<p><strong>ರಾಯಚೂರು</strong>: ಇಲ್ಲಿನ ಮಕ್ತಲ್ಪೇಟೆ ಬಡಾವಣೆಯಲ್ಲಿ ಗುರುವಾರ ಮಾಜಿ ಶಾಸಕ ಎ. ಪಾಪಾರೆಡ್ಡಿ ಸಿ.ಸಿ ರಸ್ತೆ ನಿರ್ಮಾಣ ಹಾಗೂ ಕುಡಿಯುವ ನೀರು ಪೂರೈಕೆಗೆ ಪೈಪ್ ಲೈನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.<br /> <br /> ಮಾತನಾಡಿದ ಅವರು, ಮನೋಹರ ಮಸ್ಕಿ ವಿಧಾನ ಪರಿಷತ್ ಸದಸ್ಯರಿದ್ದಾಗ ತಾವು ಮನವಿ ಮಾಡಿದ್ದರಿಂದ 5 ಲಕ್ಷ ಅನುದಾನವನ್ನು ಈ ಭಾಗದ ಅಭಿವೃದ್ಧಿ ಕೆಲಸಕ್ಕೆ ದೊರಕಿಸಿದ್ದರು. ಈಗ ಸಿಸಿ ರಸ್ತೆ, ಕುಡಿಯುವ ನೀರು ಪೂರೈಕೆ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದರ.ನಾಗರಿಕರ ಪರವಾಗಿ ಯಪಶೆಟ್ಟು ಗೋಪಾಲರೆಡ್ಡಿ ಅವರು ಮಾಜಿ ಶಾಸಕ ಪಾಪಾರೆಡ್ಡಿ ಅವರನ್ನು ಸತ್ಕರಿಸಿದರು.<br /> <br /> ಬಡಾವಣೆ ನಗರಸಭೆ ಸದಸ್ಯರಾದ ಟಿ ಮಲ್ಲೇಶ, ಯು ದೊಡ್ಡಮಲ್ಲೇಶಪ್ಪ, ಎನ್ ಶ್ರೀನಿವಾಸರೆಡ್ಡಿ, ಎಸ್ ಜನಾರ್ದನರೆಡ್ಡಿ, ಬಂಗಿ ನರಸರೆಡ್ಡಿ, ಈರಣ್ಣ, ಶಶಿಧರ ಏಗನೂರು, ಸುರೇಶ, ಪೊಗಲ್ ಶ್ರೀನಿವಾಸರೆಡ್ಡಿ, ಜಿ ವಿರೇಶರೆಡ್ಡಿ, ಎನ್ ಸತ್ಯಾರೆಡ್ಡಿ, ಕೆ ರವಿ ಹಾಗೂ ಇತರರಿದ್ದರು.<br /> <br /> ವಿದ್ಯುತ್ ಉಪಕೇಂದ್ರ ಶೀಘ್ರ ಪೂರ್ಣ: ಚಂದ್ರಬಂಡಾ ಗ್ರಾಮದಲ್ಲಿ ಹೊಸದಾಗಿ 33/11 ಕೆ.ವಿ ವಿದ್ಯುತ್ ಉಪಕೇಂದ್ರದ ಕಾಮಗಾರಿಯನ್ನು 2013ರ ಜನವರಿ ಅಥವಾ ಫೆಬ್ರುವರಿಲ್ಲಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರದಾದ ಹೈದರಾಬಾದಿನ ಪ್ರದೀಪ್ ಎಂಬುವವರು ತಿಳಿಸಿದ್ದಾರೆ ಎಂದು ಜಿ.ಪಂ ಸದಸ್ಯೆ ಉಮಾದೇವಿ ಹುಲಿರಾಜ್ ಹೇಳಿದ್ದಾರೆ.<br /> <br /> ಈ ಕುರಿತು ಪ್ರಕಟಣೆ ನೀಡಿರುವ ಅವರು, 33/11 ಕೆ.ವಿ ವಿದ್ಯುತ್ ಉಪ ಕೇಂದ್ರ ನಿರ್ಮಾಣ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿದೆ. ಈ ಭಾಗದ ರೈತರು ಮತ್ತು ಗ್ರಾಹಕರಿಗೆ ವಿದ್ಯುತ್ ಸಮಸ್ಯೆ ಇದೆ. ಇದರ ಪರಿಹಾರಕ್ಕಾಗಿ ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿ ಕೋರಿದ್ದರಿಂದ 4 ಕೋಟಿ ಹಣ ಬಿಡುಗಡೆ ಗೊಳಿಸಿದ್ದರು. ಆದರೆ ಕಾಮಗಾರಿ ಆಮೆವೇಗದಲ್ಲಿ ನಡೆಯುತ್ತಿರುವ ಬಗ್ಗೆ ಗುತ್ತಿಗೆದಾರರಿಂದ ವಿವರಣೆ ಕೇಳಿದಾಗ 2013ರ ಜನವರಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ ಎಂದು ಜಿ.ಪಂ ಸದಸ್ಯೆ ಉಮಾದೇವಿ ಹುಲಿರಾಜ್ ತಿಳಿಸಿದ್ದಾರೆ.<br /> <br /> ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದಧಿ ಕಚೇರಿಯವತಿಯಿಂದ ಭಾಗ್ಯಲಕ್ಷ್ಮಿ ಬಾಂದ್ ವಿತರಣೆ ಕಾರ್ಯಕ್ರಮ ಗುರುವಾರ ನಡೆಯಿತು.<br /> ಸ್ಟೇಶನ್ ಪ್ರದೇಶದ 4 ವಾರ್ಡ್ನ 300 ಫಲಾನುಭವಿ ಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್ಗಳನ್ನು ನಗರಸಭೆ ಸದಸ್ಯ ಯಲ್ಲಪ್ಪ, ಶಿವರಾಜ್, ಚಿಂದಪ್ಪ, ಮೊಟ್ಟಮ್ಮ ಹಾಗೂ ಜಿಂದಪ್ಪ, ಚಿನ್ನಿ ಅವರು ವಿತರಣೆ ಮಾಡಿದರು.<br /> <br /> ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಸಕ ಸಯ್ಯದ್ ಯಾಸಿನ್ ಮಾತನಾಡಿ, ಸರ್ಕಾರವು ಬಡ ವರ್ಗದ ಕುಟುಂಬದಲ್ಲಿ ಜನಿಸುವ ಹೆಣ್ಣು ಮಕ್ಕಳ ಜೀವನಕ್ಕೆ ಉಪಯುಕ್ತವಾಗಲು ಈ ಯೋಜನೆ ರೂಪಿಸಿದೆ. ಹೆಣ್ಣು ಮಕ್ಕಳ ವ್ಯಾಸಂಗೆ ಈ ಯೋಜನೆಯಿಂದ ಹೆಚ್ಚು ಸಹಕಾರಿಯಾಗಲಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಫಲಾನುಭವಿ ಗುರುತಿಸಬೇಕು ಎಂದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ಇಲ್ಲಿನ ಮಕ್ತಲ್ಪೇಟೆ ಬಡಾವಣೆಯಲ್ಲಿ ಗುರುವಾರ ಮಾಜಿ ಶಾಸಕ ಎ. ಪಾಪಾರೆಡ್ಡಿ ಸಿ.ಸಿ ರಸ್ತೆ ನಿರ್ಮಾಣ ಹಾಗೂ ಕುಡಿಯುವ ನೀರು ಪೂರೈಕೆಗೆ ಪೈಪ್ ಲೈನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.<br /> <br /> ಮಾತನಾಡಿದ ಅವರು, ಮನೋಹರ ಮಸ್ಕಿ ವಿಧಾನ ಪರಿಷತ್ ಸದಸ್ಯರಿದ್ದಾಗ ತಾವು ಮನವಿ ಮಾಡಿದ್ದರಿಂದ 5 ಲಕ್ಷ ಅನುದಾನವನ್ನು ಈ ಭಾಗದ ಅಭಿವೃದ್ಧಿ ಕೆಲಸಕ್ಕೆ ದೊರಕಿಸಿದ್ದರು. ಈಗ ಸಿಸಿ ರಸ್ತೆ, ಕುಡಿಯುವ ನೀರು ಪೂರೈಕೆ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದರ.ನಾಗರಿಕರ ಪರವಾಗಿ ಯಪಶೆಟ್ಟು ಗೋಪಾಲರೆಡ್ಡಿ ಅವರು ಮಾಜಿ ಶಾಸಕ ಪಾಪಾರೆಡ್ಡಿ ಅವರನ್ನು ಸತ್ಕರಿಸಿದರು.<br /> <br /> ಬಡಾವಣೆ ನಗರಸಭೆ ಸದಸ್ಯರಾದ ಟಿ ಮಲ್ಲೇಶ, ಯು ದೊಡ್ಡಮಲ್ಲೇಶಪ್ಪ, ಎನ್ ಶ್ರೀನಿವಾಸರೆಡ್ಡಿ, ಎಸ್ ಜನಾರ್ದನರೆಡ್ಡಿ, ಬಂಗಿ ನರಸರೆಡ್ಡಿ, ಈರಣ್ಣ, ಶಶಿಧರ ಏಗನೂರು, ಸುರೇಶ, ಪೊಗಲ್ ಶ್ರೀನಿವಾಸರೆಡ್ಡಿ, ಜಿ ವಿರೇಶರೆಡ್ಡಿ, ಎನ್ ಸತ್ಯಾರೆಡ್ಡಿ, ಕೆ ರವಿ ಹಾಗೂ ಇತರರಿದ್ದರು.<br /> <br /> ವಿದ್ಯುತ್ ಉಪಕೇಂದ್ರ ಶೀಘ್ರ ಪೂರ್ಣ: ಚಂದ್ರಬಂಡಾ ಗ್ರಾಮದಲ್ಲಿ ಹೊಸದಾಗಿ 33/11 ಕೆ.ವಿ ವಿದ್ಯುತ್ ಉಪಕೇಂದ್ರದ ಕಾಮಗಾರಿಯನ್ನು 2013ರ ಜನವರಿ ಅಥವಾ ಫೆಬ್ರುವರಿಲ್ಲಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರದಾದ ಹೈದರಾಬಾದಿನ ಪ್ರದೀಪ್ ಎಂಬುವವರು ತಿಳಿಸಿದ್ದಾರೆ ಎಂದು ಜಿ.ಪಂ ಸದಸ್ಯೆ ಉಮಾದೇವಿ ಹುಲಿರಾಜ್ ಹೇಳಿದ್ದಾರೆ.<br /> <br /> ಈ ಕುರಿತು ಪ್ರಕಟಣೆ ನೀಡಿರುವ ಅವರು, 33/11 ಕೆ.ವಿ ವಿದ್ಯುತ್ ಉಪ ಕೇಂದ್ರ ನಿರ್ಮಾಣ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿದೆ. ಈ ಭಾಗದ ರೈತರು ಮತ್ತು ಗ್ರಾಹಕರಿಗೆ ವಿದ್ಯುತ್ ಸಮಸ್ಯೆ ಇದೆ. ಇದರ ಪರಿಹಾರಕ್ಕಾಗಿ ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿ ಕೋರಿದ್ದರಿಂದ 4 ಕೋಟಿ ಹಣ ಬಿಡುಗಡೆ ಗೊಳಿಸಿದ್ದರು. ಆದರೆ ಕಾಮಗಾರಿ ಆಮೆವೇಗದಲ್ಲಿ ನಡೆಯುತ್ತಿರುವ ಬಗ್ಗೆ ಗುತ್ತಿಗೆದಾರರಿಂದ ವಿವರಣೆ ಕೇಳಿದಾಗ 2013ರ ಜನವರಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ ಎಂದು ಜಿ.ಪಂ ಸದಸ್ಯೆ ಉಮಾದೇವಿ ಹುಲಿರಾಜ್ ತಿಳಿಸಿದ್ದಾರೆ.<br /> <br /> ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದಧಿ ಕಚೇರಿಯವತಿಯಿಂದ ಭಾಗ್ಯಲಕ್ಷ್ಮಿ ಬಾಂದ್ ವಿತರಣೆ ಕಾರ್ಯಕ್ರಮ ಗುರುವಾರ ನಡೆಯಿತು.<br /> ಸ್ಟೇಶನ್ ಪ್ರದೇಶದ 4 ವಾರ್ಡ್ನ 300 ಫಲಾನುಭವಿ ಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್ಗಳನ್ನು ನಗರಸಭೆ ಸದಸ್ಯ ಯಲ್ಲಪ್ಪ, ಶಿವರಾಜ್, ಚಿಂದಪ್ಪ, ಮೊಟ್ಟಮ್ಮ ಹಾಗೂ ಜಿಂದಪ್ಪ, ಚಿನ್ನಿ ಅವರು ವಿತರಣೆ ಮಾಡಿದರು.<br /> <br /> ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಸಕ ಸಯ್ಯದ್ ಯಾಸಿನ್ ಮಾತನಾಡಿ, ಸರ್ಕಾರವು ಬಡ ವರ್ಗದ ಕುಟುಂಬದಲ್ಲಿ ಜನಿಸುವ ಹೆಣ್ಣು ಮಕ್ಕಳ ಜೀವನಕ್ಕೆ ಉಪಯುಕ್ತವಾಗಲು ಈ ಯೋಜನೆ ರೂಪಿಸಿದೆ. ಹೆಣ್ಣು ಮಕ್ಕಳ ವ್ಯಾಸಂಗೆ ಈ ಯೋಜನೆಯಿಂದ ಹೆಚ್ಚು ಸಹಕಾರಿಯಾಗಲಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಫಲಾನುಭವಿ ಗುರುತಿಸಬೇಕು ಎಂದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>