<p><strong>ಮುಂಬೈ: </strong>ಆರ್ಥಿಕ ಚೇತರಿಕೆಗೆ ಪೂರಕವಾದ ನಿರ್ಧಾರಗಳು ಬಜೆಟ್ನಲ್ಲಿ ಘೋಷಣೆಯಾಗದೇ ಇರುವುದು ಹೂಡಿಕೆದಾರರಲ್ಲಿ ನಿರಾಸೆ ಮೂಡಿಸಿದೆ. ಇದರಿಂದಾಗಿ ಶನಿವಾರದ ವಹಿವಾಟಿನಲ್ಲಿ ಷೇರುಪೇಟೆ ತತ್ತರಿಸಿತು.</p>.<p>ಅತಿ ಹೆಚ್ಚಿನ ಮಾರಾಟದ ಒತ್ತಡ ಕಂಡುಬಂದಿದ್ದರಿಂದ ಷೇರುಪೇಟೆಗಳಲ್ಲಿ ಕರಡಿ ಕುಣಿತ ಜೋರಾಗಿತ್ತು.</p>.<p>ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ವಹಿವಾಟಿನ ಒಂದು ಹಂತದಲ್ಲಿ 1,275 ಅಂಶಗಳವರೆಗೂ ಕುಸಿತ ಕಂಡಿತ್ತು. ವಹಿವಾಟಿನ ಅಂತ್ಯದ ವೇಳೆಗೆ 988 ಅಂಶಗಳ ಕುಸಿತದೊಂದಿಗೆ 39,631 ಅಂಶಗಳಿಗೆ ತಲುಪಿತು.2008ರ ಅಕ್ಟೋಬರ್ ಬಳಿಕ ಗರಿಷ್ಠ ಕುಸಿತ ಇದಾಗಿದೆ. ಒಟ್ಟಾರೆಯಾಗಿ ನಾಲ್ಕನೇ ಗರಿಷ್ಠ ಕುಸಿತವಾಗಿದೆ.</p>.<p>ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 300 ಅಂಶಗಳ ಇಳಿಕೆ ಕಂಡು 11,662 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. 2019ರ ಬಜೆಟ್ ಮಂಡನೆಯ ದಿನ 11,811 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿತ್ತು.</p>.<p><strong>ಗರಿಷ್ಠ ನಷ್ಟ:</strong> ದಿನದ ವಹಿವಾಟಿನಲ್ಲಿ ಐಟಿಸಿ ಷೇರು ಶೇ 6.97ರಷ್ಟು ಗರಿಷ್ಠ ನಷ್ಟ ಕಂಡಿತು. ಎಲ್ಆ್ಯಂಡ್ಟಿ, ಎಚ್ಡಿಎಫ್ಸಿ, ಎಸ್ಬಿಐ, ಒಎನ್ಜಿಸಿ, ಐಸಿಐಸಿಐ ಬ್ಯಾಂಕ್ ಮತ್ತು ಇಂಡಸ್ಇಂಡ್ ಬ್ಯಾಂಕ್ ಷೇರುಗಳು ಸಹ ನಷ್ಟ ಕಂಡಿವೆ.</p>.<p>ವಿಮಾ ಕಂಪನಿಗಳ ಷೇರುಗಳು ಶೇ 13ರವರೆಗೂ ಇಳಿಕೆ ಕಂಡಿವೆ.</p>.<p><strong>ಗಳಿಕೆ</strong>: ಟಿಸಿಎಸ್ ಷೇರು ಶೇ 4.13ರಷ್ಟು ಹೆಚ್ಚಾಗಿದೆ. ಎಚ್ಯುಎಲ್, ನೆಸ್ಲೆ ಇಂಡಿಯಾ, ಟೆಕ್ ಮಹೀಂದ್ರಾ ಮತ್ತು ಇನ್ಫೊಸಿಸ್ ಷೇರುಗಳು ಗಳಿಕೆ ಕಂಡುಕೊಂಡಿವೆ.</p>.<p>ಆದಾಯ ತೆರಿಗೆ ಹಂತದಲ್ಲಿನ ಬದಲಾವಣೆಯಿಂದಾಗಿ ತೆರಿಗೆ ಉಳಿಸುವ ಹೂಡಿಕೆ ಕಡಿಮೆಯಾಗುವ ಆತಂಕ ಎದುರಾಗಿದೆ. ಇದರ ಜತೆಗೆ ಲಾಭಾಂಶ ವಿತರಣೆ ತೆರಿಗೆಯನ್ನು ಹೂಡಿಕೆದಾರರಿಗೆ ವರ್ಗಾಯಿಸುವ ಪ್ರಸ್ತಾವವೂ ನಕಾರಾತ್ಮಕ ಭಾವನೆ ಮೂಡಿಸಿದೆ ಎಂದು ಪರಿಣತರು ವಿಶ್ಲೇಷಣೆ ಮಾಡಿದ್ದಾರೆ.</p>.<p>ಉದ್ಯಮ ಅಥವಾ ಗ್ರಾಹಕರ ಪರವಾದ ಯಾವುದೇ ನಿರ್ಧಾರಗಳು ಹೊರಬಿದ್ದಿಲ್ಲ. ಆದಾಯ ತೆರಿಗೆಯಲ್ಲಿನ ಬದಲಾವಣೆಯು ರಾಜಕೀಯ ಲಾಭವನ್ನು ಸೃಷ್ಟಿಸಲಿದೆಯೇ ಹೊರತು ಸದ್ಯ ಮಟ್ಟಿಗಂತೂ ಆರ್ಥಿಕ ಬೆಳವಣಿಗೆಗೆ ಪೂರಕವಾಗಿಲ್ಲ’ ಎಂದು ಷೇರ್ ಇಂಡಿಯಾ ಸೆಕ್ಯುರಿಟೀಸ್ನ ಅಧ್ಯಕ್ಷ ಅಭಿನವ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.</p>.<p><strong>ಕರಗಿತು ₹ 3.46 ಲಕ್ಷ ಕೋಟಿ</strong><br />ಷೇರುಪೇಟೆಯಲ್ಲಿನ ನಕಾರಾತ್ಮಕ ವಹಿವಾಟು ಹೂಡಿಕೆದಾರರ ಸಂಪತ್ತು ಕರಗುವಂತೆ ಮಾಡಿತು.</p>.<p>ದಿನದ ವಹಿವಾಟಿನಲ್ಲಿ, ಮಾರುಕಟ್ಟೆ ಮೌಲ್ಯದ ಲೆಕ್ಕಚಾರದಲ್ಲಿ ಹೂಡಿಕೆದಾರರ ಸಂಪತ್ತು ₹ 3.46 ಲಕ್ಷ ಕೋಟಿಗಳಷ್ಟು ಕರಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯ ₹ 156.50 ಲಕ್ಷ ಕೋಟಿಗಳಿಂದ ₹ 153.04 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ.</p>.<p><strong>ವಹಿವಾಟಿನ ವಿವರ</strong></p>.<p>222 ಅಂಶ:2019ರ ಜುಲೈ 5–2020ರ ಫೆಬ್ರುವರಿ 1ರ ಅವಧಿಯಲ್ಲಿ ಸೂಚ್ಯಂಕದ ಒಟ್ಟಾರೆ ಗಳಿಕೆ</p>.<p>149 ಅಂಶ:2019ರ ಜುಲೈ 5–2020ರ ಫೆಬ್ರುವರಿ 1ರ ಅವಧಿಯಲ್ಲಿ ನಿಫ್ಟಿಯಲ್ಲಿ ಆಗಿರುವ ಇಳಿಕೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ: </strong>ಆರ್ಥಿಕ ಚೇತರಿಕೆಗೆ ಪೂರಕವಾದ ನಿರ್ಧಾರಗಳು ಬಜೆಟ್ನಲ್ಲಿ ಘೋಷಣೆಯಾಗದೇ ಇರುವುದು ಹೂಡಿಕೆದಾರರಲ್ಲಿ ನಿರಾಸೆ ಮೂಡಿಸಿದೆ. ಇದರಿಂದಾಗಿ ಶನಿವಾರದ ವಹಿವಾಟಿನಲ್ಲಿ ಷೇರುಪೇಟೆ ತತ್ತರಿಸಿತು.</p>.<p>ಅತಿ ಹೆಚ್ಚಿನ ಮಾರಾಟದ ಒತ್ತಡ ಕಂಡುಬಂದಿದ್ದರಿಂದ ಷೇರುಪೇಟೆಗಳಲ್ಲಿ ಕರಡಿ ಕುಣಿತ ಜೋರಾಗಿತ್ತು.</p>.<p>ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ವಹಿವಾಟಿನ ಒಂದು ಹಂತದಲ್ಲಿ 1,275 ಅಂಶಗಳವರೆಗೂ ಕುಸಿತ ಕಂಡಿತ್ತು. ವಹಿವಾಟಿನ ಅಂತ್ಯದ ವೇಳೆಗೆ 988 ಅಂಶಗಳ ಕುಸಿತದೊಂದಿಗೆ 39,631 ಅಂಶಗಳಿಗೆ ತಲುಪಿತು.2008ರ ಅಕ್ಟೋಬರ್ ಬಳಿಕ ಗರಿಷ್ಠ ಕುಸಿತ ಇದಾಗಿದೆ. ಒಟ್ಟಾರೆಯಾಗಿ ನಾಲ್ಕನೇ ಗರಿಷ್ಠ ಕುಸಿತವಾಗಿದೆ.</p>.<p>ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 300 ಅಂಶಗಳ ಇಳಿಕೆ ಕಂಡು 11,662 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. 2019ರ ಬಜೆಟ್ ಮಂಡನೆಯ ದಿನ 11,811 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿತ್ತು.</p>.<p><strong>ಗರಿಷ್ಠ ನಷ್ಟ:</strong> ದಿನದ ವಹಿವಾಟಿನಲ್ಲಿ ಐಟಿಸಿ ಷೇರು ಶೇ 6.97ರಷ್ಟು ಗರಿಷ್ಠ ನಷ್ಟ ಕಂಡಿತು. ಎಲ್ಆ್ಯಂಡ್ಟಿ, ಎಚ್ಡಿಎಫ್ಸಿ, ಎಸ್ಬಿಐ, ಒಎನ್ಜಿಸಿ, ಐಸಿಐಸಿಐ ಬ್ಯಾಂಕ್ ಮತ್ತು ಇಂಡಸ್ಇಂಡ್ ಬ್ಯಾಂಕ್ ಷೇರುಗಳು ಸಹ ನಷ್ಟ ಕಂಡಿವೆ.</p>.<p>ವಿಮಾ ಕಂಪನಿಗಳ ಷೇರುಗಳು ಶೇ 13ರವರೆಗೂ ಇಳಿಕೆ ಕಂಡಿವೆ.</p>.<p><strong>ಗಳಿಕೆ</strong>: ಟಿಸಿಎಸ್ ಷೇರು ಶೇ 4.13ರಷ್ಟು ಹೆಚ್ಚಾಗಿದೆ. ಎಚ್ಯುಎಲ್, ನೆಸ್ಲೆ ಇಂಡಿಯಾ, ಟೆಕ್ ಮಹೀಂದ್ರಾ ಮತ್ತು ಇನ್ಫೊಸಿಸ್ ಷೇರುಗಳು ಗಳಿಕೆ ಕಂಡುಕೊಂಡಿವೆ.</p>.<p>ಆದಾಯ ತೆರಿಗೆ ಹಂತದಲ್ಲಿನ ಬದಲಾವಣೆಯಿಂದಾಗಿ ತೆರಿಗೆ ಉಳಿಸುವ ಹೂಡಿಕೆ ಕಡಿಮೆಯಾಗುವ ಆತಂಕ ಎದುರಾಗಿದೆ. ಇದರ ಜತೆಗೆ ಲಾಭಾಂಶ ವಿತರಣೆ ತೆರಿಗೆಯನ್ನು ಹೂಡಿಕೆದಾರರಿಗೆ ವರ್ಗಾಯಿಸುವ ಪ್ರಸ್ತಾವವೂ ನಕಾರಾತ್ಮಕ ಭಾವನೆ ಮೂಡಿಸಿದೆ ಎಂದು ಪರಿಣತರು ವಿಶ್ಲೇಷಣೆ ಮಾಡಿದ್ದಾರೆ.</p>.<p>ಉದ್ಯಮ ಅಥವಾ ಗ್ರಾಹಕರ ಪರವಾದ ಯಾವುದೇ ನಿರ್ಧಾರಗಳು ಹೊರಬಿದ್ದಿಲ್ಲ. ಆದಾಯ ತೆರಿಗೆಯಲ್ಲಿನ ಬದಲಾವಣೆಯು ರಾಜಕೀಯ ಲಾಭವನ್ನು ಸೃಷ್ಟಿಸಲಿದೆಯೇ ಹೊರತು ಸದ್ಯ ಮಟ್ಟಿಗಂತೂ ಆರ್ಥಿಕ ಬೆಳವಣಿಗೆಗೆ ಪೂರಕವಾಗಿಲ್ಲ’ ಎಂದು ಷೇರ್ ಇಂಡಿಯಾ ಸೆಕ್ಯುರಿಟೀಸ್ನ ಅಧ್ಯಕ್ಷ ಅಭಿನವ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.</p>.<p><strong>ಕರಗಿತು ₹ 3.46 ಲಕ್ಷ ಕೋಟಿ</strong><br />ಷೇರುಪೇಟೆಯಲ್ಲಿನ ನಕಾರಾತ್ಮಕ ವಹಿವಾಟು ಹೂಡಿಕೆದಾರರ ಸಂಪತ್ತು ಕರಗುವಂತೆ ಮಾಡಿತು.</p>.<p>ದಿನದ ವಹಿವಾಟಿನಲ್ಲಿ, ಮಾರುಕಟ್ಟೆ ಮೌಲ್ಯದ ಲೆಕ್ಕಚಾರದಲ್ಲಿ ಹೂಡಿಕೆದಾರರ ಸಂಪತ್ತು ₹ 3.46 ಲಕ್ಷ ಕೋಟಿಗಳಷ್ಟು ಕರಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯ ₹ 156.50 ಲಕ್ಷ ಕೋಟಿಗಳಿಂದ ₹ 153.04 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ.</p>.<p><strong>ವಹಿವಾಟಿನ ವಿವರ</strong></p>.<p>222 ಅಂಶ:2019ರ ಜುಲೈ 5–2020ರ ಫೆಬ್ರುವರಿ 1ರ ಅವಧಿಯಲ್ಲಿ ಸೂಚ್ಯಂಕದ ಒಟ್ಟಾರೆ ಗಳಿಕೆ</p>.<p>149 ಅಂಶ:2019ರ ಜುಲೈ 5–2020ರ ಫೆಬ್ರುವರಿ 1ರ ಅವಧಿಯಲ್ಲಿ ನಿಫ್ಟಿಯಲ್ಲಿ ಆಗಿರುವ ಇಳಿಕೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>