<p><strong>ವಾಷಿಂಗ್ಟನ್: </strong>ಉಪಗ್ರಹ ಆಧಾರಿತ ಕರಾವಳಿ ಪ್ರದೇಶದ ದತ್ತಾಂಶಗಳ ನಿಖರತೆ ಮತ್ತು ಭೂಮಿ ಆಧಾರಿತ ಅವಲೋಕನವನ್ನು ಸುಧಾರಿಸುವ ಭಾರತದ ಇಸ್ರೊ ಮತ್ತು ಅಮೆರಿಕದನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಪಿರಿಕ್ ಅಡ್ಮಿನಿಸ್ಟೇಷನ್ (ಎನ್ಒಎಎ) ಜಂಟಿಯಾಗಿ ರೂಪಿಸಿರುವ ಬಹುರಾಷ್ಟ್ರೀಯ ಯೋಜನೆಗೆ ವಿಶ್ವಸಂಸ್ಥೆ ಅನುಮೋದನೆ ನೀಡಿದೆ.</p>.<p>ಈ ಯೋಜನೆಗೆ ‘ಕಮಿಟಿ ಆನ್ ಅರ್ಥ್ ಅಬ್ಸವೇಷನ್ ಸೆಟಲೈಟ್ಸ್– ಕೋಸ್ಟಲ್ ಅಬ್ಸರ್ವೇಷನ್ಸ್, ಅಪ್ಲಿಕೇಷನ್ಸ್, ಸರ್ವೀಸ್ ಅಂಡ್ ಟೂಲ್ಸ್ (ಸಿಇಒಎಸ್ ಸಿಒಎಎಸ್ಟಿ) ಎಂದು ಹೆಸರಿಸಲಾಗಿದೆ. ಈ ಯೋಜನೆಯ ಮೂಲಕ ವಿಶ್ವಸಂಸ್ಥೆ ಗೊತ್ತುಪಡಿಸಿರುವ 17 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಕೆಲವನ್ನು ಸಾಕಾರಗೊಳಿಸುವ ಉದ್ದೇಶವಿದೆ ಎಂದು ಎನ್ಒಎಎ ಬುಧವಾರ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.</p>.<p>ವಿಪತ್ತು ತಂದೊಡ್ಡುವ ಅಪಾಯಗಳನ್ನು ಕಡಿಮೆ ಮಾಡುವುದು ಮತ್ತು ಖಂಡಾಂತರ ತೀರ ಪ್ರದೇಶಗಳು ಮತ್ತು ಸಣ್ಣ ದ್ವೀಪ ರಾಷ್ಟ್ರಗಳಲ್ಲಿ ಸಂಭವಿಸುವ ಅಪಾಯಗಳನ್ನು ತಪ್ಪಿಸುವುದು ಈ ಯೋಜನೆಗಳ ಉದ್ದೇಶವಾಗಿದೆ.</p>.<p>‘ಈ ಯೋಜನೆಯಲ್ಲಿ, ಪ್ರವಾಹ, ಕರಾವಳಿ ಪರಿಸರದಲ್ಲಿ ಭೂಮಿಯ ಬಳಕೆ, ನೀರಿನ ಗುಣಮಟ್ಟ, ಭೂ ಕುಸಿತ ಸೇರಿದಂತೆ ಕಡಲಿನಿಂದ ಭೂಪ್ರದೇಶಕ್ಕೆ ಉಂಟಾಗುವ ಹಾನಿಯನ್ನು ಅಧ್ಯಯನ ಮಾಡುವುದು ಹಾಗೂ ಈ ಸಮಸ್ಯೆಗಳಿಗೆ ಈಗಿರುವ ಪರಿಹಾರ ಕಾರ್ಯವನ್ನು ಮತ್ತಷ್ಟು ಸುಧಾರಿಸುವ ಕುರಿತು ಅಧ್ಯಯನ ನಡೆಸಲಾಗುತ್ತದೆ‘ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್: </strong>ಉಪಗ್ರಹ ಆಧಾರಿತ ಕರಾವಳಿ ಪ್ರದೇಶದ ದತ್ತಾಂಶಗಳ ನಿಖರತೆ ಮತ್ತು ಭೂಮಿ ಆಧಾರಿತ ಅವಲೋಕನವನ್ನು ಸುಧಾರಿಸುವ ಭಾರತದ ಇಸ್ರೊ ಮತ್ತು ಅಮೆರಿಕದನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಪಿರಿಕ್ ಅಡ್ಮಿನಿಸ್ಟೇಷನ್ (ಎನ್ಒಎಎ) ಜಂಟಿಯಾಗಿ ರೂಪಿಸಿರುವ ಬಹುರಾಷ್ಟ್ರೀಯ ಯೋಜನೆಗೆ ವಿಶ್ವಸಂಸ್ಥೆ ಅನುಮೋದನೆ ನೀಡಿದೆ.</p>.<p>ಈ ಯೋಜನೆಗೆ ‘ಕಮಿಟಿ ಆನ್ ಅರ್ಥ್ ಅಬ್ಸವೇಷನ್ ಸೆಟಲೈಟ್ಸ್– ಕೋಸ್ಟಲ್ ಅಬ್ಸರ್ವೇಷನ್ಸ್, ಅಪ್ಲಿಕೇಷನ್ಸ್, ಸರ್ವೀಸ್ ಅಂಡ್ ಟೂಲ್ಸ್ (ಸಿಇಒಎಸ್ ಸಿಒಎಎಸ್ಟಿ) ಎಂದು ಹೆಸರಿಸಲಾಗಿದೆ. ಈ ಯೋಜನೆಯ ಮೂಲಕ ವಿಶ್ವಸಂಸ್ಥೆ ಗೊತ್ತುಪಡಿಸಿರುವ 17 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಕೆಲವನ್ನು ಸಾಕಾರಗೊಳಿಸುವ ಉದ್ದೇಶವಿದೆ ಎಂದು ಎನ್ಒಎಎ ಬುಧವಾರ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.</p>.<p>ವಿಪತ್ತು ತಂದೊಡ್ಡುವ ಅಪಾಯಗಳನ್ನು ಕಡಿಮೆ ಮಾಡುವುದು ಮತ್ತು ಖಂಡಾಂತರ ತೀರ ಪ್ರದೇಶಗಳು ಮತ್ತು ಸಣ್ಣ ದ್ವೀಪ ರಾಷ್ಟ್ರಗಳಲ್ಲಿ ಸಂಭವಿಸುವ ಅಪಾಯಗಳನ್ನು ತಪ್ಪಿಸುವುದು ಈ ಯೋಜನೆಗಳ ಉದ್ದೇಶವಾಗಿದೆ.</p>.<p>‘ಈ ಯೋಜನೆಯಲ್ಲಿ, ಪ್ರವಾಹ, ಕರಾವಳಿ ಪರಿಸರದಲ್ಲಿ ಭೂಮಿಯ ಬಳಕೆ, ನೀರಿನ ಗುಣಮಟ್ಟ, ಭೂ ಕುಸಿತ ಸೇರಿದಂತೆ ಕಡಲಿನಿಂದ ಭೂಪ್ರದೇಶಕ್ಕೆ ಉಂಟಾಗುವ ಹಾನಿಯನ್ನು ಅಧ್ಯಯನ ಮಾಡುವುದು ಹಾಗೂ ಈ ಸಮಸ್ಯೆಗಳಿಗೆ ಈಗಿರುವ ಪರಿಹಾರ ಕಾರ್ಯವನ್ನು ಮತ್ತಷ್ಟು ಸುಧಾರಿಸುವ ಕುರಿತು ಅಧ್ಯಯನ ನಡೆಸಲಾಗುತ್ತದೆ‘ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>