<p><strong>ಆಲದಮರ (ಪ್ರಜಾವಾಣಿ ಕ್ಲಬ್ ಹೌಸ್): </strong>ಹೆಚ್ಚಿನವರು ವಸಂತ ಮಾಸದ ಕವಿಗಳು. ದ.ರಾ. ಬೇಂದ್ರೆ ಅವರು ಶ್ರಾವಣದ ಕವಿ. ಕಿವಿಯನ್ನು ಕಣ್ಣಾಗಿಸಿ ಪ್ರಕೃತಿ, ಬದುಕನ್ನು ಆಸ್ವಾದಿಸಿದ ಕವಿ....</p>.<p>–ಇದು ಬೇಂದ್ರೆ ಕಾವ್ಯ ಪರಿಚಾರಕ ಡಾ.ಜಿ.ಕೃಷ್ಣಪ್ಪ ಅವರ ಭಾವುಕ ಮಾತು. ‘ಆಲದಮರ’ದ ಅಡಿಯಲ್ಲಿ ಭಾನುವಾರ ಬೆಳಿಗ್ಗೆಯಿಂದ ‘ಬೇಂದ್ರೆ ಹಾಡು–ಪಾಡು’ ಕಾರ್ಯಕ್ರಮದಲ್ಲಿ ಕಾವ್ಯದ ಸೋನೆ ಮಳೆಯೇ ಹರಿಯಿತು. ಶ್ರಾವಣ ಬಂತು ನಾಡಿಗೆ... ಹಾಡಿಗೆ ಗಾಯಕಿ ಎಂ.ಡಿ. ಪಲ್ಲವಿ ಅವರು ಧ್ವನಿಯಾಗಿ ನಾಂದಿ ಹಾಡಿದರು.</p>.<p>‘ಶ್ರಾವಣವನ್ನು ಧ್ಯಾನಿಸುವ ಕವಿ ಬೇಂದ್ರೆ. ರಸವೇ ಜೀವನ–ವಿರಸವೇ ಮರಣ–ಸಮರಸವೇ ಜೀವನ ಎಂಬ ಅನುಭಾವವನ್ನು ಜಗತ್ತಿಗೆ ಕೊಟ್ಟಿದ್ದಾರೆ’ ಎಂದು ಕೃಷ್ಣಪ್ಪ ನೆನಪಿಸಿದರು.</p>.<p>‘ಮೂಡಲ ಮನೆಯ ಮುತ್ತಿನ ನೀರಿನ ಎರಕವಾ ಹೊಯ್ದ...’ ಹಾಡು ಡಾ.ಶಮಿತಾ ಮಲ್ನಾಡ್ ಧ್ವನಿಯಲ್ಲಿ ಮೂಡಿಬಂದಿತು.</p>.<p>‘ಬೇಂದ್ರೆ ಅವರು ಶಬ್ದಗಳನ್ನು ಹೂವು, ತರಕಾರಿ ಮಾರುವವರು, ಶ್ರೀಸಾಮಾನ್ಯರಿಂದಲೇ ಪಡೆದಿದ್ದಾರೆ. ಹೀಗಾಗಿಯೇ ಅವರ ಕಾವ್ಯಸೃಷ್ಟಿ ಗಟ್ಟಿಯಾಗಿದೆ’ ಎಂದರುರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಪ್ರಹ್ಲಾದ ಬಿ. ಮಹಿಷಿ.</p>.<p>ಉಪರಾಷ್ಟ್ರಪತಿಗೆ ಹಾವು ತೋರಿಸಿದ್ದು!: ‘ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಹಾವಾಡಿಗನೊಬ್ಬನನ್ನು ಸಮಾರಂಭದ ಸ್ಥಳಕ್ಕೆ ಕರೆತಂದಿದ್ದ ಬೇಂದ್ರೆ ಅವರು, ವೈವಿಧ್ಯಮಯ ಹಾವುಗಳನ್ನು ಉಪರಾಷ್ಟ್ರಪತಿಯವರಿಗೆ ತೋರಿಸಬೇಕು ಎಂದು ಪಟ್ಟು ಹಿಡಿದಿದ್ದರು. ಕೊನೆಗೂ ಹಾವಾಡಿಗನಿಗೆ ಉಪರಾಷ್ಟ್ರಪತಿಯವರಿಗೆ ಹಾವು ತೋರಿಸಲು ಬಿಟ್ಟೆವು’ ಎಂದು ನೆನಪಿಸಿದರು ಪ್ರಹ್ಲಾದ ಮಹಿಷಿ.</p>.<p>‘ನೀ ಹಿಂಗ ನೋಡಬ್ಯಾಡ ನನ್ನ... ಈ ಹಾಡಿನ ಹಿಂದೆ ಬೇಂದ್ರೆಯವರ ಅಪಾರ ದುಃಖವಿದೆ. ಲಲಿತಾ ಎಂಬ ಮಗು ಸಾವಿನ ಅಂಚಿನಲ್ಲಿದ್ದಾಗ ಪುಣೆಯಿಂದ ಬರುತ್ತಿದ್ದ ಅವರು ಭಾವತೀವ್ರತೆಯಲ್ಲಿ ಬರೆದ ಹಾಡು ಅದು’ ಎಂದರು ಜಿ.ಕೃಷ್ಣಪ್ಪ.</p>.<p>‘ಬೇಂದ್ರೆ ಅವರಿಗೆ ಡಾಕ್ಟರೇಟ್ ಸಿಕ್ಕಾಗ, ನಾನು ಹುಟ್ತಾನೆ ಡಿ.ಆರ್. ಬೇಂದ್ರೆ (ದತ್ತಾತ್ರೇಯ ರಾಮಚಂದ್ರ ಬೇಂದ್ರೆ). ಇದರಲ್ಲೇನು ವಿಶೇಷ ಎಂದರಂತೆ’ ಎಂದು ಬೇಂದ್ರೆ ಮಾತನ್ನು ನೆನಪಿಸಿದರು ಪ್ರಹ್ಲಾದ ಮಹಿಷಿ.</p>.<p>ಗಾಯಕ ಬಸವಲಿಂಗಯ್ಯ ಹಿರೇಮಠ, ಬೇಂದ್ರೆಯವರ ‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ....’ ಗೀತೆ ಹಾಡಿದರು.</p>.<p>ಕಿನ್ನರಿ ಆಡಿಯೊ ಸಂಸ್ಥೆ ಮಾಲೀಕರಾದ ಪದ್ಮಪಾಣಿ ಜೋಡಿದಾರ್ ಮಾತನಾಡಿ, ‘ಬೇಂದ್ರೆಯವರ ಹಾಡುಗಳ ಕ್ಯಾಸೆಟ್ ಹೊರತಂದಾಗ ದಕ್ಷಿಣ ಕನ್ನಡ, ಕಾಸರಗೋಡಿನಲ್ಲಿ ಸಾಕಷ್ಟು ಮಾರಾಟ ಆದವು. ಆದರೆ, ಧಾರವಾಡದಲ್ಲಿ ಎರಡೇ ಕ್ಯಾಸೆಟ್ ಮಾರಾಟವಾದವು’ ಎಂದು ಸ್ಮರಿಸಿದರು.</p>.<p>ಬೇಂದ್ರೆ ಅವರ ಎರಡು ಕವನಗಳನ್ನು ನಾನು ಬರೆದಿದ್ದೇನೆ (ಅವರು ಹೇಳಿದ್ದನ್ನು ಬರೆದುಕೊಟ್ಟದ್ದು) ಎಂದರು ಪದ್ಮಪಾಣಿ.</p>.<p>ನಾಕುತಂತಿ ಕವನಸಂಕಲನದ ಹಾಡಿನೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬಿತ್ತು. ಸಾಹಿತಿಗಳಾದ ಉಷಾ ಪಿ. ರೈ, ಎಂ.ಆರ್.ಕಮಲಾ ಸೇರಿದಂತೆ ನೂರಾರು ಕೇಳುಗರು ಭಾಗವಹಿಸಿದ್ದರು. ಪ್ರಜಾವಾಣಿ ಸಹ ಸಂಪಾದಕ ಬಿ.ಎಂ. ಹನೀಫ್ ಕಾರ್ಯಕ್ರಮ ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲದಮರ (ಪ್ರಜಾವಾಣಿ ಕ್ಲಬ್ ಹೌಸ್): </strong>ಹೆಚ್ಚಿನವರು ವಸಂತ ಮಾಸದ ಕವಿಗಳು. ದ.ರಾ. ಬೇಂದ್ರೆ ಅವರು ಶ್ರಾವಣದ ಕವಿ. ಕಿವಿಯನ್ನು ಕಣ್ಣಾಗಿಸಿ ಪ್ರಕೃತಿ, ಬದುಕನ್ನು ಆಸ್ವಾದಿಸಿದ ಕವಿ....</p>.<p>–ಇದು ಬೇಂದ್ರೆ ಕಾವ್ಯ ಪರಿಚಾರಕ ಡಾ.ಜಿ.ಕೃಷ್ಣಪ್ಪ ಅವರ ಭಾವುಕ ಮಾತು. ‘ಆಲದಮರ’ದ ಅಡಿಯಲ್ಲಿ ಭಾನುವಾರ ಬೆಳಿಗ್ಗೆಯಿಂದ ‘ಬೇಂದ್ರೆ ಹಾಡು–ಪಾಡು’ ಕಾರ್ಯಕ್ರಮದಲ್ಲಿ ಕಾವ್ಯದ ಸೋನೆ ಮಳೆಯೇ ಹರಿಯಿತು. ಶ್ರಾವಣ ಬಂತು ನಾಡಿಗೆ... ಹಾಡಿಗೆ ಗಾಯಕಿ ಎಂ.ಡಿ. ಪಲ್ಲವಿ ಅವರು ಧ್ವನಿಯಾಗಿ ನಾಂದಿ ಹಾಡಿದರು.</p>.<p>‘ಶ್ರಾವಣವನ್ನು ಧ್ಯಾನಿಸುವ ಕವಿ ಬೇಂದ್ರೆ. ರಸವೇ ಜೀವನ–ವಿರಸವೇ ಮರಣ–ಸಮರಸವೇ ಜೀವನ ಎಂಬ ಅನುಭಾವವನ್ನು ಜಗತ್ತಿಗೆ ಕೊಟ್ಟಿದ್ದಾರೆ’ ಎಂದು ಕೃಷ್ಣಪ್ಪ ನೆನಪಿಸಿದರು.</p>.<p>‘ಮೂಡಲ ಮನೆಯ ಮುತ್ತಿನ ನೀರಿನ ಎರಕವಾ ಹೊಯ್ದ...’ ಹಾಡು ಡಾ.ಶಮಿತಾ ಮಲ್ನಾಡ್ ಧ್ವನಿಯಲ್ಲಿ ಮೂಡಿಬಂದಿತು.</p>.<p>‘ಬೇಂದ್ರೆ ಅವರು ಶಬ್ದಗಳನ್ನು ಹೂವು, ತರಕಾರಿ ಮಾರುವವರು, ಶ್ರೀಸಾಮಾನ್ಯರಿಂದಲೇ ಪಡೆದಿದ್ದಾರೆ. ಹೀಗಾಗಿಯೇ ಅವರ ಕಾವ್ಯಸೃಷ್ಟಿ ಗಟ್ಟಿಯಾಗಿದೆ’ ಎಂದರುರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಪ್ರಹ್ಲಾದ ಬಿ. ಮಹಿಷಿ.</p>.<p>ಉಪರಾಷ್ಟ್ರಪತಿಗೆ ಹಾವು ತೋರಿಸಿದ್ದು!: ‘ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಹಾವಾಡಿಗನೊಬ್ಬನನ್ನು ಸಮಾರಂಭದ ಸ್ಥಳಕ್ಕೆ ಕರೆತಂದಿದ್ದ ಬೇಂದ್ರೆ ಅವರು, ವೈವಿಧ್ಯಮಯ ಹಾವುಗಳನ್ನು ಉಪರಾಷ್ಟ್ರಪತಿಯವರಿಗೆ ತೋರಿಸಬೇಕು ಎಂದು ಪಟ್ಟು ಹಿಡಿದಿದ್ದರು. ಕೊನೆಗೂ ಹಾವಾಡಿಗನಿಗೆ ಉಪರಾಷ್ಟ್ರಪತಿಯವರಿಗೆ ಹಾವು ತೋರಿಸಲು ಬಿಟ್ಟೆವು’ ಎಂದು ನೆನಪಿಸಿದರು ಪ್ರಹ್ಲಾದ ಮಹಿಷಿ.</p>.<p>‘ನೀ ಹಿಂಗ ನೋಡಬ್ಯಾಡ ನನ್ನ... ಈ ಹಾಡಿನ ಹಿಂದೆ ಬೇಂದ್ರೆಯವರ ಅಪಾರ ದುಃಖವಿದೆ. ಲಲಿತಾ ಎಂಬ ಮಗು ಸಾವಿನ ಅಂಚಿನಲ್ಲಿದ್ದಾಗ ಪುಣೆಯಿಂದ ಬರುತ್ತಿದ್ದ ಅವರು ಭಾವತೀವ್ರತೆಯಲ್ಲಿ ಬರೆದ ಹಾಡು ಅದು’ ಎಂದರು ಜಿ.ಕೃಷ್ಣಪ್ಪ.</p>.<p>‘ಬೇಂದ್ರೆ ಅವರಿಗೆ ಡಾಕ್ಟರೇಟ್ ಸಿಕ್ಕಾಗ, ನಾನು ಹುಟ್ತಾನೆ ಡಿ.ಆರ್. ಬೇಂದ್ರೆ (ದತ್ತಾತ್ರೇಯ ರಾಮಚಂದ್ರ ಬೇಂದ್ರೆ). ಇದರಲ್ಲೇನು ವಿಶೇಷ ಎಂದರಂತೆ’ ಎಂದು ಬೇಂದ್ರೆ ಮಾತನ್ನು ನೆನಪಿಸಿದರು ಪ್ರಹ್ಲಾದ ಮಹಿಷಿ.</p>.<p>ಗಾಯಕ ಬಸವಲಿಂಗಯ್ಯ ಹಿರೇಮಠ, ಬೇಂದ್ರೆಯವರ ‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ....’ ಗೀತೆ ಹಾಡಿದರು.</p>.<p>ಕಿನ್ನರಿ ಆಡಿಯೊ ಸಂಸ್ಥೆ ಮಾಲೀಕರಾದ ಪದ್ಮಪಾಣಿ ಜೋಡಿದಾರ್ ಮಾತನಾಡಿ, ‘ಬೇಂದ್ರೆಯವರ ಹಾಡುಗಳ ಕ್ಯಾಸೆಟ್ ಹೊರತಂದಾಗ ದಕ್ಷಿಣ ಕನ್ನಡ, ಕಾಸರಗೋಡಿನಲ್ಲಿ ಸಾಕಷ್ಟು ಮಾರಾಟ ಆದವು. ಆದರೆ, ಧಾರವಾಡದಲ್ಲಿ ಎರಡೇ ಕ್ಯಾಸೆಟ್ ಮಾರಾಟವಾದವು’ ಎಂದು ಸ್ಮರಿಸಿದರು.</p>.<p>ಬೇಂದ್ರೆ ಅವರ ಎರಡು ಕವನಗಳನ್ನು ನಾನು ಬರೆದಿದ್ದೇನೆ (ಅವರು ಹೇಳಿದ್ದನ್ನು ಬರೆದುಕೊಟ್ಟದ್ದು) ಎಂದರು ಪದ್ಮಪಾಣಿ.</p>.<p>ನಾಕುತಂತಿ ಕವನಸಂಕಲನದ ಹಾಡಿನೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬಿತ್ತು. ಸಾಹಿತಿಗಳಾದ ಉಷಾ ಪಿ. ರೈ, ಎಂ.ಆರ್.ಕಮಲಾ ಸೇರಿದಂತೆ ನೂರಾರು ಕೇಳುಗರು ಭಾಗವಹಿಸಿದ್ದರು. ಪ್ರಜಾವಾಣಿ ಸಹ ಸಂಪಾದಕ ಬಿ.ಎಂ. ಹನೀಫ್ ಕಾರ್ಯಕ್ರಮ ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>