<p><strong>ಗಂಗಾವತಿ: </strong>ಭಾರತೀಯರ ವರ್ಣಮಯ ಬದುಕಿನ ಭಾಗವಾದ ಹೋಳಿಯ ಆಟಕ್ಕೆ ಜಾತಿ–ಧರ್ಮ, ಭಾಷೆ–ದೇಶಗಳ ಗಡಿ ಇಲ್ಲ ಎಂದು ತಾಲ್ಲೂಕಿನ ವಿರುಪಾಪುರಗಡ್ಡೆಯಲ್ಲಿ ಭಾನುವಾರ ನಡೆದ ವಿದೇಶಿಗರ ಓಕುಳಿಯಾಟ ನಿರೂಪಿಸಿತು.<br /> <br /> ರಂಗಿನೋತ್ಸವಕ್ಕೆ ವಿದೇಶಿಯರ ಸಂಭ್ರಮ ಸಾಥ್ ನೀಡಿತು. ಅವರು ಭಾನುವಾರ ಸಂಜೆಯಿಂದಲೇ ವಿರುಪಾಪುರಗಡ್ಡೆಯಲ್ಲಿ ರಂಗಿನಾಟದಲ್ಲಿ ತೊಡಗಿದ್ದರು.<br /> <br /> ಪ್ರತಿ ವರ್ಷ ಹುಣ್ಣಿಮೆಯ ಮಾರನೇ ದಿನ ರಂಗಿನಾಟ ನಡೆಯುತ್ತಿತ್ತು. ಈ ಬಾರಿ ಹುಣ್ಣಿಮೆಯ ಸಂಜೆಯೇ ರಂಗು ಎರಚಿಕೊಳ್ಳುವಲ್ಲಿ ವಿದೇಶಿಯರು ತಲ್ಲೀನರಾಗಿದ್ದರು. <br /> <br /> ಫ್ರಾನ್ಸ್, ಜರ್ಮನ್, ಅಮೆರಿಕಾ, ಸ್ಪೇನ್, ಹಾಲೆಂಡ್, ನೈಜೀರಿಯಾ, ಇಂಗ್ಲೆಂಡ್, ಇಟಲಿ ಮತ್ತು ಇಸ್ರೇಲಿ ದೇಶದ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು.<br /> <br /> ವಿದೇಶಿಗರ ಬೇಡಿಕೆಗೆ ತಕ್ಕಂತೆ ಸ್ಥಳೀಯ ಹೋಟೆಲ್ ಮಾಲೀಕರು ವ್ಯವಸ್ಥೆ ಕಲ್ಪಿಸಿದ್ದಾರೆ ಎಂದ ಸ್ಥಳೀಯ ನಿವಾಸಿ ಜೈಶಂಕರ್ ಹೇಳಿದರು.<br /> ಗಡ್ಡಿ ಗ್ರಾಮದ ಮಧ್ಯೆ ಇರುವ ‘ಲಾಫಿಂಗ್ ಬುದ್ಧ’ ಎಂಬ ವಸತಿ ಗೃಹದ ಮುಂದೆ ಜಮಾವಣೆಗೊಂಡ ವಿದೇಶಿಯರು, ಇಲ್ಲಿನ ಐತಿಹಾಸಿಕ ಕಲ್ಲಿನ ಸೇತುವೆವರೆಗೂ ಸಂಗೀತ ಮತ್ತು ನೃತ್ಯದೊಂದಿಗೆ ಮೆರವಣಿಗೆ ಸಾಗಿದರು. ಬಳಿಕ ವಾಪಸ್ ಬಂದು ತುಂಗಭದ್ರಾ ನದಿಯಲ್ಲಿ ಮಿಂದು ಸಂತಸಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ: </strong>ಭಾರತೀಯರ ವರ್ಣಮಯ ಬದುಕಿನ ಭಾಗವಾದ ಹೋಳಿಯ ಆಟಕ್ಕೆ ಜಾತಿ–ಧರ್ಮ, ಭಾಷೆ–ದೇಶಗಳ ಗಡಿ ಇಲ್ಲ ಎಂದು ತಾಲ್ಲೂಕಿನ ವಿರುಪಾಪುರಗಡ್ಡೆಯಲ್ಲಿ ಭಾನುವಾರ ನಡೆದ ವಿದೇಶಿಗರ ಓಕುಳಿಯಾಟ ನಿರೂಪಿಸಿತು.<br /> <br /> ರಂಗಿನೋತ್ಸವಕ್ಕೆ ವಿದೇಶಿಯರ ಸಂಭ್ರಮ ಸಾಥ್ ನೀಡಿತು. ಅವರು ಭಾನುವಾರ ಸಂಜೆಯಿಂದಲೇ ವಿರುಪಾಪುರಗಡ್ಡೆಯಲ್ಲಿ ರಂಗಿನಾಟದಲ್ಲಿ ತೊಡಗಿದ್ದರು.<br /> <br /> ಪ್ರತಿ ವರ್ಷ ಹುಣ್ಣಿಮೆಯ ಮಾರನೇ ದಿನ ರಂಗಿನಾಟ ನಡೆಯುತ್ತಿತ್ತು. ಈ ಬಾರಿ ಹುಣ್ಣಿಮೆಯ ಸಂಜೆಯೇ ರಂಗು ಎರಚಿಕೊಳ್ಳುವಲ್ಲಿ ವಿದೇಶಿಯರು ತಲ್ಲೀನರಾಗಿದ್ದರು. <br /> <br /> ಫ್ರಾನ್ಸ್, ಜರ್ಮನ್, ಅಮೆರಿಕಾ, ಸ್ಪೇನ್, ಹಾಲೆಂಡ್, ನೈಜೀರಿಯಾ, ಇಂಗ್ಲೆಂಡ್, ಇಟಲಿ ಮತ್ತು ಇಸ್ರೇಲಿ ದೇಶದ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು.<br /> <br /> ವಿದೇಶಿಗರ ಬೇಡಿಕೆಗೆ ತಕ್ಕಂತೆ ಸ್ಥಳೀಯ ಹೋಟೆಲ್ ಮಾಲೀಕರು ವ್ಯವಸ್ಥೆ ಕಲ್ಪಿಸಿದ್ದಾರೆ ಎಂದ ಸ್ಥಳೀಯ ನಿವಾಸಿ ಜೈಶಂಕರ್ ಹೇಳಿದರು.<br /> ಗಡ್ಡಿ ಗ್ರಾಮದ ಮಧ್ಯೆ ಇರುವ ‘ಲಾಫಿಂಗ್ ಬುದ್ಧ’ ಎಂಬ ವಸತಿ ಗೃಹದ ಮುಂದೆ ಜಮಾವಣೆಗೊಂಡ ವಿದೇಶಿಯರು, ಇಲ್ಲಿನ ಐತಿಹಾಸಿಕ ಕಲ್ಲಿನ ಸೇತುವೆವರೆಗೂ ಸಂಗೀತ ಮತ್ತು ನೃತ್ಯದೊಂದಿಗೆ ಮೆರವಣಿಗೆ ಸಾಗಿದರು. ಬಳಿಕ ವಾಪಸ್ ಬಂದು ತುಂಗಭದ್ರಾ ನದಿಯಲ್ಲಿ ಮಿಂದು ಸಂತಸಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>