<p>ಬಸವಕಲ್ಯಾಣ: ಜ್ಞಾನ ಮತ್ತು ಗುಣಕ್ಕಿರುವ ಮೌಲ್ಯ ಹಣಕ್ಕೆ ಬರಲಾರದು ಎಂದು ಮುಚಳಂಬ ನಾಗಭೂಷಣ ಶಿವಯೋಗಿ ಸಂಸ್ಥಾನ ಮಠದ ಪ್ರಣವಾನಂದ ಸ್ವಾಮೀಜಿ ಹೇಳಿದರು.<br /> <br /> ಮಠದಲ್ಲಿ ಬುಧವಾರ ನಡೆದ ಸತ್ಸಂಗ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದರು. ಸತ್ಪುರುಷರು ತೋರಿದ ಮಾರ್ಗದಲ್ಲಿ ನಡೆದು ಜ್ಞಾನದ ಜ್ಯೋತಿಯನ್ನು ಪ್ರಜ್ವಲಿಸಿಕೊಳ್ಳಬೇಕು. ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಸದಾ ಸುಖಿಗಳಾಗಿ ಬಾಳಬೇಕು ಎಂದರು.<br /> <br /> ಬೋರಗಿ ಮಹಾಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ದೇವರ ಮತ್ತು ಗುರುವಿನ ಮೇಲೆ ಭಕ್ತಿ, ಶ್ರದ್ಧೆ ಹೊಂದಿರಬೇಕು ಎಂದರು.<br /> ಶೋಭಾವತಿ ಘಾಳೆ, ಜಲಪುರ ಶಿವಲಿಂಗೇಶ್ವರ ಸ್ವಾಮೀಜಿ, ದಂಡಾವತಿ ಶಿವಬಸವ ಸ್ವಾಮೀಜಿ, ಗೋಪಾಲಶಾಸ್ತ್ರೀ, ಸಿದ್ದೇಶ್ವರಿ ಮಾತನಾಡಿದರು.<br /> <br /> ಪ್ರಕಾಶ ಕಾಮಶೆಟ್ಟಿ, ಕೆ.ಕಾಶಪ್ಪ, ಸುಭಾಷ ಪಾಟೀಲ, ಮಡಿವಾಳಪ್ಪ ದೇವಪ್ಪ, ಕಿಶೋರ ಮಾಲೇಕರ ಉಪಸ್ಥಿತರಿದ್ದರು. ರಾಚಯ್ಯ ಸ್ವಾಮಿ, ಬಸವರಾಜ ಯಳಸಂಗಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಯಳಸಂಗಿ ಪರಮಾನಂದ ಸ್ವಾಮೀಜಿ ನಿರೂಪಿಸಿದರು.<br /> ಉದ್ಘಾಟನೆ: ನಾಗಭೂಷಣ ಶಿವಯೋಗಿ ಪದವಿ ಪೂರ್ವ ಕಾಲೇಜಿಗೆ ಶರಣಪ್ಪ ನರಶೆಟ್ಟಿ ಸ್ಮರಣಾರ್ಥ ದೇಣಿಗೆಯಾಗಿ ಕೊಟ್ಟಿರುವ ವರ್ಗಕೋಣೆಗಳ ಉದ್ಘಾಟನೆ ಈಚೆಗೆ ನಡೆಯಿತು.<br /> <br /> ಶಾಸಕ ಈಶ್ವರ ಖಂಡ್ರೆ ಉದ್ಘಾಟಿಸಿದರು. ಪ್ರಣವಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮುಖಂಡರಾದ ಬಾಬು ಹೊನ್ನಾನಾಯಕ, ಶಿವರಾಜ ನರಶೆಟ್ಟಿ, ವೈಜನಾಥ ಕಾಮಶೆಟ್ಟಿ, ಅನಿಲ ಭೂಸಾರೆ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸರಸ್ವತಿ ಸಾಗಾವೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಗಲಾಬಾಯಿ ಗುರಣ್ಣ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಸವಕಲ್ಯಾಣ: ಜ್ಞಾನ ಮತ್ತು ಗುಣಕ್ಕಿರುವ ಮೌಲ್ಯ ಹಣಕ್ಕೆ ಬರಲಾರದು ಎಂದು ಮುಚಳಂಬ ನಾಗಭೂಷಣ ಶಿವಯೋಗಿ ಸಂಸ್ಥಾನ ಮಠದ ಪ್ರಣವಾನಂದ ಸ್ವಾಮೀಜಿ ಹೇಳಿದರು.<br /> <br /> ಮಠದಲ್ಲಿ ಬುಧವಾರ ನಡೆದ ಸತ್ಸಂಗ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದರು. ಸತ್ಪುರುಷರು ತೋರಿದ ಮಾರ್ಗದಲ್ಲಿ ನಡೆದು ಜ್ಞಾನದ ಜ್ಯೋತಿಯನ್ನು ಪ್ರಜ್ವಲಿಸಿಕೊಳ್ಳಬೇಕು. ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಸದಾ ಸುಖಿಗಳಾಗಿ ಬಾಳಬೇಕು ಎಂದರು.<br /> <br /> ಬೋರಗಿ ಮಹಾಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ದೇವರ ಮತ್ತು ಗುರುವಿನ ಮೇಲೆ ಭಕ್ತಿ, ಶ್ರದ್ಧೆ ಹೊಂದಿರಬೇಕು ಎಂದರು.<br /> ಶೋಭಾವತಿ ಘಾಳೆ, ಜಲಪುರ ಶಿವಲಿಂಗೇಶ್ವರ ಸ್ವಾಮೀಜಿ, ದಂಡಾವತಿ ಶಿವಬಸವ ಸ್ವಾಮೀಜಿ, ಗೋಪಾಲಶಾಸ್ತ್ರೀ, ಸಿದ್ದೇಶ್ವರಿ ಮಾತನಾಡಿದರು.<br /> <br /> ಪ್ರಕಾಶ ಕಾಮಶೆಟ್ಟಿ, ಕೆ.ಕಾಶಪ್ಪ, ಸುಭಾಷ ಪಾಟೀಲ, ಮಡಿವಾಳಪ್ಪ ದೇವಪ್ಪ, ಕಿಶೋರ ಮಾಲೇಕರ ಉಪಸ್ಥಿತರಿದ್ದರು. ರಾಚಯ್ಯ ಸ್ವಾಮಿ, ಬಸವರಾಜ ಯಳಸಂಗಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಯಳಸಂಗಿ ಪರಮಾನಂದ ಸ್ವಾಮೀಜಿ ನಿರೂಪಿಸಿದರು.<br /> ಉದ್ಘಾಟನೆ: ನಾಗಭೂಷಣ ಶಿವಯೋಗಿ ಪದವಿ ಪೂರ್ವ ಕಾಲೇಜಿಗೆ ಶರಣಪ್ಪ ನರಶೆಟ್ಟಿ ಸ್ಮರಣಾರ್ಥ ದೇಣಿಗೆಯಾಗಿ ಕೊಟ್ಟಿರುವ ವರ್ಗಕೋಣೆಗಳ ಉದ್ಘಾಟನೆ ಈಚೆಗೆ ನಡೆಯಿತು.<br /> <br /> ಶಾಸಕ ಈಶ್ವರ ಖಂಡ್ರೆ ಉದ್ಘಾಟಿಸಿದರು. ಪ್ರಣವಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮುಖಂಡರಾದ ಬಾಬು ಹೊನ್ನಾನಾಯಕ, ಶಿವರಾಜ ನರಶೆಟ್ಟಿ, ವೈಜನಾಥ ಕಾಮಶೆಟ್ಟಿ, ಅನಿಲ ಭೂಸಾರೆ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸರಸ್ವತಿ ಸಾಗಾವೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಗಲಾಬಾಯಿ ಗುರಣ್ಣ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>