<p><em><strong>ಶಿವಕುಮಾರ ಸ್ವಾಮೀಜಿ ಕುರಿತ ಕವಿ ಚನ್ನವೀರ ಕಣವಿ ಅವರ ಕವನ‘ಸಿದ್ಧಗಂಗಾಶ್ರೀ’</strong></em></p>.<p class="rtecenter"><em><strong>–––</strong></em></p>.<p>ಬೆಟ್ಟ–ಬಂಡೆಯ ನಡುವೆ ಗಂಗೆ ಪುಟಿದದ್ದೆಂದೊ</p>.<p>ಜನಜೀವನದ ಕಷ್ಟಕೋಟಲೆಯ ಸ್ತರದಲ್ಲಿ</p>.<p>ಇಳಿದು ತಂಪಿಸಿ, ಮತ್ತೆ ಮೇಲೆದ್ದು ಬರುವಲ್ಲಿ</p>.<p>ಸಿದ್ಧ, ಸೇವಾಕ್ಷೇತ್ರ: ನಿತ್ಯ ದಾಸೋಹಕ್ಕೆ</p>.<p>ವಿದ್ಯಾವಿಶಾಲತೆಗೆ, ನೂತನ–ಪುರಾತನದ</p>.<p>ಚೇತನವ ಹಿಡಿದು ಹೂಡಿ ಜನಮನೋರಥಕೆ</p>.<p>ಜಾತ್ರೆಯೂ ಬೇಕು ಸರ್ವರುತ್ಸಾಹ ಸೌಂದರಕೆ</p>.<p>ಏಕಾಂತ ಪಾತ್ರೆಯು ತುಂಬಿ ತೀರದ ನಿನಾದ</p>.<p>ಕಂಡಿಹನು ನಾನವರನೊಮ್ಮೆ ಹತ್ತಿರದಿಂದ</p>.<p>ತ್ಯಾಗದೆತ್ತರಕೆ ತೂಗಿ, ಮುಗಿಲು ಸುತ್ತಲು ಬಾಗಿ</p>.<p>ನೆಲದ ಬದುಕಿಗೆ ಕರುಣೆ ಕಾಯಕದಲ್ಲಿ ಕರಗಿ</p>.<p>ಮಿರುಗುವ ವಿಭೂತಿ: ನಿರ್ಭಾವದಲಿ ನಡೆಯುವಂದ</p>.<p>ಮನದೊಳಗೆ ಆಗೀಗ ಸದ್ದಿಲ್ಲದೆಯೆ ಮೂಡಿ</p>.<p>ಗೆದ್ದವರು: ಪಡೆದದ್ದಲ್ಲ ಹೇಗೊ ಕಾಡಿ–ಬೇಡಿ.</p>.<p><em><strong>–ಚನ್ನವೀರ ಕಣವಿ</strong></em></p>.<p><strong>ಇದನ್ನೂ ಓದಿ:<a href="https://www.prajavani.net/stories/stateregional/siddaganga-matha-shivakumara-608955.html" target="_blank">ಇಷ್ಟಲಿಂಗ ಪ್ರಿಯ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ</a></strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><em><strong>ಶಿವಕುಮಾರ ಸ್ವಾಮೀಜಿ ಕುರಿತ ಕವಿ ಚನ್ನವೀರ ಕಣವಿ ಅವರ ಕವನ‘ಸಿದ್ಧಗಂಗಾಶ್ರೀ’</strong></em></p>.<p class="rtecenter"><em><strong>–––</strong></em></p>.<p>ಬೆಟ್ಟ–ಬಂಡೆಯ ನಡುವೆ ಗಂಗೆ ಪುಟಿದದ್ದೆಂದೊ</p>.<p>ಜನಜೀವನದ ಕಷ್ಟಕೋಟಲೆಯ ಸ್ತರದಲ್ಲಿ</p>.<p>ಇಳಿದು ತಂಪಿಸಿ, ಮತ್ತೆ ಮೇಲೆದ್ದು ಬರುವಲ್ಲಿ</p>.<p>ಸಿದ್ಧ, ಸೇವಾಕ್ಷೇತ್ರ: ನಿತ್ಯ ದಾಸೋಹಕ್ಕೆ</p>.<p>ವಿದ್ಯಾವಿಶಾಲತೆಗೆ, ನೂತನ–ಪುರಾತನದ</p>.<p>ಚೇತನವ ಹಿಡಿದು ಹೂಡಿ ಜನಮನೋರಥಕೆ</p>.<p>ಜಾತ್ರೆಯೂ ಬೇಕು ಸರ್ವರುತ್ಸಾಹ ಸೌಂದರಕೆ</p>.<p>ಏಕಾಂತ ಪಾತ್ರೆಯು ತುಂಬಿ ತೀರದ ನಿನಾದ</p>.<p>ಕಂಡಿಹನು ನಾನವರನೊಮ್ಮೆ ಹತ್ತಿರದಿಂದ</p>.<p>ತ್ಯಾಗದೆತ್ತರಕೆ ತೂಗಿ, ಮುಗಿಲು ಸುತ್ತಲು ಬಾಗಿ</p>.<p>ನೆಲದ ಬದುಕಿಗೆ ಕರುಣೆ ಕಾಯಕದಲ್ಲಿ ಕರಗಿ</p>.<p>ಮಿರುಗುವ ವಿಭೂತಿ: ನಿರ್ಭಾವದಲಿ ನಡೆಯುವಂದ</p>.<p>ಮನದೊಳಗೆ ಆಗೀಗ ಸದ್ದಿಲ್ಲದೆಯೆ ಮೂಡಿ</p>.<p>ಗೆದ್ದವರು: ಪಡೆದದ್ದಲ್ಲ ಹೇಗೊ ಕಾಡಿ–ಬೇಡಿ.</p>.<p><em><strong>–ಚನ್ನವೀರ ಕಣವಿ</strong></em></p>.<p><strong>ಇದನ್ನೂ ಓದಿ:<a href="https://www.prajavani.net/stories/stateregional/siddaganga-matha-shivakumara-608955.html" target="_blank">ಇಷ್ಟಲಿಂಗ ಪ್ರಿಯ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ</a></strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>