ಕೇಂದ್ರ ಸಚಿವರಾಗಿರುವ ಡಿ.ವಿ. ಸದಾನಂದಗೌಡರು 2011–12ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು. ಯಡಿಯೂರಪ್ಪ ರಾಜೀನಾಮೆ ಕೊಟ್ಟ ಕಾಲದಲ್ಲಿ ಆಕಸ್ಮಿಕವೆಂಬಂತೆ ಸದಾನಂದಗೌಡರಿಗೆ ಈ ಹುದ್ದೆ ಒಲಿದುಬಂತು. ಶಾಸಕರನ್ನು ಓಲೈಸಿ ಸರ್ಕಾರ ನಡೆಸುವ ಉಸಾಬರಿಯೂ ಅವರ ಹೆಗಲಿಗೆ ಬಿದ್ದಿತ್ತು. ಮನೆಗೆ ಬಂದ ಶಾಸಕರನ್ನು ನಗುಮುಖದಲ್ಲಿ ಮಾತನಾಡಿಸುತ್ತಾ ಇದ್ದ ಗೌಡರು ಹೋಗುವಾಗ ಕೈಗೊಂದು ಕಾಗದದ ಪೊಟ್ಟಣ ಕೊಡುತ್ತಿದ್ದರು. ‘ಗಿಫ್ಟ್’ ಎಂದು ತಿಳಿದ ಶಾಸಕರು ಅದನ್ನು ತೆಗೆದುಕೊಂಡು ಹೋಗಿ, ಬಿಚ್ಚಿ ನೋಡಿದಾಗ ಅವರಿಗೆ ಅಚ್ಚರಿ ಕಾದಿರುತ್ತಿತ್ತು. ಹಾಗಿದ್ದರೆ ಗೌಡರು ಕೊಡುತ್ತಿದ್ದ ಗಿಫ್ಟ್ ಏನು?. ನೋಡಿ ಈ ವಾರದ ರಾಜಕೀಯ ರಸಪ್ರಸಂಗ. . .