<p><strong>ಮುಂಬೈ: </strong>ಹಣದುಬ್ಬರ ನಿಯಂತ್ರಿಸಲು ರಿಸರ್ವ್ ಬ್ಯಾಂಕ್ (ಆರ್ಬಿಐ) ಈಚೆಗೆ ಮಾಡಿರುವ ರೆಪೊ ದರ ಏರಿಕೆಯು ಎಷ್ಟರಮಟ್ಟಿಗೆ ಪರಿಣಾಮ ಬೀರಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಆರ್ಬಿಐ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸದಸ್ಯ ಜೆ.ಆರ್. ವರ್ಮಾ ಹೇಳಿದ್ದಾರೆ.</p>.<p>ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಬಡ್ಡಿದರ ಹೊಂದಾಣಿಕೆಯ ಪ್ರಮಾಣವು ನಿರ್ಧಾರವಾಗಲಿದೆ ಎಂದೂ ಅವರು ತಿಳಿಸಿದ್ದಾರೆ.</p>.<p>‘ಆರ್ಥಿಕ ಬೆಳವಣಿಗೆಯು ಉತ್ತಮವಾಗಿದ್ದರೆ, ಹಣದುಬ್ಬರವನ್ನು ಶೇ 4ಕ್ಕೆ ಇಳಿಕೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಆದರೆ, ಆರ್ಥಿಕತೆಯು ಬೆಳವಣಿಗೆ ಸಾಧಿಸಲು ಹೆಣಗಾಡುತ್ತಿದ್ದಲ್ಲಿ ಬಡ್ಡಿದರದಲ್ಲಿ ನಿಧಾನಗತಿಯ ಹೊಂದಾಣಿಕೆಯ ಸಾಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.</p>.<p>ಆರ್ಬಿಐ ಆಗಸ್ಟ್ ತಿಂಗಳಿನಲ್ಲಿ ರೆಪೊ ದರವನ್ನು ಶೇ 0.50ರಷ್ಟು ಹೆಚ್ಚಿಸಿದೆ. ಇದರಿಂದಾಗಿ ಮೇ ತಿಂಗಳಿನಿಂದ ಆಗಸ್ಟ್ವರೆಗೆ ರೆಪೊ ದರವು ಒಟ್ಟಾರೆ ಶೇ 1.40ರಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್ 30ರಂದು ಆರ್ಬಿಐ ರೆಪೊ ದರವನ್ನು ಮತ್ತೆ ಶೇ 0.50ರಷ್ಟು ಹೆಚ್ಚಿಸುವ ನಿರೀಕ್ಷೆ ಮಾಡಲಾಗಿದೆ.</p>.<p>‘ನಗದು ಲಭ್ಯತೆಯನ್ನು ನಿಯಂತ್ರಿಸಲು ಬ್ಯಾಂಕ್ಗಳ ಮಧ್ಯೆ ವಿತರಿಸುವ ಅಲ್ಪಾವಧಿಯ ಸಾಲದ ಬಡ್ಡಿದರವನ್ನು ಗರಿಷ್ಠ ಮಟ್ಟದಲ್ಲಿ ಇಡಲಾಗಿದೆ. ಹೀಗಾಗಿ ಬಡ್ಡಿದರ ಏರಿಕೆಯು ನಿಜವಾಗಿಯೂ ಶೇ 1.40ರಷ್ಟು ಅಲ್ಲ, ಬದಲಾಗಿ ಶೇ 2.05ರಷ್ಟು ಹೆಚ್ಚಾಗಿದೆ’ ಎಂದು ಅವರು ವಿವರಿಸಿದ್ದಾರೆ.</p>.<p>‘ಸದ್ಯ ನಾವು ಗರಿಷ್ಠ ಹಣದುಬ್ಬರ ಮತ್ತು ಮಂದಗತಿಯ ಆರ್ಥಿಕ ಬೆಳವಣಿಗೆಯ ಸ್ಥಿತಿಯಲ್ಲಿ ಇದ್ದೇವೆ. ಹೀಗಾಗಿ ನೈಜ ಬಡ್ಡಿದರವು ‘ತಟಸ್ಥ ದರ’ಕ್ಕಿಂತಲೂ (ಶೇ 6 ರಿಂದ ಶೇ 6.25ರವರೆಗೆ) ತುಸು ಹೆಚ್ಚಿನ ಮಟ್ಟದಲ್ಲಿ ಇರಲಿದೆ. ನೈಜ ಬಡ್ಡಿದರವನ್ನು ಹಾಲಿ ಇರುವ ಹಣದುಬ್ಬರದ ಪ್ರಮಾಣದ ಆಧಾರದ ಮೇಲೆ ಅಂದಾಜು ಮಾಡುವುದಕ್ಕೆ ಬದಲಾಗಿ ಮೂರರಿಂದ ನಾಲ್ಕು ತ್ರೈಮಾಸಿಕಗಳ ಹಣದುಬ್ಬರವನ್ನು ಒಟ್ಟುಗೂಡಿಸಿ ಅಂದಾಜು ಮಾಡಬೇಕಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.</p>.<p>ಆರ್ಬಿಐಗೆ ಬಡ್ಡಿದರ ಏರಿಸಲು ಅವಕಾಶ ಇದೆಯಾದರೂ ಬಹುಶಃ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡಲು ಅಲ್ಲ ಎಂದು ಹೇಳಿದ್ದಾರೆ.</p>.<p><strong>‘ಶೇ 5ಕ್ಕೆ ಇಳಿಯಲಿದೆ ಹಣದುಬ್ಬರ’</strong><br />ಹಣದುಬ್ಬರವು ಮುಂದಿನ ವರ್ಷದ ಏಪ್ರಿಲ್–ಜೂನ್ ತ್ರೈಮಾಸಿಕದಲ್ಲಿ ಶೇ 5ರ ಆಸುಪಾಸಿಗೆ ಇಳಿಕೆ ಕಾಣುವ ನಿರೀಕ್ಷೆ ಇದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಜೀ ಬಿಸಿನೆಸ್ ಟಿ.ವಿ.ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.</p>.<p>ಚಿಲ್ಲರೆ ಹಣದುಬ್ಬರವು ಹಲವು ತಿಂಗಳುಗಳಿಂದ ಶೇ 6ರ ಮಟ್ಟಕ್ಕಿಂತಲೂ ಹೆಚ್ಚಿಗೆ ಇದೆ. ಜುಲೈನಲ್ಲಿ ಚಿಲ್ಲರೆ ಹಣದುಬ್ಬರವು ಶೇ 6.71ರಷ್ಟಾಗಿದೆ.</p>.<p>ಆರ್ಥಿಕ ಬೆಳವಣಿಗೆಯ ಮೇಲೆ ಹೆಚ್ಚಿನ ಪರಿಣಾಮ ಆಗದೇ ಇರುವ ರೀತಿಯಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಹಣಕಾಸು ನೀತಿಯ ಗಮನ ಹರಿಸಲಿದೆ ಎಂದೂ ಅವರು ಹೇಳಿದ್ದಾರೆ.</p>.<p>ವಿದೇಶಿ ವಿನಿಮಯ ಮೀಸಲು ಸಂಗ್ರಹ ಹೆಚ್ಚಿನ ಮಟ್ಟದಲ್ಲಿ ಇರುವುದು ರೂಪಾಯಿ ಸ್ಥಿರವಾಗಿರಲು ನೆರವಾಗಿದೆ ಎಂದು ದಾಸ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ: </strong>ಹಣದುಬ್ಬರ ನಿಯಂತ್ರಿಸಲು ರಿಸರ್ವ್ ಬ್ಯಾಂಕ್ (ಆರ್ಬಿಐ) ಈಚೆಗೆ ಮಾಡಿರುವ ರೆಪೊ ದರ ಏರಿಕೆಯು ಎಷ್ಟರಮಟ್ಟಿಗೆ ಪರಿಣಾಮ ಬೀರಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಆರ್ಬಿಐ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸದಸ್ಯ ಜೆ.ಆರ್. ವರ್ಮಾ ಹೇಳಿದ್ದಾರೆ.</p>.<p>ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಬಡ್ಡಿದರ ಹೊಂದಾಣಿಕೆಯ ಪ್ರಮಾಣವು ನಿರ್ಧಾರವಾಗಲಿದೆ ಎಂದೂ ಅವರು ತಿಳಿಸಿದ್ದಾರೆ.</p>.<p>‘ಆರ್ಥಿಕ ಬೆಳವಣಿಗೆಯು ಉತ್ತಮವಾಗಿದ್ದರೆ, ಹಣದುಬ್ಬರವನ್ನು ಶೇ 4ಕ್ಕೆ ಇಳಿಕೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಆದರೆ, ಆರ್ಥಿಕತೆಯು ಬೆಳವಣಿಗೆ ಸಾಧಿಸಲು ಹೆಣಗಾಡುತ್ತಿದ್ದಲ್ಲಿ ಬಡ್ಡಿದರದಲ್ಲಿ ನಿಧಾನಗತಿಯ ಹೊಂದಾಣಿಕೆಯ ಸಾಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.</p>.<p>ಆರ್ಬಿಐ ಆಗಸ್ಟ್ ತಿಂಗಳಿನಲ್ಲಿ ರೆಪೊ ದರವನ್ನು ಶೇ 0.50ರಷ್ಟು ಹೆಚ್ಚಿಸಿದೆ. ಇದರಿಂದಾಗಿ ಮೇ ತಿಂಗಳಿನಿಂದ ಆಗಸ್ಟ್ವರೆಗೆ ರೆಪೊ ದರವು ಒಟ್ಟಾರೆ ಶೇ 1.40ರಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್ 30ರಂದು ಆರ್ಬಿಐ ರೆಪೊ ದರವನ್ನು ಮತ್ತೆ ಶೇ 0.50ರಷ್ಟು ಹೆಚ್ಚಿಸುವ ನಿರೀಕ್ಷೆ ಮಾಡಲಾಗಿದೆ.</p>.<p>‘ನಗದು ಲಭ್ಯತೆಯನ್ನು ನಿಯಂತ್ರಿಸಲು ಬ್ಯಾಂಕ್ಗಳ ಮಧ್ಯೆ ವಿತರಿಸುವ ಅಲ್ಪಾವಧಿಯ ಸಾಲದ ಬಡ್ಡಿದರವನ್ನು ಗರಿಷ್ಠ ಮಟ್ಟದಲ್ಲಿ ಇಡಲಾಗಿದೆ. ಹೀಗಾಗಿ ಬಡ್ಡಿದರ ಏರಿಕೆಯು ನಿಜವಾಗಿಯೂ ಶೇ 1.40ರಷ್ಟು ಅಲ್ಲ, ಬದಲಾಗಿ ಶೇ 2.05ರಷ್ಟು ಹೆಚ್ಚಾಗಿದೆ’ ಎಂದು ಅವರು ವಿವರಿಸಿದ್ದಾರೆ.</p>.<p>‘ಸದ್ಯ ನಾವು ಗರಿಷ್ಠ ಹಣದುಬ್ಬರ ಮತ್ತು ಮಂದಗತಿಯ ಆರ್ಥಿಕ ಬೆಳವಣಿಗೆಯ ಸ್ಥಿತಿಯಲ್ಲಿ ಇದ್ದೇವೆ. ಹೀಗಾಗಿ ನೈಜ ಬಡ್ಡಿದರವು ‘ತಟಸ್ಥ ದರ’ಕ್ಕಿಂತಲೂ (ಶೇ 6 ರಿಂದ ಶೇ 6.25ರವರೆಗೆ) ತುಸು ಹೆಚ್ಚಿನ ಮಟ್ಟದಲ್ಲಿ ಇರಲಿದೆ. ನೈಜ ಬಡ್ಡಿದರವನ್ನು ಹಾಲಿ ಇರುವ ಹಣದುಬ್ಬರದ ಪ್ರಮಾಣದ ಆಧಾರದ ಮೇಲೆ ಅಂದಾಜು ಮಾಡುವುದಕ್ಕೆ ಬದಲಾಗಿ ಮೂರರಿಂದ ನಾಲ್ಕು ತ್ರೈಮಾಸಿಕಗಳ ಹಣದುಬ್ಬರವನ್ನು ಒಟ್ಟುಗೂಡಿಸಿ ಅಂದಾಜು ಮಾಡಬೇಕಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.</p>.<p>ಆರ್ಬಿಐಗೆ ಬಡ್ಡಿದರ ಏರಿಸಲು ಅವಕಾಶ ಇದೆಯಾದರೂ ಬಹುಶಃ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡಲು ಅಲ್ಲ ಎಂದು ಹೇಳಿದ್ದಾರೆ.</p>.<p><strong>‘ಶೇ 5ಕ್ಕೆ ಇಳಿಯಲಿದೆ ಹಣದುಬ್ಬರ’</strong><br />ಹಣದುಬ್ಬರವು ಮುಂದಿನ ವರ್ಷದ ಏಪ್ರಿಲ್–ಜೂನ್ ತ್ರೈಮಾಸಿಕದಲ್ಲಿ ಶೇ 5ರ ಆಸುಪಾಸಿಗೆ ಇಳಿಕೆ ಕಾಣುವ ನಿರೀಕ್ಷೆ ಇದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಜೀ ಬಿಸಿನೆಸ್ ಟಿ.ವಿ.ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.</p>.<p>ಚಿಲ್ಲರೆ ಹಣದುಬ್ಬರವು ಹಲವು ತಿಂಗಳುಗಳಿಂದ ಶೇ 6ರ ಮಟ್ಟಕ್ಕಿಂತಲೂ ಹೆಚ್ಚಿಗೆ ಇದೆ. ಜುಲೈನಲ್ಲಿ ಚಿಲ್ಲರೆ ಹಣದುಬ್ಬರವು ಶೇ 6.71ರಷ್ಟಾಗಿದೆ.</p>.<p>ಆರ್ಥಿಕ ಬೆಳವಣಿಗೆಯ ಮೇಲೆ ಹೆಚ್ಚಿನ ಪರಿಣಾಮ ಆಗದೇ ಇರುವ ರೀತಿಯಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಹಣಕಾಸು ನೀತಿಯ ಗಮನ ಹರಿಸಲಿದೆ ಎಂದೂ ಅವರು ಹೇಳಿದ್ದಾರೆ.</p>.<p>ವಿದೇಶಿ ವಿನಿಮಯ ಮೀಸಲು ಸಂಗ್ರಹ ಹೆಚ್ಚಿನ ಮಟ್ಟದಲ್ಲಿ ಇರುವುದು ರೂಪಾಯಿ ಸ್ಥಿರವಾಗಿರಲು ನೆರವಾಗಿದೆ ಎಂದು ದಾಸ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>