ಆಕಾಶವಾಣಿ ಕಲಾವಿದರಾಗಿ ದೊಡ್ಡ ಹೆಸರು ಮಾಡಿದ್ದಾರೆ. ಕತೆ, ಕವನ, ಕಾದಂಬರಿಯನ್ನೂ ಬರೆದು ಸಾಹಿತಿ ಎನಿಸಿಕೊಂಡಿದ್ದಾರೆ. ಹಲವು ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಿ ನಟ ಎನಿಸಿಕೊಂಡಿದ್ದಾರೆ. ಸುಂದರ ಧ್ವನಿಯ ಮೂಲಕ ಅವರು ಜನರಿಗೆ ಇಷ್ಟವಾಗಿದ್ದಾರೆ. ವೀಣಾವಾದಕರಾಗಿಯೂ ಗುರುತಿಸಿಕೊಂಡಿದ್ದಾರೆ. ಸಂಗೀತ ರಿಯಾಲಿಟಿ ಶೋಗಳಲ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿರುವ ಅವರು ಸ್ಪರ್ಧಿಗಳ ಸ್ಫೂರ್ತಿಯಾಗಿದ್ದಾರೆ. ಇಂತಹ ಸುಚೇತನ ರಂಗಸ್ವಾಮಿ ಅವರ ಹಿತಾನುಭವ ಈ ವಾರದ ಜಸ್ಟ್ ಮ್ಯೂಸಿಕ್ ಸರಣಿಯಲ್ಲಿದೆ.