<p><strong>ನವದೆಹಲಿ:</strong> ಪಾಸ್ಫೇಟ್ ಹಾಗೂ ಪೊಟಾಷ್ ರಸಗೊಬ್ಬರಗಳ ಪೋಷಕಾಂಶ ಆಧಾರಿತ ಸಬ್ಸಿಡಿಯಲ್ಲಿ (ಎನ್ಬಿಎಸ್) ಪ್ರಸಕ್ತ ಹಣಕಾಸು ವರ್ಷದಲ್ಲಿ (2021–22) ಯಾವುದೇ ಬದಲಾವಣೆ ಮಾಡದಿರಲು ಸರ್ಕಾರ ತೀರ್ಮಾನಿಸಿದೆ.</p>.<p>ಕಳೆದ ಹಣಕಾಸು ವರ್ಷದಲ್ಲಿ ಸಾರಜನಕಕ್ಕೆ (ಎನ್) ಕೆ.ಜಿ.ಗೆ ₹ 18.78, ಪಾಸ್ಪೇಟ್ಗೆ (ಪಿ) ಕೆ.ಜಿ.ಗೆ ₹ 14.88, ಪೊಟಾಷ್ಗೆ (ಕೆ) ಕೆ.ಜಿ.ಗೆ ₹ 10.11 ಹಾಗೂ ಗಂಧಕಕ್ಕೆ ಕೆ.ಜಿ.ಗೆ ₹ 2.37 ಸಬ್ಸಿಡಿ ನಿಗದಿ ಮಾಡಲಾಗಿತ್ತು.</p>.<p>‘ಮುಂದಿನ ಆದೇಶ ಬರುವವರೆಗೂ ಪೋಷಕಾಂಶ ಆಧಾರಿತ ಗೊಬ್ಬರಗಳ ಸಬ್ಸಿಡಿಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಲಾಗಿದೆ’ ಎಂದು ರಸಗೊಬ್ಬರ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ. ರಸಗೊಬ್ಬರಗಳ ಬೆಲೆಯಲ್ಲಿ ಹೆಚ್ಚಳ ಮಾಡದಂತೆ ಸರ್ಕಾರ ಶುಕ್ರವಾರವೇ ಗೊಬ್ಬರ ತಯಾರಿಕಾ ಸಂಸ್ಥೆಗಳಿಗೆ ಸೂಚನೆ ನೀಡಿದೆ.</p>.<p>ಜಾಗತಿಕ ಮಟ್ಟದಲ್ಲಿ ರಸಗೊಬ್ಬರದ ದರ ಹೆಚ್ಚಳವಾಗಿರುವುದು ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಆಗಿರುವುದರಿಂದ, ಕಳೆದ ವರ್ಷದ ಸಬ್ಸಿಡಿಯನ್ನೇ ಮುಂದುವರಿಸಿದರೆ, ಚಿಲ್ಲರೆ ಮಾರಾಟ ಬೆಲೆಯ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ ಎಂದು ಗೊಬ್ಬರ ತಯಾರಿಕಾ ಸಂಸ್ಥೆಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಪಾಸ್ಫೇಟ್ ಹಾಗೂ ಪೊಟಾಷ್ ರಸಗೊಬ್ಬರಗಳ ಪೋಷಕಾಂಶ ಆಧಾರಿತ ಸಬ್ಸಿಡಿಯಲ್ಲಿ (ಎನ್ಬಿಎಸ್) ಪ್ರಸಕ್ತ ಹಣಕಾಸು ವರ್ಷದಲ್ಲಿ (2021–22) ಯಾವುದೇ ಬದಲಾವಣೆ ಮಾಡದಿರಲು ಸರ್ಕಾರ ತೀರ್ಮಾನಿಸಿದೆ.</p>.<p>ಕಳೆದ ಹಣಕಾಸು ವರ್ಷದಲ್ಲಿ ಸಾರಜನಕಕ್ಕೆ (ಎನ್) ಕೆ.ಜಿ.ಗೆ ₹ 18.78, ಪಾಸ್ಪೇಟ್ಗೆ (ಪಿ) ಕೆ.ಜಿ.ಗೆ ₹ 14.88, ಪೊಟಾಷ್ಗೆ (ಕೆ) ಕೆ.ಜಿ.ಗೆ ₹ 10.11 ಹಾಗೂ ಗಂಧಕಕ್ಕೆ ಕೆ.ಜಿ.ಗೆ ₹ 2.37 ಸಬ್ಸಿಡಿ ನಿಗದಿ ಮಾಡಲಾಗಿತ್ತು.</p>.<p>‘ಮುಂದಿನ ಆದೇಶ ಬರುವವರೆಗೂ ಪೋಷಕಾಂಶ ಆಧಾರಿತ ಗೊಬ್ಬರಗಳ ಸಬ್ಸಿಡಿಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಲಾಗಿದೆ’ ಎಂದು ರಸಗೊಬ್ಬರ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ. ರಸಗೊಬ್ಬರಗಳ ಬೆಲೆಯಲ್ಲಿ ಹೆಚ್ಚಳ ಮಾಡದಂತೆ ಸರ್ಕಾರ ಶುಕ್ರವಾರವೇ ಗೊಬ್ಬರ ತಯಾರಿಕಾ ಸಂಸ್ಥೆಗಳಿಗೆ ಸೂಚನೆ ನೀಡಿದೆ.</p>.<p>ಜಾಗತಿಕ ಮಟ್ಟದಲ್ಲಿ ರಸಗೊಬ್ಬರದ ದರ ಹೆಚ್ಚಳವಾಗಿರುವುದು ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಆಗಿರುವುದರಿಂದ, ಕಳೆದ ವರ್ಷದ ಸಬ್ಸಿಡಿಯನ್ನೇ ಮುಂದುವರಿಸಿದರೆ, ಚಿಲ್ಲರೆ ಮಾರಾಟ ಬೆಲೆಯ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ ಎಂದು ಗೊಬ್ಬರ ತಯಾರಿಕಾ ಸಂಸ್ಥೆಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>