<p><strong>ಯಾಂಗೊನ್:</strong> ಪ್ರಜಾಪ್ರಭುತ್ವದ ಪರವಾಗಿ, ಮಿಲಿಟರಿ ಆಡಳಿತ ವಿರೋಧಿಸಿ ಮ್ಯಾನ್ಮಾರ್ನಲ್ಲಿ ಜನರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮತ್ತೆ ರಕ್ತಪಾತವಾಗಿದೆ. ಶನಿವಾರ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದ್ದು, ಕನಿಷ್ಠ 82 ಜನರ ಹತ್ಯೆ ಮಾಡಿರುವುದು ವರದಿಯಾಗಿದೆ.</p>.<p>ಫೆಬ್ರುವರಿಯ ಮಿಲಿಟರಿ ದಂಗೆಯ ನಂತರ ಸುಮಾರು 701 ಪ್ರತಿಭಟನಾಕಾರರ ಹತ್ಯೆಯಾಗಿರುವುದು ಸ್ಥಳೀಯ ಮಾಧ್ಯಮ ವರದಿಗಳಿಂದ ತಿಳಿದು ಬಂದಿದೆ. ಮಾರ್ಚ್ 14ರ ನಂತರ ಬಗೋ ನಗರದಲ್ಲಿ ಅತಿ ಹೆಚ್ಚು ಪ್ರತಿಭಟನಾಕಾರರನ್ನು ಕೊಲ್ಲಲಾಗಿದೆ.</p>.<p>ಬಗೋದಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಭದ್ರತಾ ಪಡೆಗಳು ಶವಗಳನ್ನು ಸಂಗ್ರಹಿಸಿ ಬೌದ್ಧ ಮಂದಿರದ ಮೈದಾನದಲ್ಲಿ ಹಾಕಿವೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.</p>.<p>ಗ್ರೆನೇಡ್ಗಳು, ಮಾರ್ಟರ್ಗಳು ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಗಳನ್ನು ಬಳಸಿ ಭದ್ರತಾ ಪಡೆಗಳು ಜನರ ಮೇಲೆ ದಾಳಿ ಮಾಡಿರುವುದಾಗಿ ಆರೋಪಿಸಲಾಗಿದೆ.</p>.<p>ಕೆಲವು ಪ್ರತಿಭಟನಾಕಾರರು ಆತ್ಮ ರಕ್ಷಣೆಯ ನಿಟ್ಟಿನಲ್ಲಿ ಫೈರ್ಬಾಂಬ್ಗಳು, ಬೇಟೆಗೆ ಬಳಸುವ ರೈಫಲ್ಗಳನ್ನು ಹಿಡಿದು ಹೋರಾಟಗಳಲ್ಲಿ ಮುನ್ನಡೆದಿದ್ದಾರೆ. ಕಲಾಯ್ ಪ್ರದೇಶದಲ್ಲಿ ಮಿಲಿಟರಿ ಪಡೆಯ ವಿರುದ್ಧ ಬೇಟೆಯ ರೈಫಲ್ಗಳನ್ನು ಬಳಸಿ, ಮೂವರು ಯೋಧರ ಹತ್ಯೆ ಮಾಡಿರುವುದು ವರದಿಯಾಗಿದೆ.</p>.<p>ಕಾನೂನು ಸುವ್ಯವಸ್ಥೆ, ದೇಶದ ಸ್ಥಿರತೆ ಅಭದ್ರವಾಗಲು ಹರಡುತ್ತಿರುವ ಮಾಹಿತಿಯೇ ಕಾರಣವೆಂದು ಆರೋಪಿಸಿ, ಇತ್ತೀಷೆಗಷ್ಟೇ ಮಿಲಿಟರಿ ಆಡಳಿತವು ಕಲೆ ಮತ್ತು ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ 140 ಜನರ ವಾಂಟೆಡ್ ಪಟ್ಟಿ ಪ್ರಕಟಿಸಿದೆ. ಅವರ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಲಾಗಿದೆ.</p>.<p>ಯಾಂಗೊನ್ನಲ್ಲಿ ಮಾರ್ಚ್ 27ರಂದು ಮಿಲಿಟರಿ ಅಧಿಕಾರಿಯ ಹತ್ಯೆಗೆ ಸಂಬಂಧಿಸಿದಂತೆ ಸೇನಾ ನ್ಯಾಯಾಲಯವು 19 ಜನರಿಗೆ ಮರಣದಂಡನೆ ವಿಧಿಸಿರುವುದಾಗಿ ಸರ್ಕಾರ ಸ್ವಾಮ್ಯದ ಎಂಆರ್ಟಿವಿ ಚಾನೆಲ್ ಶುಕ್ರವಾರ ವರದಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾಂಗೊನ್:</strong> ಪ್ರಜಾಪ್ರಭುತ್ವದ ಪರವಾಗಿ, ಮಿಲಿಟರಿ ಆಡಳಿತ ವಿರೋಧಿಸಿ ಮ್ಯಾನ್ಮಾರ್ನಲ್ಲಿ ಜನರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮತ್ತೆ ರಕ್ತಪಾತವಾಗಿದೆ. ಶನಿವಾರ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದ್ದು, ಕನಿಷ್ಠ 82 ಜನರ ಹತ್ಯೆ ಮಾಡಿರುವುದು ವರದಿಯಾಗಿದೆ.</p>.<p>ಫೆಬ್ರುವರಿಯ ಮಿಲಿಟರಿ ದಂಗೆಯ ನಂತರ ಸುಮಾರು 701 ಪ್ರತಿಭಟನಾಕಾರರ ಹತ್ಯೆಯಾಗಿರುವುದು ಸ್ಥಳೀಯ ಮಾಧ್ಯಮ ವರದಿಗಳಿಂದ ತಿಳಿದು ಬಂದಿದೆ. ಮಾರ್ಚ್ 14ರ ನಂತರ ಬಗೋ ನಗರದಲ್ಲಿ ಅತಿ ಹೆಚ್ಚು ಪ್ರತಿಭಟನಾಕಾರರನ್ನು ಕೊಲ್ಲಲಾಗಿದೆ.</p>.<p>ಬಗೋದಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಭದ್ರತಾ ಪಡೆಗಳು ಶವಗಳನ್ನು ಸಂಗ್ರಹಿಸಿ ಬೌದ್ಧ ಮಂದಿರದ ಮೈದಾನದಲ್ಲಿ ಹಾಕಿವೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.</p>.<p>ಗ್ರೆನೇಡ್ಗಳು, ಮಾರ್ಟರ್ಗಳು ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಗಳನ್ನು ಬಳಸಿ ಭದ್ರತಾ ಪಡೆಗಳು ಜನರ ಮೇಲೆ ದಾಳಿ ಮಾಡಿರುವುದಾಗಿ ಆರೋಪಿಸಲಾಗಿದೆ.</p>.<p>ಕೆಲವು ಪ್ರತಿಭಟನಾಕಾರರು ಆತ್ಮ ರಕ್ಷಣೆಯ ನಿಟ್ಟಿನಲ್ಲಿ ಫೈರ್ಬಾಂಬ್ಗಳು, ಬೇಟೆಗೆ ಬಳಸುವ ರೈಫಲ್ಗಳನ್ನು ಹಿಡಿದು ಹೋರಾಟಗಳಲ್ಲಿ ಮುನ್ನಡೆದಿದ್ದಾರೆ. ಕಲಾಯ್ ಪ್ರದೇಶದಲ್ಲಿ ಮಿಲಿಟರಿ ಪಡೆಯ ವಿರುದ್ಧ ಬೇಟೆಯ ರೈಫಲ್ಗಳನ್ನು ಬಳಸಿ, ಮೂವರು ಯೋಧರ ಹತ್ಯೆ ಮಾಡಿರುವುದು ವರದಿಯಾಗಿದೆ.</p>.<p>ಕಾನೂನು ಸುವ್ಯವಸ್ಥೆ, ದೇಶದ ಸ್ಥಿರತೆ ಅಭದ್ರವಾಗಲು ಹರಡುತ್ತಿರುವ ಮಾಹಿತಿಯೇ ಕಾರಣವೆಂದು ಆರೋಪಿಸಿ, ಇತ್ತೀಷೆಗಷ್ಟೇ ಮಿಲಿಟರಿ ಆಡಳಿತವು ಕಲೆ ಮತ್ತು ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ 140 ಜನರ ವಾಂಟೆಡ್ ಪಟ್ಟಿ ಪ್ರಕಟಿಸಿದೆ. ಅವರ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಲಾಗಿದೆ.</p>.<p>ಯಾಂಗೊನ್ನಲ್ಲಿ ಮಾರ್ಚ್ 27ರಂದು ಮಿಲಿಟರಿ ಅಧಿಕಾರಿಯ ಹತ್ಯೆಗೆ ಸಂಬಂಧಿಸಿದಂತೆ ಸೇನಾ ನ್ಯಾಯಾಲಯವು 19 ಜನರಿಗೆ ಮರಣದಂಡನೆ ವಿಧಿಸಿರುವುದಾಗಿ ಸರ್ಕಾರ ಸ್ವಾಮ್ಯದ ಎಂಆರ್ಟಿವಿ ಚಾನೆಲ್ ಶುಕ್ರವಾರ ವರದಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>