<p class="title"><strong>ನೈಪಿತಾವ್, ಮ್ಯಾನ್ಮಾರ್: </strong>ಭಾರತವು ನೆರೆಯ ರಾಷ್ಟ್ರವಾದ ಮ್ಯಾನ್ಮಾರ್ಗೆ ಹತ್ತು ಲಕ್ಷ ಡೋಸ್ ಕೋವಿಡ್ ಲಸಿಕೆ,ಹತ್ತು ಸಾವಿರ ಟನ್ ಅಕ್ಕಿ ಮತ್ತು ಗೋಧಿಯನ್ನು ಕಳುಹಿಸಿಕೊಟ್ಟಿದೆ.</p>.<p class="title">ಮ್ಯಾನ್ಮಾರ್ಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶ್ರಿಂಗ್ಲಾ ಅವರು ಈ ವಿಷಯ ತಿಳಿಸಿದ್ದಾರೆ. ಭಾರತವು ಮಾನವೀಯ ನೆರವನ್ನು ಮುಂದುವರಿಸಿದ್ದು, ಅದರ ಭಾಗವಾಗಿ ನೆರವು ನೀಡಲಾಗಿದೆ ಎಂದಿದ್ದಾರೆ.</p>.<p class="title">ಇದನ್ನೂ ಓದಿ:<a href="https://www.prajavani.net/world-news/south-africas-case-drop-may-show-omicron-peak-has-passed-895538.html" itemprop="url">ದಕ್ಷಿಣ ಆಫ್ರಿಕಾದಲ್ಲಿ ಹಾನಿ ಮಾಡದೇ ಅಂತ್ಯದತ್ತ ಓಮೈಕ್ರಾನ್? </a></p>.<p class="title">ಫೆಬ್ರುವರಿ 1ರಂದು ನಡೆದ ಸೇನಾ ದಂಗೆಯಲ್ಲಿಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿ,ಆಂಗ್ ಸಾನ್ ಸೂಕಿ ಅವರನ್ನು ಬಂಧಿಸಿದ ಬಳಿಕ ಇದೇ ಮೊದಲ ಬಾರಿಗೆ ಭಾರತದ ಉನ್ನತ ಮಟ್ಟದ ನಿಯೋಗ ಮ್ಯಾನ್ಮಾರ್ಗೆ ಭೇಟಿ ನೀಡಿದೆ.</p>.<p class="bodytext">ಮ್ಯಾನ್ಮಾರ್ನ ರೆಡ್ಕ್ರಾಸ್ ಸೊಸೈಟಿಗೆ ಶ್ರಿಂಗ್ಲಾ ಅವರು ಬುಧವಾರ ಲಸಿಕೆಗಳನ್ನು ಹಸ್ತಾಂತರಿಸಿದರು.</p>.<p class="bodytext">‘ಭಾರತದೊಂದಿಗೆ ದೀರ್ಘವಾದ ಗಡಿಯನ್ನು ಹಂಚಿಕೊಂಡಿರುವ ಮ್ಯಾನ್ಮಾರ್ ಜನತೆಗೆ ಮಾನವೀಯ ನೆರವು ನೀಡುವುದನ್ನು ನಾವು ಮುಂದುವರಿಸುತ್ತೇವೆ. ಮ್ಯಾನ್ಮಾರ್ ಕೋವಿಡ್ ವಿರುದ್ಧ ಹೋರಾಡುತ್ತಿರುವುದರಿಂದ ಭಾರತದಲ್ಲಿ ತಯಾರಿಸಿದ 10 ಲಕ್ಷ ಡೋಸ್ ಲಸಿಕೆಗಳನ್ನು ಅಲ್ಲಿನ ರೆಡ್ಕ್ರಾಸ್ ಸೊಸೈಟಿಗೆಹಸ್ತಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನೈಪಿತಾವ್, ಮ್ಯಾನ್ಮಾರ್: </strong>ಭಾರತವು ನೆರೆಯ ರಾಷ್ಟ್ರವಾದ ಮ್ಯಾನ್ಮಾರ್ಗೆ ಹತ್ತು ಲಕ್ಷ ಡೋಸ್ ಕೋವಿಡ್ ಲಸಿಕೆ,ಹತ್ತು ಸಾವಿರ ಟನ್ ಅಕ್ಕಿ ಮತ್ತು ಗೋಧಿಯನ್ನು ಕಳುಹಿಸಿಕೊಟ್ಟಿದೆ.</p>.<p class="title">ಮ್ಯಾನ್ಮಾರ್ಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶ್ರಿಂಗ್ಲಾ ಅವರು ಈ ವಿಷಯ ತಿಳಿಸಿದ್ದಾರೆ. ಭಾರತವು ಮಾನವೀಯ ನೆರವನ್ನು ಮುಂದುವರಿಸಿದ್ದು, ಅದರ ಭಾಗವಾಗಿ ನೆರವು ನೀಡಲಾಗಿದೆ ಎಂದಿದ್ದಾರೆ.</p>.<p class="title">ಇದನ್ನೂ ಓದಿ:<a href="https://www.prajavani.net/world-news/south-africas-case-drop-may-show-omicron-peak-has-passed-895538.html" itemprop="url">ದಕ್ಷಿಣ ಆಫ್ರಿಕಾದಲ್ಲಿ ಹಾನಿ ಮಾಡದೇ ಅಂತ್ಯದತ್ತ ಓಮೈಕ್ರಾನ್? </a></p>.<p class="title">ಫೆಬ್ರುವರಿ 1ರಂದು ನಡೆದ ಸೇನಾ ದಂಗೆಯಲ್ಲಿಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿ,ಆಂಗ್ ಸಾನ್ ಸೂಕಿ ಅವರನ್ನು ಬಂಧಿಸಿದ ಬಳಿಕ ಇದೇ ಮೊದಲ ಬಾರಿಗೆ ಭಾರತದ ಉನ್ನತ ಮಟ್ಟದ ನಿಯೋಗ ಮ್ಯಾನ್ಮಾರ್ಗೆ ಭೇಟಿ ನೀಡಿದೆ.</p>.<p class="bodytext">ಮ್ಯಾನ್ಮಾರ್ನ ರೆಡ್ಕ್ರಾಸ್ ಸೊಸೈಟಿಗೆ ಶ್ರಿಂಗ್ಲಾ ಅವರು ಬುಧವಾರ ಲಸಿಕೆಗಳನ್ನು ಹಸ್ತಾಂತರಿಸಿದರು.</p>.<p class="bodytext">‘ಭಾರತದೊಂದಿಗೆ ದೀರ್ಘವಾದ ಗಡಿಯನ್ನು ಹಂಚಿಕೊಂಡಿರುವ ಮ್ಯಾನ್ಮಾರ್ ಜನತೆಗೆ ಮಾನವೀಯ ನೆರವು ನೀಡುವುದನ್ನು ನಾವು ಮುಂದುವರಿಸುತ್ತೇವೆ. ಮ್ಯಾನ್ಮಾರ್ ಕೋವಿಡ್ ವಿರುದ್ಧ ಹೋರಾಡುತ್ತಿರುವುದರಿಂದ ಭಾರತದಲ್ಲಿ ತಯಾರಿಸಿದ 10 ಲಕ್ಷ ಡೋಸ್ ಲಸಿಕೆಗಳನ್ನು ಅಲ್ಲಿನ ರೆಡ್ಕ್ರಾಸ್ ಸೊಸೈಟಿಗೆಹಸ್ತಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>