ದಾವಣಗೆರೆ ನಗರದಲ್ಲಿ 2021ರ ಮಾರ್ಚ್ನಿಂದ ಒಣ ಕಸ ಹಾಗೂ ಹಸಿ ಕಸ ವಿಂಗಡಣೆ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ಆದರೆ, ಇದು ಜಾರಿಗೆ ಬಂದು 6 ತಿಂಗಳಾದರೂ ಹೆಚ್ಚಿನ ವಾರ್ಡ್ಗಳಲ್ಲಿ ಇದರ ಅನುಷ್ಠಾನ ಸಮರ್ಪಕವಾಗಿ ಆಗಿಲ್ಲ. ಯೋಜನೆಗೆ ಜನ ಸ್ಪಂದಿಸುತ್ತಿಲ್ಲ ಎನ್ನುವುದು ಒಂದು ಕಾರಣ. ಕೋವಿಡ್ ಕಾರಣದಿಂದಾಗಿ ಪಾಲಿಕೆಯ ಸಿಬ್ಬಂದಿ ಹೆಚ್ಚಿನ ಕೆಲಸದ ಒತ್ತಡ ಎದುರಿಸಿದ ಕಾರಣ ಈ ಬಗ್ಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗಲಿಲ್ಲ ಎಂಬುದು ಅಧಿಕಾರಿಗಳು ನೀಡುವ ಇನ್ನೊಂದು ಕಾರಣ.