ಹೆಸರೇ ಸೂಚಿಸುವಂತೆ ಕಪಿಲಾ ತಳಿಯ ಆಕಳು ಕುರಿತ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ. ಆಕಳುಗಳಲ್ಲೆಲ್ಲ ಕಪಿಲಾ ತಳಿಯ ಆಕಳುಗಳು ತುಂಬಾ ಶ್ರೇಷ್ಠ ಎಂದು ಪ್ರತಿಪಾದಿಸುವ ಲೇಖಕರು, ಅದರ ಕ್ಷೀರವನ್ನು ಅಮೃತಕ್ಕೆ ಹೋಲಿಸಿದ್ದಾರೆ. ಈ ಕ್ಷೀರವು ವಾತ, ಪಿತ್ತ, ಕಫ ದೋಷವನ್ನು ನಿವಾರಿಸುವ ಸಾಮರ್ಥ್ಯ ಹೊಂದಿದೆ. ಕಪಿಲೆಯ ಹಾಲು ವಿವೇಕವನ್ನೂ ಬುದ್ಧಿಯನ್ನೂ ಬೆಳೆಸುತ್ತದೆ. ಅಂಗಸೌಷ್ಟವ ವೃದ್ಧಿಗೂ ಸಹಕಾರಿಯಾಗಿದೆ ಎಂದು ವಿವರಿಸುತ್ತಾರೆ. ಕಪಿಲಾ ತಳಿಯಲ್ಲಿರುವ ಗೌರಶಬಲಾ, ಗೌರಪಿಂಗಲಾ, ರಕ್ತಕಪಿಲಾ, ನೀಲಪಾಟಲಾ, ನೀಲಪಿಂಗಾಕ್ಷಿ, ರಕ್ತಪಿಂಗಲಾ, ಬಹುಪಿಂಗಾಕ್ಷಿ, ನೀಲರೋಹಿಣಿ, ಶ್ವೇತಪಿಂಗಾಕ್ಷಿ, ಶ್ವೇತಪಿಂಗಲಾ ಪ್ರಭೇದಗಳ ಸಚಿತ್ರ ಮಾಹಿತಿಯನ್ನೂ ನೀಡಿದ್ದಾರೆ.