<p><strong>ನವದೆಹಲಿ</strong> : ದೇಶದ ಆರ್ಥಿಕ ಸ್ಥಿತಿಯು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹದಗೆಡುತ್ತಲೇ ಇದೆ. ಕೇಂದ್ರ ಸರ್ಕಾರ ಕೈಗೊಂಡಿರುವ ಉತ್ತೇಜನಾ ಕ್ರಮಗಳು ಯಾವುದೇ ಪರಿಣಾಮ ಬೀರುವಲ್ಲಿ ವಿಫಲವಾಗಿವೆ.</p>.<p>ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆ ದರವು ಆರು ವರ್ಷಗಳ ಕನಿಷ್ಠ ಮಟ್ಟವಾದ ಶೇ 5ಕ್ಕೆ ಕುಸಿದಿತ್ತು. ಇದೀಗ ಎರಡನೇ ತ್ರೈಮಾಸಿಕದಲ್ಲಿನ ಬೆಳವಣಿಗೆಯು ಅದಕ್ಕಿಂತಲೂ ಕಡಿಮೆ ಅಂದರೆ ಶೇ 4.5ರಷ್ಟಾಗಿದೆ. ಈ ಬೆಳವಣಿಗೆಯೂ ಆರು ವರ್ಷಗಳ ಕನಿಷ್ಠ ಮಟ್ಟದ್ದಾಗಿದೆ.</p>.<p>ಈ ಹಿಂದೆ 2012–13ರಲ್ಲಿ ಆರ್ಥಿಕತೆಯು ಶೇ 4.3ರಷ್ಟು ಕನಿಷ್ಠ ಮಟ್ಟದ ಬೆಳವಣಿಗೆ ಕಂಡಿತ್ತು.ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ 7ರಷ್ಟು ಬೆಳವಣಿಗೆ ಸಾಧಿಸಿತ್ತು.</p>.<p>ಹಲವು ಸಂಸ್ಥೆಗಳ ವರದಿಯಂತೆಯೇಎರಡನೇ ತ್ರೈಮಾಸಿದಲ್ಲಿನ ಬೆಳವಣಿಗೆಯು ಶೇ 5ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿಯೇ ಇದೆ.</p>.<p>ಆರು ತಿಂಗಳ ಅವಧಿಯಲ್ಲಿ (ಏಪ್ರಿಲ್–ಸೆಪ್ಟೆಂಬರ್) ಶೇ 7.5 ರಿಂದ ಶೇ 4.8ಕ್ಕೆ ಇಳಿಕೆಯಾಗಿದೆ.</p>.<p>ಆರ್ಥಿಕತೆಗೆ ಚೇತರಿಕೆ ನೀಡಲು ಕೇಂದ್ರ ಸರ್ಕಾರ ಕೈಗೊಂಡ ಹಲವು ಉತ್ತೇಜನಾ ಕ್ರಮಗಳು ಯಾವುದೇ ಪರಿಣಾಮ ಬೀರಿಲ್ಲ.</p>.<p>ಮುಖ್ಯವಾಗಿ ಹೂಡಿಕೆಯನ್ನು ಹೆಚ್ಚಾಗುವಂತೆ ಮಾಡಲು ಕಾರ್ಪೊರೇಟ್ ತೆರಿಗೆ ದರದಲ್ಲಿ ಕಡಿತ ಮಾಡಿದೆ. ಬ್ಯಾಂಕ್ಗಳಿಗೆ ಪುನರ್ಧನ ನೀಡಿದೆ. ಜನರಿಗೆ ಸುಲಭವಾಗಿ ಸಾಲ ಲಭ್ಯವಾಗುವಂತೆ ಮಾಡಲು 400 ಜಿಲ್ಲೆಗಳಲ್ಲಿ ಸಾಲ ಮೇಳ ಆಯೋಜಿಸಿ ₹ 2.42 ಲಕ್ಷ ಕೋಟಿ ನೀಡಿದೆ.</p>.<p><strong>ಅಂಕಿ–ಅಂಶ</strong></p>.<p>ಸಂಸ್ಥೆಗಳು ಮಾಡಿದ್ದ ಅಂದಾಜು (%)</p>.<p>ಎಸ್ಬಿಐ;4.2</p>.<p>ಫಿಚ್;4.7</p>.<p>ಎನ್ಸಿಎಇಆರ್;4.9</p>.<p><strong>ಪ್ರಮುಖ ಕಾರಣಗಳು</strong></p>.<p>ಇಳಿಮುಖವಾಗಿರುವ ಉಪಭೋಗದ ಪ್ರಮಾಣ</p>.<p>ಖಾಸಗಿ ಹೂಡಿಕೆಯಲ್ಲಿ ಇಳಿಕೆ</p>.<p>ಜಾಗತಿಕ ಮಂದಗತಿಯ ಆರ್ಥಿಕ ಬೆಳವಣಿಗೆ</p>.<p>***</p>.<p>ನಮ್ಮ ಸಮಾಜದ ಸ್ಥಿತಿಯು ಅರ್ಥ ವ್ಯವಸ್ಥೆಯಲ್ಲಿ ಪ್ರತಿಫಲಿಸಿದೆ. ನಂಬಿಕೆ ಮತ್ತು ಆತ್ಮವಿಶ್ವಾಸ ಛಿದ್ರವಾಗಿದೆ. ಹಾಗಾಗಿ, ಸಮಾಜದಲ್ಲಿರುವ ಭೀತಿಯ ವಾತಾವರಣವನ್ನು ಆತ್ಮವಿಶ್ವಾಸವಾಗಿ ಬದಲಿಸುವ ಅನಿವಾರ್ಯ ನಮ್ಮ ಮುಂದಿದೆ</p>.<p><strong>-ಮನಮೋಹನ್ ಸಿಂಗ್</strong><br /><strong>ಮಾಜಿ ಪ್ರಧಾನಿ</strong></p>.<p>ನಮ್ಮ ಅರ್ಥ ವ್ಯವಸ್ಥೆಯ ಮೂಲಭೂತ ಅಂಶಗಳು ಗಟ್ಟಿಯಾಗಿವೆ. ಹಾಗಾಗಿ, ಮೂರನೇ ತ್ರೈಮಾಸಿಕದಿಂದ ಪ್ರಗತಿಯ ವೇಗ ಹೆಚ್ಚಲಿದೆ<br /><strong>-ಅತನು ಚಕ್ರವರ್ತಿ,<br />ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong> : ದೇಶದ ಆರ್ಥಿಕ ಸ್ಥಿತಿಯು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹದಗೆಡುತ್ತಲೇ ಇದೆ. ಕೇಂದ್ರ ಸರ್ಕಾರ ಕೈಗೊಂಡಿರುವ ಉತ್ತೇಜನಾ ಕ್ರಮಗಳು ಯಾವುದೇ ಪರಿಣಾಮ ಬೀರುವಲ್ಲಿ ವಿಫಲವಾಗಿವೆ.</p>.<p>ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆ ದರವು ಆರು ವರ್ಷಗಳ ಕನಿಷ್ಠ ಮಟ್ಟವಾದ ಶೇ 5ಕ್ಕೆ ಕುಸಿದಿತ್ತು. ಇದೀಗ ಎರಡನೇ ತ್ರೈಮಾಸಿಕದಲ್ಲಿನ ಬೆಳವಣಿಗೆಯು ಅದಕ್ಕಿಂತಲೂ ಕಡಿಮೆ ಅಂದರೆ ಶೇ 4.5ರಷ್ಟಾಗಿದೆ. ಈ ಬೆಳವಣಿಗೆಯೂ ಆರು ವರ್ಷಗಳ ಕನಿಷ್ಠ ಮಟ್ಟದ್ದಾಗಿದೆ.</p>.<p>ಈ ಹಿಂದೆ 2012–13ರಲ್ಲಿ ಆರ್ಥಿಕತೆಯು ಶೇ 4.3ರಷ್ಟು ಕನಿಷ್ಠ ಮಟ್ಟದ ಬೆಳವಣಿಗೆ ಕಂಡಿತ್ತು.ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ 7ರಷ್ಟು ಬೆಳವಣಿಗೆ ಸಾಧಿಸಿತ್ತು.</p>.<p>ಹಲವು ಸಂಸ್ಥೆಗಳ ವರದಿಯಂತೆಯೇಎರಡನೇ ತ್ರೈಮಾಸಿದಲ್ಲಿನ ಬೆಳವಣಿಗೆಯು ಶೇ 5ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿಯೇ ಇದೆ.</p>.<p>ಆರು ತಿಂಗಳ ಅವಧಿಯಲ್ಲಿ (ಏಪ್ರಿಲ್–ಸೆಪ್ಟೆಂಬರ್) ಶೇ 7.5 ರಿಂದ ಶೇ 4.8ಕ್ಕೆ ಇಳಿಕೆಯಾಗಿದೆ.</p>.<p>ಆರ್ಥಿಕತೆಗೆ ಚೇತರಿಕೆ ನೀಡಲು ಕೇಂದ್ರ ಸರ್ಕಾರ ಕೈಗೊಂಡ ಹಲವು ಉತ್ತೇಜನಾ ಕ್ರಮಗಳು ಯಾವುದೇ ಪರಿಣಾಮ ಬೀರಿಲ್ಲ.</p>.<p>ಮುಖ್ಯವಾಗಿ ಹೂಡಿಕೆಯನ್ನು ಹೆಚ್ಚಾಗುವಂತೆ ಮಾಡಲು ಕಾರ್ಪೊರೇಟ್ ತೆರಿಗೆ ದರದಲ್ಲಿ ಕಡಿತ ಮಾಡಿದೆ. ಬ್ಯಾಂಕ್ಗಳಿಗೆ ಪುನರ್ಧನ ನೀಡಿದೆ. ಜನರಿಗೆ ಸುಲಭವಾಗಿ ಸಾಲ ಲಭ್ಯವಾಗುವಂತೆ ಮಾಡಲು 400 ಜಿಲ್ಲೆಗಳಲ್ಲಿ ಸಾಲ ಮೇಳ ಆಯೋಜಿಸಿ ₹ 2.42 ಲಕ್ಷ ಕೋಟಿ ನೀಡಿದೆ.</p>.<p><strong>ಅಂಕಿ–ಅಂಶ</strong></p>.<p>ಸಂಸ್ಥೆಗಳು ಮಾಡಿದ್ದ ಅಂದಾಜು (%)</p>.<p>ಎಸ್ಬಿಐ;4.2</p>.<p>ಫಿಚ್;4.7</p>.<p>ಎನ್ಸಿಎಇಆರ್;4.9</p>.<p><strong>ಪ್ರಮುಖ ಕಾರಣಗಳು</strong></p>.<p>ಇಳಿಮುಖವಾಗಿರುವ ಉಪಭೋಗದ ಪ್ರಮಾಣ</p>.<p>ಖಾಸಗಿ ಹೂಡಿಕೆಯಲ್ಲಿ ಇಳಿಕೆ</p>.<p>ಜಾಗತಿಕ ಮಂದಗತಿಯ ಆರ್ಥಿಕ ಬೆಳವಣಿಗೆ</p>.<p>***</p>.<p>ನಮ್ಮ ಸಮಾಜದ ಸ್ಥಿತಿಯು ಅರ್ಥ ವ್ಯವಸ್ಥೆಯಲ್ಲಿ ಪ್ರತಿಫಲಿಸಿದೆ. ನಂಬಿಕೆ ಮತ್ತು ಆತ್ಮವಿಶ್ವಾಸ ಛಿದ್ರವಾಗಿದೆ. ಹಾಗಾಗಿ, ಸಮಾಜದಲ್ಲಿರುವ ಭೀತಿಯ ವಾತಾವರಣವನ್ನು ಆತ್ಮವಿಶ್ವಾಸವಾಗಿ ಬದಲಿಸುವ ಅನಿವಾರ್ಯ ನಮ್ಮ ಮುಂದಿದೆ</p>.<p><strong>-ಮನಮೋಹನ್ ಸಿಂಗ್</strong><br /><strong>ಮಾಜಿ ಪ್ರಧಾನಿ</strong></p>.<p>ನಮ್ಮ ಅರ್ಥ ವ್ಯವಸ್ಥೆಯ ಮೂಲಭೂತ ಅಂಶಗಳು ಗಟ್ಟಿಯಾಗಿವೆ. ಹಾಗಾಗಿ, ಮೂರನೇ ತ್ರೈಮಾಸಿಕದಿಂದ ಪ್ರಗತಿಯ ವೇಗ ಹೆಚ್ಚಲಿದೆ<br /><strong>-ಅತನು ಚಕ್ರವರ್ತಿ,<br />ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>