ತುಂಗೆಯ ತಟದಲ್ಲಿ ಸ್ಮಾರ್ಟ್ಸಿಟಿ ಯೋಜನೆ ಅಡಿ ಹಲವು ಕಾಮಗಾರಿ ಕೈಗೊಳ್ಳಲಾಗಿದೆ. ಕುಡಿಯಲು ಬಿಡಿ. ಬಳಸಲೂ ಯೋಗ್ಯವಾಗಿಲ್ಲದ ನದಿ ಸ್ವಚ್ಛಗೊಳಿಸದೇ ಕೈಗೊಳ್ಳುವ ಅಭಿವೃದ್ಧಿ ವ್ಯರ್ಥ ಎನ್ನುವುದು ಶಿವಮೊಗ್ಗ ನಾಗರಿಕರ ಅನಿಸಿಕೆ. ನಗರ ಪಾಲಿಕೆ ಅತ್ತ ಗಮನಹರಿಸಬೇಕು. ನದಿ ಮಾಲಿನ್ಯ ತಡೆಗೆ ವೇಗದ ಕ್ರಮ ಕೈಗೊಳ್ಳಬೇಕಿದೆ.