<p><strong>ರಾಯಪುರ (ಐಎಎನ್ಎಸ್): </strong>ಮತಗಳ ಎಣಿಕೆ ಕಾರ್ಯದ ಕೊನೆಯ ಕ್ಷಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಸ್ಪರ್ಧೆ ಕಂಡುಬಂದರೂ ಕೊನೆಗೂ ಈ ಕದನದಲ್ಲಿ ಆಡಳಿತಾರೂಢ ಬಿಜೆಪಿಯೇ ಮೇಲುಗೈ ಸಾಧಿಸಿದ್ದು ಮೂರನೆಯ ಬಾರಿಗೂ ಅಧಿಕಾರದ ಗದ್ದುಗೆಗೆ ಏರಿದೆ.<br /> <br /> 90 ಸ್ಥಾನಗಳ ಛತ್ತೀಸಗಡ ವಿಧಾನಸಭೆಗೆ 49 ಸ್ಥಾನಗಳನ್ನು ಗೆಲ್ಲುವ ಮೂಲಕ ಸರಳ ಬಹುಮತ ಸಾಧಿಸಿರುವ ಕಮಲ ಪಾಳಯ ಹ್ಯಾಟ್ರಿಕ್ ಜಯ ಸಾಧಿಸಿದ ಸಂತಸದಲ್ಲಿದ್ದರೆ ಅಧಿಕಾರಕ್ಕೆ ಬರಲು ಹೋರಾಟ ನಡೆಸಿದ ಕಾಂಗ್ರೆಸ್ 39 ಸ್ಥಾನ ಗೆದ್ದು ಮತ್ತೆ ವಿರೋಧ ಪಕ್ಷದಲ್ಲಿ ಕೂರಬೇಕಾಗಿದೆ.<br /> <br /> ಕಳೆದ ಬಾರಿ ಎರಡು ಸ್ಥಾನಗಳನ್ನು ಗೆದ್ದಿದ್ದ ಬಿಎಸ್ಪಿ ಈ ಬಾರಿ ಒಂದೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದ್ದು ಮತ್ತೊಂದು ಸ್ಥಾನ ಬಿಜೆಪಿ ಬಂಡಾಯ ಅಭ್ಯರ್ಥಿಯ ಪಾಲಾಗಿದೆ.<br /> <br /> 2003 ಹಾಗೂ 2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಜಯ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿಯ ಡಾ. ರಮಣ ಸಿಂಗ್ ಇದೀಗ ಮೂರನೆಯ ಬಾರಿಗೂ ಮುಖ್ಯಮಂತ್ರಿ ಯಾಗುವುದು ಬಹುತೇಕ ಖಚಿತವಾಗಿದೆ.<br /> <br /> ರಾಜನಂ ನಂದಗಾವ್ ಕ್ಷೇತ್ರದಲ್ಲಿ ರಮಣ ಸಿಂಗ್ ಕಾಂಗ್ರೆಸ್ನ ಅಲ್ಕಾ ಉದಯ್ ಮದ್ಲಿಯಾರ್ ಅವರನ್ನು ಭಾರಿ ಅಂತರದಿಂದ ಪರಾಭವಗೊಳಿಸಿದ್ದಾರೆ.<br /> ಆದರೆ ರಮಣ ಸಿಂಗ್ ಸಂಪುಟದ ಗೃಹ ಸಚಿವ ನನ್ಕರಂ ಕನ್ವಾರ್ ಸೇರಿದಂತೆ ಐವರು ಸಚಿವರು ಸೋಲುಂಡಿದ್ದರೆ ಕಾಂಗ್ರೆಸ್ನ ಹಿರಿಯ ನಾಯಕ ಅಜೀತ್ ಜೋಗಿ ಅವರ ಪುತ್ರ ಅಮಿತ್ ಮಾರ್ವಾದೆಯಲ್ಲಿ ಪತ್ನಿ ಡಾ, ರೇಣು ಜೋಗಿ ಕೋಟಾದಲ್ಲಿ ಗೆಲುವು ಸಾಧಿಸಿದ್ದಾರೆ.<br /> <br /> <strong>ಬಸ್ತರ್: ಕಾಂಗ್ರೆಸ್ಗೆ ಬಲ</strong><br /> ಮಾವೊವಾದಿಗಳ ಉಪಟಳ, ಕಾನೂನು ಸುವ್ಯವಸ್ಥೆ ನಿಯತ್ರಿಸುವಲ್ಲಿ ರಮಣ ಸಿಂಗ್ ಸರ್ಕಾರ ಎಡವಿರುವ ಅಂಶಗಳು ಬಸ್ತರ್ ಭಾಗದಲ್ಲಿ ಬಿಜೆಪಿ ಹಿನ್ನಡೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದ್ದು ಇಲ್ಲಿ ಕಾಂಗ್ರೆಸ್ ಶಕ್ತಿ ಬಲಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಪುರ (ಐಎಎನ್ಎಸ್): </strong>ಮತಗಳ ಎಣಿಕೆ ಕಾರ್ಯದ ಕೊನೆಯ ಕ್ಷಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಸ್ಪರ್ಧೆ ಕಂಡುಬಂದರೂ ಕೊನೆಗೂ ಈ ಕದನದಲ್ಲಿ ಆಡಳಿತಾರೂಢ ಬಿಜೆಪಿಯೇ ಮೇಲುಗೈ ಸಾಧಿಸಿದ್ದು ಮೂರನೆಯ ಬಾರಿಗೂ ಅಧಿಕಾರದ ಗದ್ದುಗೆಗೆ ಏರಿದೆ.<br /> <br /> 90 ಸ್ಥಾನಗಳ ಛತ್ತೀಸಗಡ ವಿಧಾನಸಭೆಗೆ 49 ಸ್ಥಾನಗಳನ್ನು ಗೆಲ್ಲುವ ಮೂಲಕ ಸರಳ ಬಹುಮತ ಸಾಧಿಸಿರುವ ಕಮಲ ಪಾಳಯ ಹ್ಯಾಟ್ರಿಕ್ ಜಯ ಸಾಧಿಸಿದ ಸಂತಸದಲ್ಲಿದ್ದರೆ ಅಧಿಕಾರಕ್ಕೆ ಬರಲು ಹೋರಾಟ ನಡೆಸಿದ ಕಾಂಗ್ರೆಸ್ 39 ಸ್ಥಾನ ಗೆದ್ದು ಮತ್ತೆ ವಿರೋಧ ಪಕ್ಷದಲ್ಲಿ ಕೂರಬೇಕಾಗಿದೆ.<br /> <br /> ಕಳೆದ ಬಾರಿ ಎರಡು ಸ್ಥಾನಗಳನ್ನು ಗೆದ್ದಿದ್ದ ಬಿಎಸ್ಪಿ ಈ ಬಾರಿ ಒಂದೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದ್ದು ಮತ್ತೊಂದು ಸ್ಥಾನ ಬಿಜೆಪಿ ಬಂಡಾಯ ಅಭ್ಯರ್ಥಿಯ ಪಾಲಾಗಿದೆ.<br /> <br /> 2003 ಹಾಗೂ 2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಜಯ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿಯ ಡಾ. ರಮಣ ಸಿಂಗ್ ಇದೀಗ ಮೂರನೆಯ ಬಾರಿಗೂ ಮುಖ್ಯಮಂತ್ರಿ ಯಾಗುವುದು ಬಹುತೇಕ ಖಚಿತವಾಗಿದೆ.<br /> <br /> ರಾಜನಂ ನಂದಗಾವ್ ಕ್ಷೇತ್ರದಲ್ಲಿ ರಮಣ ಸಿಂಗ್ ಕಾಂಗ್ರೆಸ್ನ ಅಲ್ಕಾ ಉದಯ್ ಮದ್ಲಿಯಾರ್ ಅವರನ್ನು ಭಾರಿ ಅಂತರದಿಂದ ಪರಾಭವಗೊಳಿಸಿದ್ದಾರೆ.<br /> ಆದರೆ ರಮಣ ಸಿಂಗ್ ಸಂಪುಟದ ಗೃಹ ಸಚಿವ ನನ್ಕರಂ ಕನ್ವಾರ್ ಸೇರಿದಂತೆ ಐವರು ಸಚಿವರು ಸೋಲುಂಡಿದ್ದರೆ ಕಾಂಗ್ರೆಸ್ನ ಹಿರಿಯ ನಾಯಕ ಅಜೀತ್ ಜೋಗಿ ಅವರ ಪುತ್ರ ಅಮಿತ್ ಮಾರ್ವಾದೆಯಲ್ಲಿ ಪತ್ನಿ ಡಾ, ರೇಣು ಜೋಗಿ ಕೋಟಾದಲ್ಲಿ ಗೆಲುವು ಸಾಧಿಸಿದ್ದಾರೆ.<br /> <br /> <strong>ಬಸ್ತರ್: ಕಾಂಗ್ರೆಸ್ಗೆ ಬಲ</strong><br /> ಮಾವೊವಾದಿಗಳ ಉಪಟಳ, ಕಾನೂನು ಸುವ್ಯವಸ್ಥೆ ನಿಯತ್ರಿಸುವಲ್ಲಿ ರಮಣ ಸಿಂಗ್ ಸರ್ಕಾರ ಎಡವಿರುವ ಅಂಶಗಳು ಬಸ್ತರ್ ಭಾಗದಲ್ಲಿ ಬಿಜೆಪಿ ಹಿನ್ನಡೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದ್ದು ಇಲ್ಲಿ ಕಾಂಗ್ರೆಸ್ ಶಕ್ತಿ ಬಲಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>