ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿ: ಶಿರೋಮಣಿ - ಬದುಕಿನ ಮಜಲು ಕಾಣಿಸುವ ಮಣಿ

Last Updated 21 ಜನವರಿ 2023, 22:00 IST
ಅಕ್ಷರ ಗಾತ್ರ

ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರಾದ ಪ್ರೊ.ಅಂಬಾಮಣಿ ಮೂರ್ತಿಯವರ ಬದುಕು, ಬರಹವನ್ನು ಸಮಗ್ರವಾಗಿ ಕಟ್ಟಿಕೊಟ್ಟಿದೆ ಶಿರೋಮಣಿ. ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳು, ಪ್ರೊ.ಮೂರ್ತಿಯವರ ಕುರಿತು ಅಭಿಮಾನದ ನುಡಿಗಳು, ಕಾವ್ಯಗಳು, ಜೀವನದ ಮಜಲುಗಳ ಗುಣಗಾನದ ಬರಹಗಳು ಕೃತಿಯಲ್ಲಿವೆ.

ಲೇಖಕಿಯವರ ಬಾಲ್ಯದ ನೆನಪುಗಳು, ಬೆಳವಣಿಗೆ, ಶಿಕ್ಷಣ, ವೃತ್ತಿ ಬದುಕು ಇತ್ಯಾದಿ ಅವರ ಆತ್ಮಕಥನ ಭಾಗದಲ್ಲಿವೆ. ಕ್ಯಾನ್ಸರ್‌ ಕುತ್ತಿನಿಂದ ಪಾರಾದ ಸನ್ನಿವೇಶವಂತೂ ಮನಸ್ಸು ತಟ್ಟುತ್ತದೆ. ಕವನಗಳನ್ನು ಬರೆಯುತ್ತಿದ್ದ ಲೇಖಕಿ ಮುಂದೆ ಪ್ರಚಲಿತ ವಿಷಯಗಳ ಬಗ್ಗೆ ಪ್ರಬಲವಾಗಿ ಧ್ವನಿಯೆತ್ತುವ, ಅನ್ಯಾಯದ ವಿರುದ್ಧ ಪ್ರತಿಭಟಿಸುವ, ಸಿಡಿದೇಳುವ ಗುಣವನ್ನು ಬೆಳೆಸಿಕೊಂಡ, ಅದನ್ನು ಪ್ರಜಾವಾಣಿ ಸಹಿತ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಅಭಿವ್ಯಕ್ತಿಸಿದ ಬಗೆಗೂ ವಿವರಗಳಿವೆ. ನಾಡಿನ ಗಣ್ಯರ, ಖ್ಯಾತನಾಮರ, ಮಠಾಧೀಶರ ನುಡಿಗಳೂ ಕೃತಿಯಲ್ಲಿವೆ.

ಹೆಚ್ಚಿನ ಲೇಖನಗಳು ಅಂಬಾಮಣಿ ಅವರ ಕೃತಿಗಳನ್ನು, ಮಾಧ್ಯಮ ಬರಹಗಳನ್ನು ಪೂರ್ಣ ಓದಿ ವಿಶ್ಲೇಷಕ ನೋಟದಿಂದ ಬರೆದಂತಿವೆ. ಹಿರಿಯ ಲೇಖಕಿಯೊಬ್ಬರ ಜೀವನಗಾಥೆಯನ್ನು ಕಟ್ಟಿಕೊಡುವ ನೆಪದಲ್ಲಿ ಹಲವು ವೈಚಾರಿಕ ಹೊಳಹುಗಳನ್ನು ನಾಡಿನ ಪ್ರಮುಖ ಬರಗಾರರ ಮೂಲಕ ತೆರೆದಿಟ್ಟಿದೆ ಈ ಕೃತಿ.

ಕೃತಿ: ಶಿರೋಮಣಿ

ಪ್ರಧಾನ ಸಂ.: ಎಲ್‌.ಎನ್‌. ಮುಕುಂದರಾಜ್‌

ಪ್ರ:ಸ್ನೇಹಾ ಪಬ್ಲಿಷಿಂಗ್‌ ಹೌಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT