<p><strong>ಚಂಡೀಗಢ:</strong> ವಿಶೇಷ ನೋಂದಣಿ ಸಂಖ್ಯೆ (ಫ್ಯಾನ್ಸಿ ನಂಬರ್ ಪ್ಲೇಟ್) ಪಡೆಯಲು ₹1.17 ಕೋಟಿವರೆಗೂ ಹರಾಜು ಕೂಗಿದ್ದ ಹರಿಯಾಣದ ವ್ಯಕ್ತಿ, ಪೂರ್ಣ ಹಣ ಪಾವತಿಸಲು ವಿಫಲವಾಗಿದ್ದಾರೆ.</p>.<p>ಗಡುವಿನ ಒಳಗೆ ಹಣ ಪಾವತಿಸದ ಬಿಡ್ದಾರನ ಆದಾಯ ಮತ್ತು ಪಾವತಿ ಸಾಮರ್ಥ್ಯವನ್ನು ಪರಿಶೀಲನೆ ಮಾಡುವಂತೆ ಹರಿಯಾಣ ಸಾರಿಗೆ ಸಚಿವ ಅನಿಲ್ ವಿಜ್ ಅವರು ಬುಧವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.</p>.<p>ಕಳೆದ ವಾರ ಹಿಸಾರ್ನ ವ್ಯಕ್ತಿಯೊಬ್ಬರು ಎಚ್ಆರ್–88–ಬಿ–8888 ನೋಂದಣಿ ಸಂಖ್ಯೆ ಪಡೆಯಲು ಅತಿ ಹೆಚ್ಚಿನ ಮೊತ್ತಕ್ಕೆ ಹರಾಜು ಕೂಗಿದ್ದರು. ಚಾರ್ಕಿ ದಾದ್ರಿ ಜಿಲ್ಲೆಯ ಬಾಧ್ರಾ ಉಪ ವಿಭಾಗ ₹1.17 ಕೋಟಿ ಮೊತ್ತವನ್ನು ನೋಂದಣಿಗಾಗಿ ನಿಗದಿ ಮಾಡಿತ್ತು. ₹1,000 ಪ್ರವೇಶ ಶುಲ್ಕ ಮತ್ತು ₹10,000 ಭದ್ರತಾ ಠೇವಣಿ ಇಟ್ಟಿದ್ದ ಆ ವ್ಯಕ್ತಿ, ಸೋಮವಾರದ ಒಳಗೆ ಪೂರ್ಣ ಹಣ ಪಾವತಿ ಮಾಡಬೇಕಿತ್ತು.</p>.<p>ನಿಗದಿತ ಅವಧಿಯಲ್ಲಿ ಬಿಡ್ದಾರ ಹಣ ಪಾವತಿಸದೇ ಇರುವುದು ಬುಧವಾರ ಸಚಿವರ ಗಮನಕ್ಕೆ ಬಂದಿತ್ತು. ಆ ವ್ಯಕ್ತಿಯ ಆದಾಯ ಮತ್ತು ಸಂಪತ್ತಿನ ಪರಿಶೀಲನೆ ಮಾಡಿ, ಅಷ್ಟು ಹಣ ಪಾವತಿಸುವ ಸಾಮರ್ಥ್ಯ ಇದೆಯೇ ಎಂಬುದನ್ನು ತಿಳಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ವಿಜ್ ತಿಳಿಸಿದರು.</p>.<p>‘ಭದ್ರತಾ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಂಡು, ನೋಂದಣಿ ಸಂಖ್ಯೆಯನ್ನು ಮತ್ತೆ ಹರಾಜು ಕೂಗಲಾಗುವುದು’ ಎಂದು ಸಚಿವರು ಹೇಳಿದ್ದಾರೆ.</p>.<p>‘ಆದಾಯ ತೆರಿಗೆ ಇಲಾಖೆಗೂ (ಐ.ಟಿ) ಲಿಖಿತ ಮನವಿ ಸಲ್ಲಿಸಿ ಆ ವ್ಯಕ್ತಿಯ ಆದಾಯ ಮೂಲದ ಸಮಗ್ರ ತನಿಖೆ ನಡೆಸಲು ಕೋರುತ್ತೇವೆ. ಇದರಿಂದ ಮುಂದಿನ ದಿನಗಳಲ್ಲಿ ಕೆಲವರು ಸುಳ್ಳು ಮಾಹಿತಿ ನೀಡಿ ಹರಾಜಿನಲ್ಲಿ ಪಾಲ್ಗೊಳ್ಳುವುದು ತಪ್ಪಲಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಗಢ:</strong> ವಿಶೇಷ ನೋಂದಣಿ ಸಂಖ್ಯೆ (ಫ್ಯಾನ್ಸಿ ನಂಬರ್ ಪ್ಲೇಟ್) ಪಡೆಯಲು ₹1.17 ಕೋಟಿವರೆಗೂ ಹರಾಜು ಕೂಗಿದ್ದ ಹರಿಯಾಣದ ವ್ಯಕ್ತಿ, ಪೂರ್ಣ ಹಣ ಪಾವತಿಸಲು ವಿಫಲವಾಗಿದ್ದಾರೆ.</p>.<p>ಗಡುವಿನ ಒಳಗೆ ಹಣ ಪಾವತಿಸದ ಬಿಡ್ದಾರನ ಆದಾಯ ಮತ್ತು ಪಾವತಿ ಸಾಮರ್ಥ್ಯವನ್ನು ಪರಿಶೀಲನೆ ಮಾಡುವಂತೆ ಹರಿಯಾಣ ಸಾರಿಗೆ ಸಚಿವ ಅನಿಲ್ ವಿಜ್ ಅವರು ಬುಧವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.</p>.<p>ಕಳೆದ ವಾರ ಹಿಸಾರ್ನ ವ್ಯಕ್ತಿಯೊಬ್ಬರು ಎಚ್ಆರ್–88–ಬಿ–8888 ನೋಂದಣಿ ಸಂಖ್ಯೆ ಪಡೆಯಲು ಅತಿ ಹೆಚ್ಚಿನ ಮೊತ್ತಕ್ಕೆ ಹರಾಜು ಕೂಗಿದ್ದರು. ಚಾರ್ಕಿ ದಾದ್ರಿ ಜಿಲ್ಲೆಯ ಬಾಧ್ರಾ ಉಪ ವಿಭಾಗ ₹1.17 ಕೋಟಿ ಮೊತ್ತವನ್ನು ನೋಂದಣಿಗಾಗಿ ನಿಗದಿ ಮಾಡಿತ್ತು. ₹1,000 ಪ್ರವೇಶ ಶುಲ್ಕ ಮತ್ತು ₹10,000 ಭದ್ರತಾ ಠೇವಣಿ ಇಟ್ಟಿದ್ದ ಆ ವ್ಯಕ್ತಿ, ಸೋಮವಾರದ ಒಳಗೆ ಪೂರ್ಣ ಹಣ ಪಾವತಿ ಮಾಡಬೇಕಿತ್ತು.</p>.<p>ನಿಗದಿತ ಅವಧಿಯಲ್ಲಿ ಬಿಡ್ದಾರ ಹಣ ಪಾವತಿಸದೇ ಇರುವುದು ಬುಧವಾರ ಸಚಿವರ ಗಮನಕ್ಕೆ ಬಂದಿತ್ತು. ಆ ವ್ಯಕ್ತಿಯ ಆದಾಯ ಮತ್ತು ಸಂಪತ್ತಿನ ಪರಿಶೀಲನೆ ಮಾಡಿ, ಅಷ್ಟು ಹಣ ಪಾವತಿಸುವ ಸಾಮರ್ಥ್ಯ ಇದೆಯೇ ಎಂಬುದನ್ನು ತಿಳಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ವಿಜ್ ತಿಳಿಸಿದರು.</p>.<p>‘ಭದ್ರತಾ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಂಡು, ನೋಂದಣಿ ಸಂಖ್ಯೆಯನ್ನು ಮತ್ತೆ ಹರಾಜು ಕೂಗಲಾಗುವುದು’ ಎಂದು ಸಚಿವರು ಹೇಳಿದ್ದಾರೆ.</p>.<p>‘ಆದಾಯ ತೆರಿಗೆ ಇಲಾಖೆಗೂ (ಐ.ಟಿ) ಲಿಖಿತ ಮನವಿ ಸಲ್ಲಿಸಿ ಆ ವ್ಯಕ್ತಿಯ ಆದಾಯ ಮೂಲದ ಸಮಗ್ರ ತನಿಖೆ ನಡೆಸಲು ಕೋರುತ್ತೇವೆ. ಇದರಿಂದ ಮುಂದಿನ ದಿನಗಳಲ್ಲಿ ಕೆಲವರು ಸುಳ್ಳು ಮಾಹಿತಿ ನೀಡಿ ಹರಾಜಿನಲ್ಲಿ ಪಾಲ್ಗೊಳ್ಳುವುದು ತಪ್ಪಲಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>