ಬೆಂಗಳೂರು: ಕವಿ ಆರ್. ವಿಜಯರಾಘವನ್ ಮತ್ತು ಕವಯತ್ರಿ ಅಕ್ಷತಾ ಹುಂಚದಕಟ್ಟೆ ಅವರಿಗೆ 2015ರ ಡಾ.ಪು.ತಿ.ನ. ಕಾವ್ಯ ಪುರಸ್ಕಾರ ಲಭಿಸಿದೆ.
ವಿಜಯರಾಘವನ್ ಅವರ ‘ಅನುಸಂಧಾನ’ ಕವನ ಸಂಕಲನಕ್ಕೆ ಹಾಗೂ ಅಕ್ಷತಾ ಅವರ ‘ನೀರಮೇಲಣ ಗುಳ್ಳೆ’ ಕವನ ಸಂಕಲನಕ್ಕೆ ಪ್ರಶಸ್ತಿ ದೊರೆತಿದೆ. ಪ್ರಶಸ್ತಿಯು ₹ 25 ಸಾವಿರ ಮೊತ್ತವನ್ನೊಳಗೊಂಡಿದೆ ಎಂದು ಡಾ.ಪು.ತಿ.ನ. ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 25ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ವಿಜಯರಾಘವನ್ ವಿಮರ್ಶಕರಾಗಿ, ಅನುವಾದಕರಾಗಿಯೂ ಪ್ರಸಿದ್ಧರು. ಅಕ್ಷತಾ ತಮ್ಮ ‘ಅರ್ಹನಿಶಿ’ ಪ್ರಕಾಶನದ ಮೂಲಕ ಹಲವು ಮೌಲಿಕ ಕೃತಿಗಳನ್ನು ಪ್ರಕಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.