'ನನಗೆ ನೆನಪಿದೆ ಇಮ್ರಾನ್ ಖಾನ್ ಸಭೆಯಲ್ಲಿ ಭಾಗಿಯಾಗಲು ನಿರಾಕರಿಸಿದ್ದರು, ಷಾಹ್ ಮಹಮೂದ್ ಖುರೇಷಿ ಸಭೆಯಲ್ಲಿದ್ದರು ಹಾಗೂ ಸೇನಾ ಮುಖ್ಯಸ್ಥ ಬಾಜ್ವಾ ಕೊಠಡಿಗೆ ಪ್ರವೇಶಿಸಿದರು. ಅವರ ಕಾಲುಗಳು ನಡುಗುತ್ತಿದ್ದವು ಹಾಗೂ ಬೆವರು ಸುರಿಸುತ್ತಿದ್ದರು. ಆಗ ವಿದೇಶಾಂಗ ಸಚಿವರು– ಅಭಿನಂದನ್ ಬಿಡುಗಡೆ ಮಾಡೋಣ, ಭಾರತವು ರಾತ್ರಿ 9ಕ್ಕೆ ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಸಜ್ಜಾಗಿದೆ' ಎಂದಿದ್ದರು ಎಂದು ಸಾದಿಖ್ ಆ ಸಭೆಯ ಆಗುಹೋಗುಗಳನ್ನು ತೆರೆದಿಟ್ಟರು.