ಕೃತಿಯ ಲೇಖಕರಾದ ಜಯರಾಮಾಚಾರಿ ಪ್ರಾರಂಭದಲ್ಲಿಯೇ ಹಂಸಲೇಖ ಹಾಡುಗಳ ಕುರಿತಾಗಿ ತಮಗಂಟಿದ ಗೀಳಿನ ಕುರಿತು ಹೇಳುತ್ತ, ‘ಈ ನಿಂಬೆ ಹಣ್ಣಿನಂತಾ ಹುಡುಗಿ ಬಂದ್ಳು...’, ‘ಬಂತು ಬಂತು ಬಂತು ಕರೆಂಟು ಬಂತು...’ ಮೊದಲಾದ ಗೀತೆಗಳನ್ನು ನೆನಪಿಸುತ್ತ ಹೋಗುತ್ತಾರೆ. ಕೃತಿಯಲ್ಲಿ ಹದಿನೈದು ಲೇಖನಗಳಿದ್ದು, ಹಂಸಲೇಖ ಸಾಹಿತ್ಯಕ್ಕಿರುವ ಶಕ್ತಿಯನ್ನು, ಅನೇಕ ಪದಗಳ ಒಳಾರ್ಥವನ್ನು ಕಟ್ಟಿಕೊಡುವ ಪ್ರಯತ್ನವಿದೆ.