ಆರ್ಬಿಐನಿಂದಲಾಭಾಂಶ ಪಡೆಯುವ ಮಾರ್ಗವಲ್ಲದೆ, ಕೇಂದ್ರೋದ್ಯಮಗಳ ಷೇರು ವಿಕ್ರಯ, ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಗಳ (ಎನ್ಎಸ್ಎಸ್ಎಫ್) ಗರಿಷ್ಠ ಬಳಕೆಮಾಡುವ ಮೂಲಕವೂ ಬಂಡವಾಳ ಸಂಗ್ರಹಿಸಬಹುದಾಗಿದೆ. ಆದರೆ, ಷೇರು ವಿಕ್ರಯಕ್ಕೆ ಹೂಡಿಕೆದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿಲ್ಲ. ಹೀಗಾಗಿ ಆರ್ಬಿಐ ಅನ್ನೇ ನೆಚ್ಚಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.