ನೀರಿನಿಂದ ಪ್ರಾರಂಭವಾಗಿ ರೈತರ ಆತ್ಮಹತ್ಯೆ, ಸಾವಯವ ಕೃಷಿ, ಹಸಿರುಬೇಲಿ, ಕೃಷಿಯಲ್ಲಿನ ಕೆಲವು ಬೇಡವುಗಳು, ವಿಶಿಷ್ಟ ಬೇಸಾಯ ಪದ್ಧತಿಗಳು, ಕೃಷಿಕರ ಅನುಭವಗಳು ಹಾಗೂ ಅವರ ಪುಟ್ಟ ಸಂದರ್ಶನಗಳು... ಹೀಗೆ ಕೃಷಿಯಲ್ಲಿರುವ ವೈವಿಧ್ಯವನ್ನೇ ಇಲ್ಲಿನ ಬರಹಗಳಲ್ಲೂ ಕಾಣಬಹುದು. ಪ್ರಸ್ತುತ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿರುವ ಕೃಷ್ಣಮೂರ್ತಿ ಬಿಳಿಗೆರೆಯವರು ಸಾವಯವ ಕೃಷಿ ಮತ್ತು ಮಳೆನೀರಿನ ಚಳವಳಿಗಳಲ್ಲಿ ಕ್ರಿಯಾಶೀಲರಾಗಿರುವವರು. ಮಕ್ಕಳ ನಾಟಕಗಳು, ಮಕ್ಕಳ ಕಥೆ, ಹಾಡುಗಳ ಸಾಹಿತ್ಯಕೃಷಿಯಲ್ಲಿ ತೊಡಗಿದ್ದ ಇವರು ಕೆಲ ಕೃಷಿ ಸಾಹಿತ್ಯಕ್ಕೂ ಲೇಖನಿ ಹಿಡಿದಿದ್ದಾರೆ. ಮಣ್ಣಿನ ಜೊತೆಗಿನ ನಂಟು ಇವರನ್ನು ಹೊಲ–ಗದ್ದೆ–ತೋಟಗಳಲ್ಲಿ ಸುತ್ತಾಡಿಸಿದೆ.