರ ಪ್ರೀತಿಯ ಶಿಷ್ಯ, ಪಂಡಿತ್ ಗಣಪತಿ ಭಟ್ ಹಾಸಣಗಿ ಅವರು ಗುರುವಿನ ಬಗ್ಗೆ ಹೇಳಿದ ಕುತೂಹಲಕಾರಿ ಕತೆಗಳು ಈ ವಾರದ ‘ಜಸ್ಟ್ ಮ್ಯೂಸಿಕ್’ಸರಣಿಯಲ್ಲಿವೆ.