<p><strong>ಮಂಗಳೂರು:</strong> ನಕಲಿ ರಸೀದಿಗಳನ್ನು ಸೃಷ್ಟಿಸಿ ಜಿಎಸ್ಟಿ ವಂಚಿಸುತ್ತಿದ್ದ ಜಾಲವನ್ನು ಇಲ್ಲಿನ ಕೇಂದ್ರ ಜಿಎಸ್ಟಿ ಅಧಿಕಾರಿ<br />ಗಳ ತಂಡ ಪತ್ತೆ ಮಾಡಿದೆ. ಇಬ್ಬರನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕೋರ್ಟ್ ತನಿಖೆಗಾಗಿ ಆರೋಪಿಗಳನ್ನು ಏ.1 ರವರೆಗೆ ಜಿಎಸ್ಟಿ ಅಧಿಕಾರಿಗಳ ವಶಕ್ಕೆ ನೀಡಿತು.</p>.<p>ಶ್ರೀನಿವಾಸ ಟ್ರೇಡರ್ಸ್ನ ಛತ್ರಭೋಜ ಭಾನುಸಾಲಿ ಹಾಗೂ ಶ್ಯಾಮ್ ಟ್ರೇಡರ್ಸ್ನ ಶ್ರೀಧರ್ ಹೆಗ್ಡೆ ಬಂಧಿತರು. ಶಿರಸಿ, ಪುತ್ತೂರು, ಮಂಗಳೂರು, ಚಿತ್ರದುರ್ಗ ಸೇರಿ ರಾಜ್ಯದ ವಿವಿಧೆಡೆ ಅಡಿಕೆ ಪೂರೈಕೆಗೆ ಸಂಬಂಧಿಸಿ ನಕಲಿ ರಸೀದಿಗಳನ್ನು ಈ ಜಾಲ ನೀಡುತ್ತಿತ್ತು. ಜೊತೆಗೆ ಕೆಲ ಟ್ರಾನ್ಸ್ಪೋರ್ಟ್ ಕಂಪನಿಗಳೂ ಶಾಮೀಲಾಗಿರುವುದು ಪತ್ತೆಯಾಗಿದೆ.</p>.<p>ಕಂಪನಿಗಳುರಸೀದಿಯಲ್ಲಿ ನೀಡಿದ್ದ ವಿಳಾಸಕ್ಕೆ ಹೋಗಿ ನೋಡಿದಾಗ ಪೀಠೋಪಕರಣ, ಕಂಪ್ಯೂಟರ್, ದಾಖಲೆಗಳು ಯಾವುದೂ ಇರಲಿಲ್ಲ. ಈ ವಿಳಾಸವನ್ನು ಕೇವಲ ಜಿಎಸ್ಟಿ ನೋಂದಣಿಗಾಗಿ ಬಳಸಲಾಗಿದೆ ಎಂಬುದು ಖಚಿತವಾಗಿದೆ. ಬಂಧಿತರಿಂದ ದಾಖಲೆಗಳು ಹಾಗೂ ಫೋನ್ ಸಂಭಾಷಣೆ ವಿವರಗಳನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ.</p>.<p>₹17 ಕೋಟಿಯಷ್ಟು ಜಿಎಸ್ಟಿ ವಂಚಿಸಿರುವುದು ಪತ್ತೆಯಾಗಿದ್ದು, ₹3.2 ಕೋಟಿ ವಸೂಲಿ ಮಾಡಲಾಗಿದೆ. ಕೇಂದ್ರ ಜಿಎಸ್ಟಿ ಆಯುಕ್ತ ಇಮಾಮುದ್ದೀನ್ ಅಹ್ಮದ್ ನೇತೃತ್ವದಲ್ಲಿ ಸಹಾಯಕ ಆಯುಕ್ತ ರಾಜೇಶ್ ಪೂಜಾರಿ, ಅಧೀಕ್ಷಕರಾದ ರಾಜಗೋಪಾಲ್, ಪುಷ್ಪೇಂದ್ರ ಸಿಂಗ್, ಇನ್ಸ್ಪೆಕ್ಟರ್ಗಳಾದ ಪಾರ್ಥಸಾರಥಿ, ಶೈಲೇಂದ್ರ ಜೈನ್, ಅರ್ಪಿತ್ ಕರ್ಮಾ, ಅಭಿನವ ಕುಮಾರ್ ಅವರನ್ನು ಒಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ನಕಲಿ ರಸೀದಿಗಳನ್ನು ಸೃಷ್ಟಿಸಿ ಜಿಎಸ್ಟಿ ವಂಚಿಸುತ್ತಿದ್ದ ಜಾಲವನ್ನು ಇಲ್ಲಿನ ಕೇಂದ್ರ ಜಿಎಸ್ಟಿ ಅಧಿಕಾರಿ<br />ಗಳ ತಂಡ ಪತ್ತೆ ಮಾಡಿದೆ. ಇಬ್ಬರನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕೋರ್ಟ್ ತನಿಖೆಗಾಗಿ ಆರೋಪಿಗಳನ್ನು ಏ.1 ರವರೆಗೆ ಜಿಎಸ್ಟಿ ಅಧಿಕಾರಿಗಳ ವಶಕ್ಕೆ ನೀಡಿತು.</p>.<p>ಶ್ರೀನಿವಾಸ ಟ್ರೇಡರ್ಸ್ನ ಛತ್ರಭೋಜ ಭಾನುಸಾಲಿ ಹಾಗೂ ಶ್ಯಾಮ್ ಟ್ರೇಡರ್ಸ್ನ ಶ್ರೀಧರ್ ಹೆಗ್ಡೆ ಬಂಧಿತರು. ಶಿರಸಿ, ಪುತ್ತೂರು, ಮಂಗಳೂರು, ಚಿತ್ರದುರ್ಗ ಸೇರಿ ರಾಜ್ಯದ ವಿವಿಧೆಡೆ ಅಡಿಕೆ ಪೂರೈಕೆಗೆ ಸಂಬಂಧಿಸಿ ನಕಲಿ ರಸೀದಿಗಳನ್ನು ಈ ಜಾಲ ನೀಡುತ್ತಿತ್ತು. ಜೊತೆಗೆ ಕೆಲ ಟ್ರಾನ್ಸ್ಪೋರ್ಟ್ ಕಂಪನಿಗಳೂ ಶಾಮೀಲಾಗಿರುವುದು ಪತ್ತೆಯಾಗಿದೆ.</p>.<p>ಕಂಪನಿಗಳುರಸೀದಿಯಲ್ಲಿ ನೀಡಿದ್ದ ವಿಳಾಸಕ್ಕೆ ಹೋಗಿ ನೋಡಿದಾಗ ಪೀಠೋಪಕರಣ, ಕಂಪ್ಯೂಟರ್, ದಾಖಲೆಗಳು ಯಾವುದೂ ಇರಲಿಲ್ಲ. ಈ ವಿಳಾಸವನ್ನು ಕೇವಲ ಜಿಎಸ್ಟಿ ನೋಂದಣಿಗಾಗಿ ಬಳಸಲಾಗಿದೆ ಎಂಬುದು ಖಚಿತವಾಗಿದೆ. ಬಂಧಿತರಿಂದ ದಾಖಲೆಗಳು ಹಾಗೂ ಫೋನ್ ಸಂಭಾಷಣೆ ವಿವರಗಳನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ.</p>.<p>₹17 ಕೋಟಿಯಷ್ಟು ಜಿಎಸ್ಟಿ ವಂಚಿಸಿರುವುದು ಪತ್ತೆಯಾಗಿದ್ದು, ₹3.2 ಕೋಟಿ ವಸೂಲಿ ಮಾಡಲಾಗಿದೆ. ಕೇಂದ್ರ ಜಿಎಸ್ಟಿ ಆಯುಕ್ತ ಇಮಾಮುದ್ದೀನ್ ಅಹ್ಮದ್ ನೇತೃತ್ವದಲ್ಲಿ ಸಹಾಯಕ ಆಯುಕ್ತ ರಾಜೇಶ್ ಪೂಜಾರಿ, ಅಧೀಕ್ಷಕರಾದ ರಾಜಗೋಪಾಲ್, ಪುಷ್ಪೇಂದ್ರ ಸಿಂಗ್, ಇನ್ಸ್ಪೆಕ್ಟರ್ಗಳಾದ ಪಾರ್ಥಸಾರಥಿ, ಶೈಲೇಂದ್ರ ಜೈನ್, ಅರ್ಪಿತ್ ಕರ್ಮಾ, ಅಭಿನವ ಕುಮಾರ್ ಅವರನ್ನು ಒಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>