<p><strong>ಟೊಕಿಯೊ:</strong> ದಕ್ಷಿಣ ಜಪಾನ್ನಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ವಿಪತ್ತಿನ ಸಂಕೇತಗಳನ್ನು ರವಾನಿಸಿರುವ ಹಡಗಿನ (ಜಾನುವಾರು ಸಾಗಿಸುತ್ತಿದ್ದ) ಪತ್ತೆಗಾಗಿ ಜಪಾನಿನ ವಿಪತ್ತು ನಿರ್ವಹಣಾ ಸಿಬ್ಬಂದಿ ಶೋಧಕಾರ್ಯ ಆರಂಭಿಸಿದ್ದಾರೆ.</p>.<p>11,947 ಟನ್ ತೂಕದ ಗಲ್ಫ್ ಜಾನುವಾರು ಸಾಗಾಟ–1 ಹಡಗು 5,800 ದನಗಳನ್ನು ಪೂರ್ವ ಚೀನಾ ಸಮುದ್ರದ ಮೂಲಕ ಪಶ್ಚಿಮದಲ್ಲಿರುವ ಅಮಾಮಿ ಒಶಿಮಾದ ಪಶ್ಚಿಮ ಕರಾವಳಿ ಪ್ರದೇಶಕ್ಕೆ ಸಾಗಿಸುತ್ತಿದ್ದಾಗ ಅಪಾಯದ ಸೂಚನೆಯ ಸಂಕೇತಗಳನ್ನು ಕಳಿಸಿದೆ.</p>.<p>ಈ ನಡುವೆ ಬುಧವಾರಕರಾವಳಿ ಭದ್ರತಾ ಪಡೆಯವರು ಫಿಲಿಪಿನೊ ಎಂಬ ನೌಕಾ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಜಪಾನ್ನ ನೌಕಾಪಡೆ ಪಿ–3ಸಿ ಸರ್ವೇಲೆನ್ಸ್ ವಿಮಾನದ ಸಿಬ್ಬಂದಿಯು, ಜೀವರಕ್ಷಕ ಕವಚವನ್ನು ತೊಟ್ಟ ವ್ಯಕ್ತಿಯೊಬ್ಬ ಸಮುದ್ರದಲ್ಲಿ ಮುಳುಗೇಳುತ್ತಾ ಬೊಬ್ಬೆ ಹೊಡೆಯುತ್ತಿದ್ದನ್ನು ಗುರುತಿಸಿದ್ದಾರೆ.</p>.<p>ಈ ಹಡಗಿನಿಂದ ಅಪಾಯದ ಸಂಕೇತ ರವಾನೆಯಾಗಿರುವುದರ ಕಾರಣ ತಿಳಿದು ಬಂದಿಲ್ಲ. ಆದರೆ, ಮಯಾಸಾಕ್ ಚಂಡಮಾರುತದಿಂದ ಉಂಟಾಗಿದ್ದ ಪ್ರತಿಕೂಲ ಹವಾಮಾನ ಇದಕ್ಕೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಟೊಕಿಯೊ:</strong> ದಕ್ಷಿಣ ಜಪಾನ್ನಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ವಿಪತ್ತಿನ ಸಂಕೇತಗಳನ್ನು ರವಾನಿಸಿರುವ ಹಡಗಿನ (ಜಾನುವಾರು ಸಾಗಿಸುತ್ತಿದ್ದ) ಪತ್ತೆಗಾಗಿ ಜಪಾನಿನ ವಿಪತ್ತು ನಿರ್ವಹಣಾ ಸಿಬ್ಬಂದಿ ಶೋಧಕಾರ್ಯ ಆರಂಭಿಸಿದ್ದಾರೆ.</p>.<p>11,947 ಟನ್ ತೂಕದ ಗಲ್ಫ್ ಜಾನುವಾರು ಸಾಗಾಟ–1 ಹಡಗು 5,800 ದನಗಳನ್ನು ಪೂರ್ವ ಚೀನಾ ಸಮುದ್ರದ ಮೂಲಕ ಪಶ್ಚಿಮದಲ್ಲಿರುವ ಅಮಾಮಿ ಒಶಿಮಾದ ಪಶ್ಚಿಮ ಕರಾವಳಿ ಪ್ರದೇಶಕ್ಕೆ ಸಾಗಿಸುತ್ತಿದ್ದಾಗ ಅಪಾಯದ ಸೂಚನೆಯ ಸಂಕೇತಗಳನ್ನು ಕಳಿಸಿದೆ.</p>.<p>ಈ ನಡುವೆ ಬುಧವಾರಕರಾವಳಿ ಭದ್ರತಾ ಪಡೆಯವರು ಫಿಲಿಪಿನೊ ಎಂಬ ನೌಕಾ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಜಪಾನ್ನ ನೌಕಾಪಡೆ ಪಿ–3ಸಿ ಸರ್ವೇಲೆನ್ಸ್ ವಿಮಾನದ ಸಿಬ್ಬಂದಿಯು, ಜೀವರಕ್ಷಕ ಕವಚವನ್ನು ತೊಟ್ಟ ವ್ಯಕ್ತಿಯೊಬ್ಬ ಸಮುದ್ರದಲ್ಲಿ ಮುಳುಗೇಳುತ್ತಾ ಬೊಬ್ಬೆ ಹೊಡೆಯುತ್ತಿದ್ದನ್ನು ಗುರುತಿಸಿದ್ದಾರೆ.</p>.<p>ಈ ಹಡಗಿನಿಂದ ಅಪಾಯದ ಸಂಕೇತ ರವಾನೆಯಾಗಿರುವುದರ ಕಾರಣ ತಿಳಿದು ಬಂದಿಲ್ಲ. ಆದರೆ, ಮಯಾಸಾಕ್ ಚಂಡಮಾರುತದಿಂದ ಉಂಟಾಗಿದ್ದ ಪ್ರತಿಕೂಲ ಹವಾಮಾನ ಇದಕ್ಕೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>