ನವರಾತ್ರಿ ಎನ್ನುವುದು ನಮ್ಮೊಳಗಿನ ಶಕ್ತಿಯ ಉದ್ದೀಪನವೇ ಆಗಿದೆ. ‘ಲೋಕದ ಅಪನಂಬಿಕೆಯ ನೋಟವನ್ನು ಕ್ಷುಲ್ಲಕವಾಗಿಸಿ, ಅಂತರಂಗದಲ್ಲಿ ಅಡಗಿರುವ ಶಕ್ತಿಗೆ ಓಗೊಡು. ಆತ್ಮವಿಶ್ವಾಸದ ನಡೆಯಿದ್ದರೆ ಅಂದುಕೊಂಡಿದ್ದನ್ನು ಸಾಧಿಸಿಯೇ ತೀರಬಹುದು’ ಎಂದು ಸಾರುತ್ತದೆ ಒಂಬತ್ತು ದಿನಗಳ ಸಂಭ್ರಮ. ಅಸಾಮಾನ್ಯ ಎನಿಸುವ ಒಂಬತ್ತು ವೃತ್ತಿಗಳಲ್ಲಿರುವ ಹೆಣ್ಣುಮಕ್ಕಳ ಬದುಕಿನ ಇನಿ-ದನಿ ಈ ಬಾರಿಯ ‘ಭೂಮಿಕಾ’ ವಿಶೇಷ. ‘ಅಯ್ಯಬ್ಬ ಹೆಣ್ಣುಮಕ್ಕಳು ಈ ಕೆಲಸ ಮಾಡೋದಾ’ ಎನ್ನುವವರ ವಾರೆನೋಟವನ್ನು ಲೆಕ್ಕಿಸದೆ, ಸವಾಲುಗಳನ್ನೇ ಸಾಮರ್ಥ್ಯವಾಗಿಸಿಕೊಂಡು ವೃತ್ತಿಬದ್ಧತೆ ತೋರಿರುವ ನಮ್ಮ ನಡುವಿನ ಈ ನವದುರ್ಗೆಯರು ರೂಪಾ ಕೆ.ಎಂ. ಅವರಿಗೆ ನೀಡಿರುವ ಸ್ವವಿವರ ಇಲ್ಲಿದೆ..
ಪೌರೋಹಿತ್ಯ– ನಮ್ಮದೂ ಇರಲಿ ಪಾರುಪತ್ಯ
ಗೇರ್ಗೆ ರೈಟ್, ಗೇಲಿಗೆ ಬ್ರೇಕ್
ತಮಿಳ್ ಸೆಲ್ವಿ
ಹೆಸರಿಗೆ ಕ್ರೂರ, ಪ್ರೀತಿ ಅಪಾರ
ಪ್ರಾಣಿ ಪ್ರೀತಿ..... ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿಪಾಲಕ ಮಹೇಶ್, ಪಶುವೈದ್ಯಕೀಯ ಆಸ್ಪತ್ರೆಯ ಸಹಾಯಕಿ ಸಾವಿತ್ರಮ್ಮ ಅವರ ಪ್ರೀತಿಗೆ ಅನಾಥ ಚಿರತೆ ಮರಿಗಳ ಮನಸ್ಸೂ ಕರಗಿದೆ. ಇವರೊಂದಿಗೆ ಚಿರತೆ ಮರಿಗಳು ಸಾಮಾನ್ಯವೆಂಬಂತೆ ಚಿನ್ನಾಟವಾಡುತ್ತವೆ.