<p><strong>ಬಾಗಲಕೋಟೆ</strong>: ‘ಕಳೆದ ವರ್ಷ ಕ್ವಿಂಟಲ್ ಈರುಳ್ಳಿಗೆ ₹4 ಸಾವಿರದಿಂದ ₹5,500 ಬೆಲೆ ಸಿಕ್ಕಿತ್ತು. ಹಂಗಾಗಿ ಈ ಬಾರಿ ಹೆಚ್ಚಿಗೆ ಈರುಳ್ಳಿ ಬೆಳೆದಾರ್ರಿ. ಆದರೆ, ಈಗ ಬೆಲೆ ಇಲ್ಲದ್ದಕ್ಕ ಬೆಳೆಗೆ ಮಾಡಿದ ವೆಚ್ಚವೂ ಕೈಸೇರುತ್ತಿಲ್ಲ’ ಎಂದು ಹಳ್ಳೂರ ಗ್ರಾಮದ ರೈತ ಬಸಲಿಂಗಪ್ಪ ರಡ್ಡೇರ ಬೇಸರ ತೋಡಿಕೊಂಡರು.</p>.<p>ಜಿಲ್ಲೆಯಲ್ಲಿ ಪ್ರತಿ ವರ್ಷ 30ರಿಂದ 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗುತ್ತಿತ್ತು. ಕಳೆದ ವರ್ಷ ಹೆಚ್ಚಿನ ಬೆಲೆ ದೊರೆತಿದ್ದರಿಂದ ಬಿತ್ತನೆ ಪ್ರಮಾಣ ₹42 ಸಾವಿರ ಹೆಕ್ಟೇರ್ಗೆ ಹೆಚ್ಚಾಗಿದೆ. ಅತಿಯಾದ ಮಳೆಯಿಂದಾಗಿ ಅರ್ಧದಷ್ಟು ಈರುಳ್ಳಿ ಬೆಳೆ ಹಾಳಾಗಿದೆ. ಆದರೂ, ಉತ್ತಮ ಬೆಲೆ ದೊರೆಯುತ್ತಿಲ್ಲ.</p>.<p>ಬಾಗಲಕೋಟೆ ಎಪಿಎಂಸಿಗೆ 3 ಸಾವಿರ ಕ್ವಿಂಟಲ್ ಈರುಳ್ಳಿ ಆವಕವಾಗಿತ್ತು. ಕ್ವಿಂಟಲ್ಗೆ ಕನಿಷ್ಠ ₹500, ಗರಿಷ್ಠ ₹1,800 ದೊರೆತಿದೆ. ₹1,200 ಮಾದರಿ ಬೆಲೆಯಾಗಿದೆ. ಕಳೆದ ಬಾರಿ ಸಿಕ್ಕ ಬೆಲೆಗೆ ಹೋಲಿಸಿದರೆ ಈ ಬಾರಿ ಅರ್ಧಕ್ಕೂ ಕಡಿಮೆ ಬೆಲೆಗೆ ಮಾರಾಟ ಮಾಡುವಂತಾಗಿದೆ.</p>.<p><strong>ಬೆಳೆ ಹಾನಿ:</strong> </p><p>ಒಂದೆಡೆ ಬೆಲೆ ಇಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದರೆ, ಇನ್ನೊಂದೆಡೆ ಅತಿಯಾದ ಮಳೆಯಿಂದಾಗಿ ಬೆಳೆದು ನಿಂತಿದ್ದ ಬೆಳೆ ಕಣ್ಮುಂದೆಯೇ ಹಾಳಾಗಿ, ಮಣ್ಣು ಸೇರಿದೆ.</p>.<p>‘ಜಿಲ್ಲೆಯಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ಅಂದಾಜು 23,400 ಹೆಕ್ಟೇರ್ನಷ್ಟು ಈರುಳ್ಳಿ ಬೆಳೆ ಹಾನಿಯಾಗಿದೆ. ಸಮೀಕ್ಷೆ ಇನ್ನೂ ನಡೆದಿದ್ದು, ಅಂತಿಮ ವರದಿ ಇನ್ನಷ್ಟೇ ಬರಬೇಕಿದೆ‘ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟೆ.</p>.<p>ವಾರಗಳ ಕಾಲ ಸುರಿದ ಮಳೆಯಿಂದಾಗಿ ಈರುಳ್ಳಿ ಬೆಳೆ ಕೊಳೆತಿದೆ. ಜತೆಗೆ ಪ್ರವಾಹಕ್ಕೂ ಸಿಲುಕಿ ಹಾಳಾಗಿದೆ. ಸಮೀಕ್ಷೆ ನಂತರ ಪರಿಹಾರ ನೀಡಲಾಗುವುದು ಎಂದರು.</p>.<div><blockquote>ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಈರುಳ್ಳಿ ಬೆಳೆಗಾರರಿಗೆ ಕಡಿಮೆ ಬೆಲೆ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಸಿಗುವ ವಿಶ್ವಾಸವಿದೆ </blockquote><span class="attribution">ವಿ.ಡಿ.ಪಾಟೀಲ, ಕಾರ್ಯದರ್ಶಿ, ಎಪಿಎಂಸಿ ಬಾಗಲಕೋಟೆ</span></div>.<p>ಸತತ ಮಳೆಯಿಂದಾಗಿ ಈರುಳ್ಳಿಯ ಗುಣಮಟ್ಟ ಕುಸಿದಿದೆ. ಗಡ್ಡೆಗಳನ್ನು ಕಾಯ್ದಿಟ್ಟುಕೊಳ್ಳುವುದೇ ಸವಾಲಾಗಿದೆ. ಬಿಸಿಲು ಬೀಳದ್ದರಿಂದಾಗಿ ಹಾಳಾಗುತ್ತಿದೆ.</p>.<p>ಬೆಲೆ ಕುಸಿದಿರುವುದರಿಂದ ಬಿತ್ತನೆ, ಕಳೆ, ಔಷಧಕ್ಕಾಗಿ ಮಾಡಿದ ಖರ್ಚೂ ಕೈಗೆ ಸಿಗುತ್ತಿಲ್ಲ. ಎಪಿಎಂಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಸಾಗಾಟದ ವೆಚ್ಚ ಮೈಮೇಲೆ ಬರುತ್ತದೆ ಎನ್ನುತ್ತಾರೆ ರೈತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ‘ಕಳೆದ ವರ್ಷ ಕ್ವಿಂಟಲ್ ಈರುಳ್ಳಿಗೆ ₹4 ಸಾವಿರದಿಂದ ₹5,500 ಬೆಲೆ ಸಿಕ್ಕಿತ್ತು. ಹಂಗಾಗಿ ಈ ಬಾರಿ ಹೆಚ್ಚಿಗೆ ಈರುಳ್ಳಿ ಬೆಳೆದಾರ್ರಿ. ಆದರೆ, ಈಗ ಬೆಲೆ ಇಲ್ಲದ್ದಕ್ಕ ಬೆಳೆಗೆ ಮಾಡಿದ ವೆಚ್ಚವೂ ಕೈಸೇರುತ್ತಿಲ್ಲ’ ಎಂದು ಹಳ್ಳೂರ ಗ್ರಾಮದ ರೈತ ಬಸಲಿಂಗಪ್ಪ ರಡ್ಡೇರ ಬೇಸರ ತೋಡಿಕೊಂಡರು.</p>.<p>ಜಿಲ್ಲೆಯಲ್ಲಿ ಪ್ರತಿ ವರ್ಷ 30ರಿಂದ 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗುತ್ತಿತ್ತು. ಕಳೆದ ವರ್ಷ ಹೆಚ್ಚಿನ ಬೆಲೆ ದೊರೆತಿದ್ದರಿಂದ ಬಿತ್ತನೆ ಪ್ರಮಾಣ ₹42 ಸಾವಿರ ಹೆಕ್ಟೇರ್ಗೆ ಹೆಚ್ಚಾಗಿದೆ. ಅತಿಯಾದ ಮಳೆಯಿಂದಾಗಿ ಅರ್ಧದಷ್ಟು ಈರುಳ್ಳಿ ಬೆಳೆ ಹಾಳಾಗಿದೆ. ಆದರೂ, ಉತ್ತಮ ಬೆಲೆ ದೊರೆಯುತ್ತಿಲ್ಲ.</p>.<p>ಬಾಗಲಕೋಟೆ ಎಪಿಎಂಸಿಗೆ 3 ಸಾವಿರ ಕ್ವಿಂಟಲ್ ಈರುಳ್ಳಿ ಆವಕವಾಗಿತ್ತು. ಕ್ವಿಂಟಲ್ಗೆ ಕನಿಷ್ಠ ₹500, ಗರಿಷ್ಠ ₹1,800 ದೊರೆತಿದೆ. ₹1,200 ಮಾದರಿ ಬೆಲೆಯಾಗಿದೆ. ಕಳೆದ ಬಾರಿ ಸಿಕ್ಕ ಬೆಲೆಗೆ ಹೋಲಿಸಿದರೆ ಈ ಬಾರಿ ಅರ್ಧಕ್ಕೂ ಕಡಿಮೆ ಬೆಲೆಗೆ ಮಾರಾಟ ಮಾಡುವಂತಾಗಿದೆ.</p>.<p><strong>ಬೆಳೆ ಹಾನಿ:</strong> </p><p>ಒಂದೆಡೆ ಬೆಲೆ ಇಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದರೆ, ಇನ್ನೊಂದೆಡೆ ಅತಿಯಾದ ಮಳೆಯಿಂದಾಗಿ ಬೆಳೆದು ನಿಂತಿದ್ದ ಬೆಳೆ ಕಣ್ಮುಂದೆಯೇ ಹಾಳಾಗಿ, ಮಣ್ಣು ಸೇರಿದೆ.</p>.<p>‘ಜಿಲ್ಲೆಯಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ಅಂದಾಜು 23,400 ಹೆಕ್ಟೇರ್ನಷ್ಟು ಈರುಳ್ಳಿ ಬೆಳೆ ಹಾನಿಯಾಗಿದೆ. ಸಮೀಕ್ಷೆ ಇನ್ನೂ ನಡೆದಿದ್ದು, ಅಂತಿಮ ವರದಿ ಇನ್ನಷ್ಟೇ ಬರಬೇಕಿದೆ‘ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟೆ.</p>.<p>ವಾರಗಳ ಕಾಲ ಸುರಿದ ಮಳೆಯಿಂದಾಗಿ ಈರುಳ್ಳಿ ಬೆಳೆ ಕೊಳೆತಿದೆ. ಜತೆಗೆ ಪ್ರವಾಹಕ್ಕೂ ಸಿಲುಕಿ ಹಾಳಾಗಿದೆ. ಸಮೀಕ್ಷೆ ನಂತರ ಪರಿಹಾರ ನೀಡಲಾಗುವುದು ಎಂದರು.</p>.<div><blockquote>ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಈರುಳ್ಳಿ ಬೆಳೆಗಾರರಿಗೆ ಕಡಿಮೆ ಬೆಲೆ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಸಿಗುವ ವಿಶ್ವಾಸವಿದೆ </blockquote><span class="attribution">ವಿ.ಡಿ.ಪಾಟೀಲ, ಕಾರ್ಯದರ್ಶಿ, ಎಪಿಎಂಸಿ ಬಾಗಲಕೋಟೆ</span></div>.<p>ಸತತ ಮಳೆಯಿಂದಾಗಿ ಈರುಳ್ಳಿಯ ಗುಣಮಟ್ಟ ಕುಸಿದಿದೆ. ಗಡ್ಡೆಗಳನ್ನು ಕಾಯ್ದಿಟ್ಟುಕೊಳ್ಳುವುದೇ ಸವಾಲಾಗಿದೆ. ಬಿಸಿಲು ಬೀಳದ್ದರಿಂದಾಗಿ ಹಾಳಾಗುತ್ತಿದೆ.</p>.<p>ಬೆಲೆ ಕುಸಿದಿರುವುದರಿಂದ ಬಿತ್ತನೆ, ಕಳೆ, ಔಷಧಕ್ಕಾಗಿ ಮಾಡಿದ ಖರ್ಚೂ ಕೈಗೆ ಸಿಗುತ್ತಿಲ್ಲ. ಎಪಿಎಂಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಸಾಗಾಟದ ವೆಚ್ಚ ಮೈಮೇಲೆ ಬರುತ್ತದೆ ಎನ್ನುತ್ತಾರೆ ರೈತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>