<p>ಬಾಳೆ ಕಟಾವಾದ ಮೇಲೆ ಉಳಿಯುವ ದಿಂಡಿನಲ್ಲಿ ಪೊಟ್ಯಾಷ್ ಹೆಚ್ಚಿರುತ್ತದೆ. ಕಬ್ಬಿನ ಹಾಲು ತೆಗೆಯುವ ರೀತಿ ಬಾಳೆ ದಿಂಡಿನ ಸಾರವನ್ನೂ ತೆಗೆದು ಬಹುತೇಕ ಎಲ್ಲ ಬೆಳೆಗಳಿಗೂ ನೀಡಬಹುದು. ಹೀಗೆ ತೆಗೆದ ರಸವನ್ನು ‘ಕದಳೀ ಸಾರ’ ಎನ್ನಬಹುದು. ಎಕರೆ ಬಾಳೆ ತ್ಯಾಜ್ಯದಿಂದ (ದಿಂಡು) 4500-6000 ಲೀಟರ್ ಕದಳೀ ಸಾರ ತೆಗೆಯಬಹುದು.</p>.<p class="Briefhead"><strong>ಕದಳೀ ಸಾರ ಬಳಕೆ ಹೇಗೆ?</strong></p>.<p><span class="Bullet">l</span> ಹನಿ ನೀರಾವರಿ ಮೂಲಕ (ಎಕರೆಗೆ 50-100 ಲೀಟರ್)</p>.<p><span class="Bullet">l</span> ಸಿಂಪಡಣೆ (15-20 ಮಿ.ಲೀ/ಲೀ)</p>.<p><span class="Bullet">l</span> ತರಕಾರಿ/ಧಾನ್ಯದ ಬೆಳೆಗಳಿಗೆ ಹೂ ಬಂದ ನಂತರ ಕೊಟ್ಟರೆ ಹೆಚ್ಚು ಪ್ರಯೋಜನ</p>.<p><span class="Bullet">l</span> ಪ್ಲಾಂಟೇಶನ್ ಬೆಳೆಗಳಿಗೆ ನಿಯಮಿತವಾಗಿ ತಿಂಗಳಿಗೊಮ್ಮೆಯಾದರೂ ಕೊಡಬೇಕು</p>.<p><span class="Bullet">l</span> ವೇಸ್ಟ್ ಡಿಕಂಪೋಸರ್, ಜೀವಾಮೃತ, ಪಂಚಗವ್ಯಗಳೊಂದಿಗೆ ಬೆರೆಸಿಯೂ ಕೊಡಬಹುದು.</p>.<p><span class="Bullet">l</span> ಕೊಡುವ ಪ್ರಮಾಣ ಹೆಚ್ಚಾದರೂ ದುಷ್ಪರಿಣಾಮ ಇಲ್ಲ.</p>.<p><span class="Bullet">l</span> ನೆನಪಿರಲಿ; ದಿಂಡಿನ ರಸ ತೆಗೆದ ನಂತರ ಅದನ್ನು ಮೂರು ದಿನಗಳೊಳಗೆ ಬಳಸಬೇಕು.</p>.<p class="Briefhead">ಬಳಕೆಯಿಂದಾಗುವ ಅನುಕೂಲಗಳು</p>.<p><span class="Bullet">l</span> ಪೊಟ್ಯಾಷ್, ಕಬ್ಬಿಣ ಹಾಗೂ ಕೆಲ ಬೆಳೆ ಪ್ರಚೋದಕಗಳು ಕದಳೀ ಸಾರದಲ್ಲಿವೆ.</p>.<p><span class="Bullet">l</span> ಬೆಳೆಗೆ ನೀಡುವ ಪೊಟ್ಯಾಷ್ ಪ್ರಮಾಣವನ್ನು ಶೇ 20-25 ರಷ್ಟು ಕಡಿಮೆ ಮಾಡಬಹುದು.</p>.<p><span class="Bullet">l</span> ರೋಗ ನಿರೋಧಕ ಶಕ್ತಿ ಸಹಜವಾಗಿ ಹೆಚ್ಚಾಗುವುದು.</p>.<p><span class="Bullet">l</span> ಸಾವಯವ ಕೃಷಿಯಲ್ಲಿ ಪೊಟ್ಯಾಷ್ ಮೂಲವಾಗಿ ಬಳಸಬಹುದು.</p>.<p><span class="Bullet">l</span> ಬೆಳೆಯ ಕೆಲವು ಲಘುಪೋಷಕಾಂಶಗಳ ಕೊರತೆ ನಿವಾರಣೆ ಸಾಧ್ಯ.</p>.<p><span class="Bullet">l</span> ದ್ರಾವಣ ರೂಪದಲ್ಲಿರುವುದರಿಂದ ಬೆಳೆಗೆ ಸುಲಭವಾಗಿ ಪೊಟ್ಯಾಷ್ ಪೂರೈಕೆಯಾಗುವುದು.</p>.<p>‘ದಿಂಡಿನ ರಸ ಬಾಳ ಛಲೋ ಐತಿ, ನಾನು ನಾಲ್ಕೈದು ವರ್ಷಗಳಿಂದ ಬೆಳೆಯುವ ಎಲ್ಲಾ ಬೆಳೆಗಳಿಗೂ ಬಳಸುತ್ತಿರುವೆ, ರಿಸಲ್ಟ್ ಫಸ್ಟ್ ಕ್ಲಾಸ್’ ಎನ್ನುತ್ತಾರೆ ದಿಂಡಿನ ರಸ ಬಳಸುತ್ತಿರುವ ಹುಕ್ಕೇರಿಯ ರೈತ ಭರಮಪ್ಪ ಬಾಳೀಕಾಯಿ ಅವರು..</p>.<p>ಗುಜರಾತಿನ ನವಸಾರಿ ಕೃಷಿ ವಿಜ್ಞಾನ ಕೇಂದ್ರದವರು ಕದಳೀ ರಸ ಬಳಸಿ ಮಾಡಿರುವ ಮೌಲ್ಯವರ್ಧಿತ ಉತ್ಪನ್ನಕ್ಕೆ ಪೇಟೆಂಟ್ ಸಿಕ್ಕಿದೆ. ನಮಗೆ ಪೇಟೆಂಟ್ ಬೇಡ, ತ್ಯಾಜ್ಯದ ಸಮರ್ಪಕ ಬಳಕೆ, ಪೊಟ್ಯಾಷ್ ಗೊಬ್ಬರದ ಉಳಿಕೆ, ಉತ್ತಮ ಫಸಲು ಬಂದರೆ ಸಾಕಲ್ಲವೇ?</p>.<p>ಹೆಚ್ಚಿನ ಮಾಹಿತಿಗೆ ಬಾಳೀಕಾಯಿ (9972637269) ಅಥವಾ ಹರೀಶ್ (9480557634) ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾಳೆ ಕಟಾವಾದ ಮೇಲೆ ಉಳಿಯುವ ದಿಂಡಿನಲ್ಲಿ ಪೊಟ್ಯಾಷ್ ಹೆಚ್ಚಿರುತ್ತದೆ. ಕಬ್ಬಿನ ಹಾಲು ತೆಗೆಯುವ ರೀತಿ ಬಾಳೆ ದಿಂಡಿನ ಸಾರವನ್ನೂ ತೆಗೆದು ಬಹುತೇಕ ಎಲ್ಲ ಬೆಳೆಗಳಿಗೂ ನೀಡಬಹುದು. ಹೀಗೆ ತೆಗೆದ ರಸವನ್ನು ‘ಕದಳೀ ಸಾರ’ ಎನ್ನಬಹುದು. ಎಕರೆ ಬಾಳೆ ತ್ಯಾಜ್ಯದಿಂದ (ದಿಂಡು) 4500-6000 ಲೀಟರ್ ಕದಳೀ ಸಾರ ತೆಗೆಯಬಹುದು.</p>.<p class="Briefhead"><strong>ಕದಳೀ ಸಾರ ಬಳಕೆ ಹೇಗೆ?</strong></p>.<p><span class="Bullet">l</span> ಹನಿ ನೀರಾವರಿ ಮೂಲಕ (ಎಕರೆಗೆ 50-100 ಲೀಟರ್)</p>.<p><span class="Bullet">l</span> ಸಿಂಪಡಣೆ (15-20 ಮಿ.ಲೀ/ಲೀ)</p>.<p><span class="Bullet">l</span> ತರಕಾರಿ/ಧಾನ್ಯದ ಬೆಳೆಗಳಿಗೆ ಹೂ ಬಂದ ನಂತರ ಕೊಟ್ಟರೆ ಹೆಚ್ಚು ಪ್ರಯೋಜನ</p>.<p><span class="Bullet">l</span> ಪ್ಲಾಂಟೇಶನ್ ಬೆಳೆಗಳಿಗೆ ನಿಯಮಿತವಾಗಿ ತಿಂಗಳಿಗೊಮ್ಮೆಯಾದರೂ ಕೊಡಬೇಕು</p>.<p><span class="Bullet">l</span> ವೇಸ್ಟ್ ಡಿಕಂಪೋಸರ್, ಜೀವಾಮೃತ, ಪಂಚಗವ್ಯಗಳೊಂದಿಗೆ ಬೆರೆಸಿಯೂ ಕೊಡಬಹುದು.</p>.<p><span class="Bullet">l</span> ಕೊಡುವ ಪ್ರಮಾಣ ಹೆಚ್ಚಾದರೂ ದುಷ್ಪರಿಣಾಮ ಇಲ್ಲ.</p>.<p><span class="Bullet">l</span> ನೆನಪಿರಲಿ; ದಿಂಡಿನ ರಸ ತೆಗೆದ ನಂತರ ಅದನ್ನು ಮೂರು ದಿನಗಳೊಳಗೆ ಬಳಸಬೇಕು.</p>.<p class="Briefhead">ಬಳಕೆಯಿಂದಾಗುವ ಅನುಕೂಲಗಳು</p>.<p><span class="Bullet">l</span> ಪೊಟ್ಯಾಷ್, ಕಬ್ಬಿಣ ಹಾಗೂ ಕೆಲ ಬೆಳೆ ಪ್ರಚೋದಕಗಳು ಕದಳೀ ಸಾರದಲ್ಲಿವೆ.</p>.<p><span class="Bullet">l</span> ಬೆಳೆಗೆ ನೀಡುವ ಪೊಟ್ಯಾಷ್ ಪ್ರಮಾಣವನ್ನು ಶೇ 20-25 ರಷ್ಟು ಕಡಿಮೆ ಮಾಡಬಹುದು.</p>.<p><span class="Bullet">l</span> ರೋಗ ನಿರೋಧಕ ಶಕ್ತಿ ಸಹಜವಾಗಿ ಹೆಚ್ಚಾಗುವುದು.</p>.<p><span class="Bullet">l</span> ಸಾವಯವ ಕೃಷಿಯಲ್ಲಿ ಪೊಟ್ಯಾಷ್ ಮೂಲವಾಗಿ ಬಳಸಬಹುದು.</p>.<p><span class="Bullet">l</span> ಬೆಳೆಯ ಕೆಲವು ಲಘುಪೋಷಕಾಂಶಗಳ ಕೊರತೆ ನಿವಾರಣೆ ಸಾಧ್ಯ.</p>.<p><span class="Bullet">l</span> ದ್ರಾವಣ ರೂಪದಲ್ಲಿರುವುದರಿಂದ ಬೆಳೆಗೆ ಸುಲಭವಾಗಿ ಪೊಟ್ಯಾಷ್ ಪೂರೈಕೆಯಾಗುವುದು.</p>.<p>‘ದಿಂಡಿನ ರಸ ಬಾಳ ಛಲೋ ಐತಿ, ನಾನು ನಾಲ್ಕೈದು ವರ್ಷಗಳಿಂದ ಬೆಳೆಯುವ ಎಲ್ಲಾ ಬೆಳೆಗಳಿಗೂ ಬಳಸುತ್ತಿರುವೆ, ರಿಸಲ್ಟ್ ಫಸ್ಟ್ ಕ್ಲಾಸ್’ ಎನ್ನುತ್ತಾರೆ ದಿಂಡಿನ ರಸ ಬಳಸುತ್ತಿರುವ ಹುಕ್ಕೇರಿಯ ರೈತ ಭರಮಪ್ಪ ಬಾಳೀಕಾಯಿ ಅವರು..</p>.<p>ಗುಜರಾತಿನ ನವಸಾರಿ ಕೃಷಿ ವಿಜ್ಞಾನ ಕೇಂದ್ರದವರು ಕದಳೀ ರಸ ಬಳಸಿ ಮಾಡಿರುವ ಮೌಲ್ಯವರ್ಧಿತ ಉತ್ಪನ್ನಕ್ಕೆ ಪೇಟೆಂಟ್ ಸಿಕ್ಕಿದೆ. ನಮಗೆ ಪೇಟೆಂಟ್ ಬೇಡ, ತ್ಯಾಜ್ಯದ ಸಮರ್ಪಕ ಬಳಕೆ, ಪೊಟ್ಯಾಷ್ ಗೊಬ್ಬರದ ಉಳಿಕೆ, ಉತ್ತಮ ಫಸಲು ಬಂದರೆ ಸಾಕಲ್ಲವೇ?</p>.<p>ಹೆಚ್ಚಿನ ಮಾಹಿತಿಗೆ ಬಾಳೀಕಾಯಿ (9972637269) ಅಥವಾ ಹರೀಶ್ (9480557634) ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>