<p><strong>ನವದೆಹಲಿ</strong>: ಬ್ಯಾಂಕ್ ಠೇವಣಿಗಳು, ಪಿಂಚಣಿ ನಿಧಿಗಳು, ಷೇರುಗಳು, ಕಂಪನಿಗಳು ನೀಡುವ ಲಾಭಾಂಶ (ಡಿವಿಡೆಂಡ್) ಸೇರಿದಂತೆ ವಿವಿಧೆಡೆ ಇರುವ, ಕ್ಲೇಮ್ ಮಾಡಿರದ ಹಣಕಾಸಿನ ಆಸ್ತಿಗಳನ್ನು ಕ್ಲೇಮ್ ಮಾಡುವ ಪ್ರಕ್ರಿಯೆಯನ್ನು ಸುಲಭವಾಗಿಸುವ ಏಕೀಕೃತ ಪೋರ್ಟಲ್ ಒಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ.</p>.<p>ಕೇಂದ್ರ ಹಣಕಾಸು ಸಚಿವಾಲಯವು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಜೊತೆಗೂಡಿ ಈ ಪೋರ್ಟಲ್ ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದೆ ಎಂದು ಕೇಂದ್ರ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಂ. ನಾಗರಾಜು ತಿಳಿಸಿದ್ದಾರೆ.</p>.<p>ಈ ಪೋರ್ಟಲ್ಅನ್ನು ಶೀಘ್ರವೇ ಆರಂಭಿಸಲಾಗುತ್ತದೆ ಎಂದು ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಆಯೋಜಿಸಿದ್ದ ‘ನಿಮ್ಮ ಹಣ ನಿಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.</p>.<p class="bodytext">‘ಹಣಕಾಸು ಸೇವೆಗಳ ಇಲಾಖೆಯು ಈ ಪೋರ್ಟಲ್ ವಿಚಾರವಾಗಿ ಆರ್ಬಿಐ ಜೊತೆ ಕೆಲಸ ಮಾಡುತ್ತಿದೆ. ಈ ಪೋರ್ಟಲ್ನ ಸಮನ್ವಯದ ಕೆಲಸವನ್ನು ಆರ್ಬಿಐ ನಿರ್ವಹಿಸಲಿದೆ’ ಎಂದು ಅವರು ತಿಳಿಸಿದ್ದಾರೆ.</p>.<p class="bodytext">ಕ್ಲೇಮ್ ಮಾಡಿರದ ಠೇವಣಿಗಳ ಕ್ಲೇಮ್ಗಾಗಿ ಆರ್ಬಿಐ ‘ಉದ್ಗಮ್’ ಪೋರ್ಟಲ್ ಆರಂಭಿಸಿದೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ‘ಮಿತ್ರ’ ಹೆಸರಿನ ಪೋರ್ಟಲ್ ಹೊಂದಿದೆ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್ಡಿಎಐ) ‘ಬಿಮಾ ಭರೋಸಾ’ ಎಂಬ ಪೋರ್ಟಲ್ ಹೊಂದಿದೆ.</p>.<p class="bodytext">ಹೊಸದಾಗಿ ಆರಂಭವಾಗಲಿರುವ ಏಕೀಕೃತ ಪೋರ್ಟಲ್ ಜನರಿಗೆ ತಮ್ಮ ಹಣವನ್ನು, ಹಣಕಾಸಿನ ಆಸ್ತಿಯನ್ನು ಕ್ಲೇಮ್ ಮಾಡುವ ಪ್ರಕ್ರಿಯೆಯನ್ನು ಸುಲಭವಾಗಿಸಲಿದೆ. ಕ್ಲೇಮ್ ವಿಚಾರವಾಗಿ ಇರುವ ಅರಿವಿನ ಕೊರತೆಯ ಕಾರಣದಿಂದಾಗಿ ದೊಡ್ಡ ಮೊತ್ತವು ಹಾಗೇ ಉಳಿದಿದೆ ಎಂದು ಅವರು ತಿಳಿಸಿದ್ದಾರೆ.</p>.<p class="bodytext">ಕೇಂದ್ರ ಸರ್ಕಾರವು ಹಣಕಾಸಿನ ಒಳಗೊಳ್ಳುವಿಕೆಗೆ ಹಾಗೂ ಹಣಕಾಸಿನ ಶಿಕ್ಷಣಕ್ಕೆ ನಿರಂತರವಾಗಿ ಒತ್ತು ನೀಡುತ್ತಿದೆ. ಇದರ ಭಾಗವಾಗಿ ಜನರಿಗೆ ಅವರ ಉಳಿತಾಯದ ಹಣವನ್ನು ಪಡೆದುಕೊಳ್ಳಲು ನೆರವು ನೀಡಲು ಯತ್ನಿಸುತ್ತಿದೆ ಎಂದಿದ್ದಾರೆ.</p>.<p class="bodytext">ಹಣಕಾಸಿನ ವಲಯದಲ್ಲಿ ಕ್ಲೇಮ್ ಆಗದೆ ಹಾಗೇ ಉಳಿದಿರುವ ಹಣವನ್ನು ಜನ ಕ್ಲೇಮ್ ಮಾಡುವಂತೆ ಉತ್ತೇಜನ ನೀಡುವ ಅಭಿಯಾನವೊಂದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಕ್ಟೋಬರ್ 4ರಂದು ಚಾಲನೆ ನೀಡಿದ್ದಾರೆ.</p>.<p class="bodytext">ಕ್ಲೇಮ್ ಮಾಡಿಕೊಳ್ಳದಿದ್ದ ಒಟ್ಟು ₹1,887 ಕೋಟಿಯನ್ನು ಅಭಿಯಾನ ಆರಂಭವಾದ ನಂತರದಲ್ಲಿ ಸಂಬಂಧಪಟ್ಟವರಿಗೆ ಮರಳಿಸಲಾಗಿದೆ ಎಂದು ನಾಗರಾಜು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಬ್ಯಾಂಕ್ ಠೇವಣಿಗಳು, ಪಿಂಚಣಿ ನಿಧಿಗಳು, ಷೇರುಗಳು, ಕಂಪನಿಗಳು ನೀಡುವ ಲಾಭಾಂಶ (ಡಿವಿಡೆಂಡ್) ಸೇರಿದಂತೆ ವಿವಿಧೆಡೆ ಇರುವ, ಕ್ಲೇಮ್ ಮಾಡಿರದ ಹಣಕಾಸಿನ ಆಸ್ತಿಗಳನ್ನು ಕ್ಲೇಮ್ ಮಾಡುವ ಪ್ರಕ್ರಿಯೆಯನ್ನು ಸುಲಭವಾಗಿಸುವ ಏಕೀಕೃತ ಪೋರ್ಟಲ್ ಒಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ.</p>.<p>ಕೇಂದ್ರ ಹಣಕಾಸು ಸಚಿವಾಲಯವು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಜೊತೆಗೂಡಿ ಈ ಪೋರ್ಟಲ್ ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದೆ ಎಂದು ಕೇಂದ್ರ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಂ. ನಾಗರಾಜು ತಿಳಿಸಿದ್ದಾರೆ.</p>.<p>ಈ ಪೋರ್ಟಲ್ಅನ್ನು ಶೀಘ್ರವೇ ಆರಂಭಿಸಲಾಗುತ್ತದೆ ಎಂದು ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಆಯೋಜಿಸಿದ್ದ ‘ನಿಮ್ಮ ಹಣ ನಿಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.</p>.<p class="bodytext">‘ಹಣಕಾಸು ಸೇವೆಗಳ ಇಲಾಖೆಯು ಈ ಪೋರ್ಟಲ್ ವಿಚಾರವಾಗಿ ಆರ್ಬಿಐ ಜೊತೆ ಕೆಲಸ ಮಾಡುತ್ತಿದೆ. ಈ ಪೋರ್ಟಲ್ನ ಸಮನ್ವಯದ ಕೆಲಸವನ್ನು ಆರ್ಬಿಐ ನಿರ್ವಹಿಸಲಿದೆ’ ಎಂದು ಅವರು ತಿಳಿಸಿದ್ದಾರೆ.</p>.<p class="bodytext">ಕ್ಲೇಮ್ ಮಾಡಿರದ ಠೇವಣಿಗಳ ಕ್ಲೇಮ್ಗಾಗಿ ಆರ್ಬಿಐ ‘ಉದ್ಗಮ್’ ಪೋರ್ಟಲ್ ಆರಂಭಿಸಿದೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ‘ಮಿತ್ರ’ ಹೆಸರಿನ ಪೋರ್ಟಲ್ ಹೊಂದಿದೆ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್ಡಿಎಐ) ‘ಬಿಮಾ ಭರೋಸಾ’ ಎಂಬ ಪೋರ್ಟಲ್ ಹೊಂದಿದೆ.</p>.<p class="bodytext">ಹೊಸದಾಗಿ ಆರಂಭವಾಗಲಿರುವ ಏಕೀಕೃತ ಪೋರ್ಟಲ್ ಜನರಿಗೆ ತಮ್ಮ ಹಣವನ್ನು, ಹಣಕಾಸಿನ ಆಸ್ತಿಯನ್ನು ಕ್ಲೇಮ್ ಮಾಡುವ ಪ್ರಕ್ರಿಯೆಯನ್ನು ಸುಲಭವಾಗಿಸಲಿದೆ. ಕ್ಲೇಮ್ ವಿಚಾರವಾಗಿ ಇರುವ ಅರಿವಿನ ಕೊರತೆಯ ಕಾರಣದಿಂದಾಗಿ ದೊಡ್ಡ ಮೊತ್ತವು ಹಾಗೇ ಉಳಿದಿದೆ ಎಂದು ಅವರು ತಿಳಿಸಿದ್ದಾರೆ.</p>.<p class="bodytext">ಕೇಂದ್ರ ಸರ್ಕಾರವು ಹಣಕಾಸಿನ ಒಳಗೊಳ್ಳುವಿಕೆಗೆ ಹಾಗೂ ಹಣಕಾಸಿನ ಶಿಕ್ಷಣಕ್ಕೆ ನಿರಂತರವಾಗಿ ಒತ್ತು ನೀಡುತ್ತಿದೆ. ಇದರ ಭಾಗವಾಗಿ ಜನರಿಗೆ ಅವರ ಉಳಿತಾಯದ ಹಣವನ್ನು ಪಡೆದುಕೊಳ್ಳಲು ನೆರವು ನೀಡಲು ಯತ್ನಿಸುತ್ತಿದೆ ಎಂದಿದ್ದಾರೆ.</p>.<p class="bodytext">ಹಣಕಾಸಿನ ವಲಯದಲ್ಲಿ ಕ್ಲೇಮ್ ಆಗದೆ ಹಾಗೇ ಉಳಿದಿರುವ ಹಣವನ್ನು ಜನ ಕ್ಲೇಮ್ ಮಾಡುವಂತೆ ಉತ್ತೇಜನ ನೀಡುವ ಅಭಿಯಾನವೊಂದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಕ್ಟೋಬರ್ 4ರಂದು ಚಾಲನೆ ನೀಡಿದ್ದಾರೆ.</p>.<p class="bodytext">ಕ್ಲೇಮ್ ಮಾಡಿಕೊಳ್ಳದಿದ್ದ ಒಟ್ಟು ₹1,887 ಕೋಟಿಯನ್ನು ಅಭಿಯಾನ ಆರಂಭವಾದ ನಂತರದಲ್ಲಿ ಸಂಬಂಧಪಟ್ಟವರಿಗೆ ಮರಳಿಸಲಾಗಿದೆ ಎಂದು ನಾಗರಾಜು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>