<p>ಹಾಸನ: ಕಲೆಗಳನ್ನು ಯುವ ಪೀಳಿಗೆಗೆ ಕಲಿಸಿಕೊಡುವ ಕಾರ್ಯವನ್ನು ವಿದ್ವಾಂಸರು ಮಾಡಬೇಕು. ಉಳಿದ ವರು ಅವರಿಗೆ ಪ್ರೋತ್ಸಾಹ ನೀಡಬೇಕು. ಇಲ್ಲವಾದಲ್ಲಿ ಸಂಸ್ಕೃತಿಯ ಗಂಧಗಾಳಿ ಇಲ್ಲದ ಯುವ ಪೀಳಿಗೆಯನ್ನು ನೋಡಬೇಕಾಗುತ್ತದೆ~ ಎಂದು ವರ್ತಕ ಆರ್. ರಾಜಣ್ಣ ನುಡಿದರು.<br /> <br /> ನಗರದ ಮಹಾರಾಜ ಪಾರ್ಕ್ನಲ್ಲಿರುವ ವಿವೇಕಾನಂದ ಯೋಗ ಶಿಕ್ಷಣ ಕೇಂದ್ರದಲ್ಲಿ ಭಾನುವಾರ ಮುಂಜಾನೆ 6.30ಕ್ಕೆ ಹಮ್ಮಿಕೊಂಡಿದ್ದ ಗಂಗಮ್ಮ ಕೇಶವಮೂರ್ತಿ ಅವರ ಗಾನಮಂಜರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.<br /> <br /> ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೋಗ ಗುರು ಎಚ್.ಬಿ. ರಮೇಶ್, `ಜನರಿಗೆ ದೇಹಾರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಮುಖ್ಯ. ಈ ನಿಟ್ಟಿನಲ್ಲಿ ಪ್ರತಿ ಭಾನುವಾರ ಮುಂಜಾನೆ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಹೆಚ್ಚು ಹೆಚ್ಚು ಜನರು ಇದರ ಲಾಭ ಪಡೆಯಬೇಕು~ ಎಂದರು.<br /> <br /> ಗಂಗಮ್ಮ ಕೇಶವಮೂರ್ತಿ ಅವರು, ಅನಂತ ಚತುರ್ದಶಿಯ ಮಹತ್ವದ ಕುರಿತ ಮಹಾಭಾರತದ ಪ್ರಸಂಗವೊಂದರ ಆಯ್ದ ಭಾಗವನ್ನು ವಾಚನ ಮಾಡಿ ವಿಶ್ಲೇಷಣೆ ಮಾಡಿದರು.<br /> <br /> ಗಮಕ ಕಲಾ ಪರಿಷತ್ತಿನ ಗಣೇಶ ಉಡುಪ, ಸಮಾಜ ಸೇವಕ ಡಾ. ವೈ ಎಸ್. ವೀರಭದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾಸನ: ಕಲೆಗಳನ್ನು ಯುವ ಪೀಳಿಗೆಗೆ ಕಲಿಸಿಕೊಡುವ ಕಾರ್ಯವನ್ನು ವಿದ್ವಾಂಸರು ಮಾಡಬೇಕು. ಉಳಿದ ವರು ಅವರಿಗೆ ಪ್ರೋತ್ಸಾಹ ನೀಡಬೇಕು. ಇಲ್ಲವಾದಲ್ಲಿ ಸಂಸ್ಕೃತಿಯ ಗಂಧಗಾಳಿ ಇಲ್ಲದ ಯುವ ಪೀಳಿಗೆಯನ್ನು ನೋಡಬೇಕಾಗುತ್ತದೆ~ ಎಂದು ವರ್ತಕ ಆರ್. ರಾಜಣ್ಣ ನುಡಿದರು.<br /> <br /> ನಗರದ ಮಹಾರಾಜ ಪಾರ್ಕ್ನಲ್ಲಿರುವ ವಿವೇಕಾನಂದ ಯೋಗ ಶಿಕ್ಷಣ ಕೇಂದ್ರದಲ್ಲಿ ಭಾನುವಾರ ಮುಂಜಾನೆ 6.30ಕ್ಕೆ ಹಮ್ಮಿಕೊಂಡಿದ್ದ ಗಂಗಮ್ಮ ಕೇಶವಮೂರ್ತಿ ಅವರ ಗಾನಮಂಜರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.<br /> <br /> ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೋಗ ಗುರು ಎಚ್.ಬಿ. ರಮೇಶ್, `ಜನರಿಗೆ ದೇಹಾರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಮುಖ್ಯ. ಈ ನಿಟ್ಟಿನಲ್ಲಿ ಪ್ರತಿ ಭಾನುವಾರ ಮುಂಜಾನೆ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಹೆಚ್ಚು ಹೆಚ್ಚು ಜನರು ಇದರ ಲಾಭ ಪಡೆಯಬೇಕು~ ಎಂದರು.<br /> <br /> ಗಂಗಮ್ಮ ಕೇಶವಮೂರ್ತಿ ಅವರು, ಅನಂತ ಚತುರ್ದಶಿಯ ಮಹತ್ವದ ಕುರಿತ ಮಹಾಭಾರತದ ಪ್ರಸಂಗವೊಂದರ ಆಯ್ದ ಭಾಗವನ್ನು ವಾಚನ ಮಾಡಿ ವಿಶ್ಲೇಷಣೆ ಮಾಡಿದರು.<br /> <br /> ಗಮಕ ಕಲಾ ಪರಿಷತ್ತಿನ ಗಣೇಶ ಉಡುಪ, ಸಮಾಜ ಸೇವಕ ಡಾ. ವೈ ಎಸ್. ವೀರಭದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>