<p><strong>ಬೆಂಗಳೂರು:</strong> ನಿರ್ಮಾಣ ಹಂತದಲ್ಲಿರುವ ಕಟ್ಟಡ ಬಿರುಕು ಬಿಟ್ಟು, ವಾಲಿಕೊಂಡ ಪರಿಣಾಮ ಮಂಗಳವಾರ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.</p>.<p>ಎಲೆಕ್ಟ್ರಾನಿಕ್ಸಿಟಿ ಸಮೀಪದ ಶಾಂತಿಪುರ ಮುಖ್ಯರಸ್ತೆಯಲ್ಲಿರುವ ವಿನಾಯಕ ಲೇಔಟ್ನಲ್ಲಿ ತಮಿಳುನಾಡು ಮೂಲದ ವಿಜಯ್ಕುಮಾರ್ ಎಂಬುವರು ಕಳೆದ ಸೆಪ್ಟೆಂಬರ್ನಿಂದ ನಾಲ್ಕು ಅಂತಸ್ತಿನ ಅಪಾರ್ಟ್ಮೆಂಟ್ ನಿರ್ಮಿಸುತ್ತಿದ್ದರು.</p>.<p>`ಕಟ್ಟಡದ ಒಳಗೆ ಮಲಗಿದ್ದೆವು. ಬೆಳಿಗ್ಗೆ 5 ಗಂಟೆಗೆ ಜೋರಾಗಿ ಶಬ್ದ ಕೇಳಿಸಿತು. ಆತಂಕಗೊಂಡ ಹೊರಗೆ ಓಡಿ ಬಂದು ನೋಡಿದರೆ ಕಟ್ಟಡ ಬಿರುಕು ಬಿಟ್ಟು ಎಡ ಭಾಗಕ್ಕೆ ವಾಲಿಕೊಂಡಿತ್ತು. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದೆವು~ ಎಂದು ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದವರು ಹೇಳಿದರು.</p>.<p>ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳು ವಾಲಿದ ಕಟ್ಟಡದ ಪಕ್ಕದಲ್ಲಿರುವ ಹಾಗೂ ಹಿಂಬದಿಯಲ್ಲಿರುವ ಅಪಾರ್ಟ್ಮೆಂಟ್ನ ನಿವಾಸಿಗಳನ್ನು ಸ್ಥಳಾಂತರಿಸಿದರು. ಮುಂಜಾಗ್ರತ ಕ್ರಮವಾಗಿ ಆ ಕಟ್ಟಡಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ, ಅನಿಲ ಸಿಲಿಂಡರ್ಗಳನ್ನು ಹೊರ ತಂದರು.</p>.<p>`ಕಾಮಗಾರಿ ಆರಂಭವಾದ ಐದು ತಿಂಗಳಲ್ಲಿಯೇ ಬಿರುಕು ಬಿಟ್ಟಿದ್ದು, ಕಟ್ಟಡದ ಅಡಿಪಾಯದಲ್ಲಿ ಲೋಪವಿದೆ. ಈ ಅಪಾರ್ಟ್ಮೆಂಟ್ನಲ್ಲಿ ಒಟ್ಟು 14 ಮನೆಗಳಿದ್ದು, ಇಡೀ ಕಟ್ಟಡವೇ ಕಳಪೆ ಕಾಮಗಾರಿಯಿಂದ ಕೂಡಿದೆ. ಕಟ್ಟಡವನ್ನು ಪರಿಶೀಲಿಸಿದ ಸಿವಿಲ್ ಎಂಜಿನಿಯರ್ಗಳು ಅದನ್ನು ನೆಲಸಮ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ~ ಎಂದು ಎಲೆಕ್ಟ್ರಾನಿಕ್ಸಿಟಿಯ ಅಗ್ನಿಶಾಮಕ ಠಾಣಾಧಿಕಾರಿ ಬಿ.ಎಸ್.ರಮಣೇಗೌಡ ಹೇಳಿದರು.</p>.<p><strong>ಕಟ್ಟಡ ನೆಲಸಮ :</strong> ಕಟ್ಟಡದ ಮಾಲೀಕ ವಿಜಯ್ ಅವರ ಸಂಬಂಧಿ ಬಾಬು ರೆಡ್ಡಿ ಎಂಬುವರು ಜೆಸಿಬಿ ಯಂತ್ರಗಳನ್ನು ತಂದು ಕಟ್ಟಡವನ್ನು ಸಂಜೆ ಆರು ಗಂಟೆ ಸಮಯದಲ್ಲಿ ನೆಲಸಮ ಮಾಡಲು ಆರಂಭಿಸಿದರು.</p>.<p>ನಿರ್ಲಕ್ಷ್ಯದ ಆರೋಪದ ಮೇಲೆ ವಿಜಯ್ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯು ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಆರೋಪಿ ಪತ್ತೆ ಕಾರ್ಯ ನಡೆಸುತ್ತಿದ್ದೇವೆ ಎಂದು ಪರಪ್ಪನ ಅಗ್ರಹಾರ ಠಾಣೆ ಪೊಲೀಸ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಿರ್ಮಾಣ ಹಂತದಲ್ಲಿರುವ ಕಟ್ಟಡ ಬಿರುಕು ಬಿಟ್ಟು, ವಾಲಿಕೊಂಡ ಪರಿಣಾಮ ಮಂಗಳವಾರ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.</p>.<p>ಎಲೆಕ್ಟ್ರಾನಿಕ್ಸಿಟಿ ಸಮೀಪದ ಶಾಂತಿಪುರ ಮುಖ್ಯರಸ್ತೆಯಲ್ಲಿರುವ ವಿನಾಯಕ ಲೇಔಟ್ನಲ್ಲಿ ತಮಿಳುನಾಡು ಮೂಲದ ವಿಜಯ್ಕುಮಾರ್ ಎಂಬುವರು ಕಳೆದ ಸೆಪ್ಟೆಂಬರ್ನಿಂದ ನಾಲ್ಕು ಅಂತಸ್ತಿನ ಅಪಾರ್ಟ್ಮೆಂಟ್ ನಿರ್ಮಿಸುತ್ತಿದ್ದರು.</p>.<p>`ಕಟ್ಟಡದ ಒಳಗೆ ಮಲಗಿದ್ದೆವು. ಬೆಳಿಗ್ಗೆ 5 ಗಂಟೆಗೆ ಜೋರಾಗಿ ಶಬ್ದ ಕೇಳಿಸಿತು. ಆತಂಕಗೊಂಡ ಹೊರಗೆ ಓಡಿ ಬಂದು ನೋಡಿದರೆ ಕಟ್ಟಡ ಬಿರುಕು ಬಿಟ್ಟು ಎಡ ಭಾಗಕ್ಕೆ ವಾಲಿಕೊಂಡಿತ್ತು. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದೆವು~ ಎಂದು ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದವರು ಹೇಳಿದರು.</p>.<p>ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳು ವಾಲಿದ ಕಟ್ಟಡದ ಪಕ್ಕದಲ್ಲಿರುವ ಹಾಗೂ ಹಿಂಬದಿಯಲ್ಲಿರುವ ಅಪಾರ್ಟ್ಮೆಂಟ್ನ ನಿವಾಸಿಗಳನ್ನು ಸ್ಥಳಾಂತರಿಸಿದರು. ಮುಂಜಾಗ್ರತ ಕ್ರಮವಾಗಿ ಆ ಕಟ್ಟಡಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ, ಅನಿಲ ಸಿಲಿಂಡರ್ಗಳನ್ನು ಹೊರ ತಂದರು.</p>.<p>`ಕಾಮಗಾರಿ ಆರಂಭವಾದ ಐದು ತಿಂಗಳಲ್ಲಿಯೇ ಬಿರುಕು ಬಿಟ್ಟಿದ್ದು, ಕಟ್ಟಡದ ಅಡಿಪಾಯದಲ್ಲಿ ಲೋಪವಿದೆ. ಈ ಅಪಾರ್ಟ್ಮೆಂಟ್ನಲ್ಲಿ ಒಟ್ಟು 14 ಮನೆಗಳಿದ್ದು, ಇಡೀ ಕಟ್ಟಡವೇ ಕಳಪೆ ಕಾಮಗಾರಿಯಿಂದ ಕೂಡಿದೆ. ಕಟ್ಟಡವನ್ನು ಪರಿಶೀಲಿಸಿದ ಸಿವಿಲ್ ಎಂಜಿನಿಯರ್ಗಳು ಅದನ್ನು ನೆಲಸಮ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ~ ಎಂದು ಎಲೆಕ್ಟ್ರಾನಿಕ್ಸಿಟಿಯ ಅಗ್ನಿಶಾಮಕ ಠಾಣಾಧಿಕಾರಿ ಬಿ.ಎಸ್.ರಮಣೇಗೌಡ ಹೇಳಿದರು.</p>.<p><strong>ಕಟ್ಟಡ ನೆಲಸಮ :</strong> ಕಟ್ಟಡದ ಮಾಲೀಕ ವಿಜಯ್ ಅವರ ಸಂಬಂಧಿ ಬಾಬು ರೆಡ್ಡಿ ಎಂಬುವರು ಜೆಸಿಬಿ ಯಂತ್ರಗಳನ್ನು ತಂದು ಕಟ್ಟಡವನ್ನು ಸಂಜೆ ಆರು ಗಂಟೆ ಸಮಯದಲ್ಲಿ ನೆಲಸಮ ಮಾಡಲು ಆರಂಭಿಸಿದರು.</p>.<p>ನಿರ್ಲಕ್ಷ್ಯದ ಆರೋಪದ ಮೇಲೆ ವಿಜಯ್ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯು ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಆರೋಪಿ ಪತ್ತೆ ಕಾರ್ಯ ನಡೆಸುತ್ತಿದ್ದೇವೆ ಎಂದು ಪರಪ್ಪನ ಅಗ್ರಹಾರ ಠಾಣೆ ಪೊಲೀಸ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>