ಕಛೇರಿಗಳಿಂದ ಬಿಜಿಯಾಗಿದ್ದ ಸಂದರ್ಭದಲ್ಲೂ ನರಸಿಂಹ ಮೂರ್ತಿ ಅವರು ಸಂಗೀತ ಪಾಠ ಮಾಡುವ ಅವಕಾಶವನ್ನು ಎಂದೂ ಕಳೆದುಕೊಂಡವರಲ್ಲ. ವಿದೇಶ ಪ್ರವಾಸಕ್ಕೆ ಹೋದಾಗ ಅಲ್ಲೂ ಅಲ್ಲಿಯ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಬರುತ್ತಾರೆ ಬೆಸ್ಟ್ ವೈಲಿನಿಸ್ಟ್, ಧನುರ್ವೀಣಾ ರತ್ನ, ಗಾನಕಲಾಭಾಸ್ಕರ, ಶ್ರೇಷ್ಠಾಚಾರ್ಯ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿರುವ ಅವರು ಬಿರುದಿಗೆ ತಕ್ಕಂತೆ ಬದುಕುತ್ತಿದ್ದಾರೆ. 40 ವರ್ಷಗಳ ಹಿಂದೆ ನಡೆದ ಒಂದು ತಮಾಷೆ ಘಟನೆಯ ಹಿತಾನುಭವ ಈ ವಾರದ ‘ಜಸ್ಟ್ ಮ್ಯೂಸಿಕ್ ’ ಸರಣಿಯಲ್ಲಿದೆ.