ಬೆಂಗಳೂರು: ಬಿಡಿಎ ಜಕ್ಕೂರು ಕೆರೆ ಅಭಿವೃದ್ಧಿಗೆ 15 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚ ಮಾಡಿತ್ತು. ಆದರೆ, ನಿರ್ವಹಣೆ ಮಾಡಲಿಲ್ಲ. ಹೀಗಾಗಿ, 2014ರ ವೇಳೆಗೆ ಅಂದರೆ ಅಭಿವೃದ್ಧಿ ಕಂಡ ಸುಮಾರು ಎರಡೇ ವರ್ಷದಲ್ಲಿ ಜಕ್ಕೂರು ಕೆರೆ ತ್ಯಾಜ್ಯ, ಕೊಳಚೆ ನೀರಿನ ತಾಣವಾಯಿತು. ಇದನ್ನು ಕಂಡ ಸ್ಥಳೀಯ ಜನತೆಯ ಮನಸ್ಸು ಕೊರಗಿತು. ಏನಾದರೂ ಮಾಡಬೇಕೆಂಬ ಛಲ ಹುಟ್ಟಿತು. ಆಗ ಸಮುದಾಯದ ಜಲಪೋಷಣ್ ಜನ್ಮ ತಾಳಿತು. ಸಮುದಾಯದಿಂದ ಕೆರೆ ಸ್ವಚ್ಛವಾಯಿತು. ಮತ್ತಷ್ಟು ಅಭಿವೃದ್ಧಿ ಕಂಡಿತು. ಅಷ್ಟೇ ಅಲ್ಲ, ಈ ಕೆಲಸಕ್ಕೆ ಕೇಂದ್ರ ಸರ್ಕಾರದ ಪುರಸ್ಕಾರವನ್ನೂ ಪಡೆಯಿತು.