<p>ಬಳ್ಳಾರಿ: ಒಂಟಿ ಮನೆ ಮೇಲೆ ದಾಳಿ ನಡೆಸಿದ ಡಕಾಯಿತರ ತಂಡವೊಂದು ಮನೆಯಲ್ಲಿದ್ದವರನ್ನು ಕೂಡಿ ಹಾಕಿ, ವೃದ್ಧೆಯೊಬ್ಬರನ್ನು ಥಳಿಸಿ ನಗನಾಣ್ಯ ದೋಚಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ವೇಣಿವೀರಾಪುರ ಗ್ರಾಮದ ಹೊರ ವಲಯದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.<br /> <br /> ಗ್ರಾಮದ ವೆಂಕಟೇಶಪ್ಪ ಎಂಬುವವರ ಮನೆಯಲ್ಲೇ ಡಕಾಯಿತಿ ನಡೆದಿದೆ. ಆರು ಜನರಿದ್ದ ಡಕಾಯಿತರ ತಂಡವು, ಮನೆಯ ತಿಜೋರಿಗಳಲ್ಲಿದ್ದ ಒಟ್ಟು ರೂ. 8 ಲಕ್ಷ ನಗದು, 750 ಗ್ರಾಂ ಚಿನ್ನಾಭರಣ ದೋಚಿದೆ.<br /> <br /> ಡಕಾಯಿತರು ತೀವ್ರ ಪ್ರತಿರೋಧ ಒಡ್ಡಿದ ವೆಂಕಟೇಶಪ್ಪ ಅವರ ಪತ್ನಿ ಸಂಜೀವಮ್ಮ (60) ಅವರ ಮೇಲೆ ಹಲ್ಲೆ ನಡೆಸಿ, ತಿಜೋರಿ ಬಾಗಿಲು ಮುರಿದು ಹಣ ಮತ್ತು ಚಿನ್ನದೊಂದಿಗೆ ಕತ್ತಲೆಯಲ್ಲಿ ಓಡಿ ಹೋಗಿದ್ದಾರೆ. <br /> <br /> ಸಂಜೀವಮ್ಮ ಅವರನ್ನು ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸಗೆ ದಾಖಲಿಸಲಾಗಿದೆ. ಮನೆಯ ಹೊರಗೆ ಛಾವಣಿಯಲ್ಲಿ ಮಲಗಿದ್ದ ವೆಂಕಟೇಶಪ್ಪ ಅವರ ಮೇಲೆ ಹೊದಿಕೆ ಮುಚ್ಚಿ ಮನೆಯೊಳಗೆ ಕರೆದೊಯ್ದರಲ್ಲದೆ, ಒಳಗಿದ್ದ ಪುತ್ರ ಮತ್ತು ಸೊೆಯನ್ನು ಕೋಣೆಯಲ್ಲೇ ಕೂಡಿ ಹಾಕಿ ಈ ಕೃತ್ಯ ಎಸಗಲಾಗಿದೆ.<br /> <br /> ಕನ್ನಡ ಮಾತಾಡುತ್ತಿದ್ದ ಈ ಡಕಾಯಿತರಲ್ಲಿ ನಾಲ್ವರು ಮುಖಕ್ಕೆ ಮುಸುಕು ಧರಿಸಿದ್ದರು. ಒಳಗಿನವರು ಕೂಗಿದ್ದು ಕೇಳಿಸದಂತೆ ತಡೆಯಲು ಮನೆಯೊಳಗೆ ನುಗ್ಗಿದ ಕೂಡಲೇ ಮಿಕ್ಸಿ ಆನ್ ಮಾಡಿ ಈ ಕೃತ್ಯ ಎಸಗಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಳ್ಳಾರಿ: ಒಂಟಿ ಮನೆ ಮೇಲೆ ದಾಳಿ ನಡೆಸಿದ ಡಕಾಯಿತರ ತಂಡವೊಂದು ಮನೆಯಲ್ಲಿದ್ದವರನ್ನು ಕೂಡಿ ಹಾಕಿ, ವೃದ್ಧೆಯೊಬ್ಬರನ್ನು ಥಳಿಸಿ ನಗನಾಣ್ಯ ದೋಚಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ವೇಣಿವೀರಾಪುರ ಗ್ರಾಮದ ಹೊರ ವಲಯದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.<br /> <br /> ಗ್ರಾಮದ ವೆಂಕಟೇಶಪ್ಪ ಎಂಬುವವರ ಮನೆಯಲ್ಲೇ ಡಕಾಯಿತಿ ನಡೆದಿದೆ. ಆರು ಜನರಿದ್ದ ಡಕಾಯಿತರ ತಂಡವು, ಮನೆಯ ತಿಜೋರಿಗಳಲ್ಲಿದ್ದ ಒಟ್ಟು ರೂ. 8 ಲಕ್ಷ ನಗದು, 750 ಗ್ರಾಂ ಚಿನ್ನಾಭರಣ ದೋಚಿದೆ.<br /> <br /> ಡಕಾಯಿತರು ತೀವ್ರ ಪ್ರತಿರೋಧ ಒಡ್ಡಿದ ವೆಂಕಟೇಶಪ್ಪ ಅವರ ಪತ್ನಿ ಸಂಜೀವಮ್ಮ (60) ಅವರ ಮೇಲೆ ಹಲ್ಲೆ ನಡೆಸಿ, ತಿಜೋರಿ ಬಾಗಿಲು ಮುರಿದು ಹಣ ಮತ್ತು ಚಿನ್ನದೊಂದಿಗೆ ಕತ್ತಲೆಯಲ್ಲಿ ಓಡಿ ಹೋಗಿದ್ದಾರೆ. <br /> <br /> ಸಂಜೀವಮ್ಮ ಅವರನ್ನು ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸಗೆ ದಾಖಲಿಸಲಾಗಿದೆ. ಮನೆಯ ಹೊರಗೆ ಛಾವಣಿಯಲ್ಲಿ ಮಲಗಿದ್ದ ವೆಂಕಟೇಶಪ್ಪ ಅವರ ಮೇಲೆ ಹೊದಿಕೆ ಮುಚ್ಚಿ ಮನೆಯೊಳಗೆ ಕರೆದೊಯ್ದರಲ್ಲದೆ, ಒಳಗಿದ್ದ ಪುತ್ರ ಮತ್ತು ಸೊೆಯನ್ನು ಕೋಣೆಯಲ್ಲೇ ಕೂಡಿ ಹಾಕಿ ಈ ಕೃತ್ಯ ಎಸಗಲಾಗಿದೆ.<br /> <br /> ಕನ್ನಡ ಮಾತಾಡುತ್ತಿದ್ದ ಈ ಡಕಾಯಿತರಲ್ಲಿ ನಾಲ್ವರು ಮುಖಕ್ಕೆ ಮುಸುಕು ಧರಿಸಿದ್ದರು. ಒಳಗಿನವರು ಕೂಗಿದ್ದು ಕೇಳಿಸದಂತೆ ತಡೆಯಲು ಮನೆಯೊಳಗೆ ನುಗ್ಗಿದ ಕೂಡಲೇ ಮಿಕ್ಸಿ ಆನ್ ಮಾಡಿ ಈ ಕೃತ್ಯ ಎಸಗಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>