<p><strong>ಚಲಂತಿ ಗಿರಯಃ ಕಾಮಂ ಯುಗಾಂತಪವನಾಹತಾಃ ।</strong></p>.<p><strong>ಕೃಚ್ಛ್ರೇsಪಿ ನ ಚಲತ್ಯೇವ ಧೀರಾಣಾಂ ನಿಶ್ಚಲಂ ಮನಃ ।।</strong></p>.<p><strong>ಇದರ ತಾತ್ಪರ್ಯ ಹೀಗೆ: ‘ಪ್ರಳಯಮಾರುತಗಳು ಬೀಸಿ ಬಡಿದಾಗ ಬೆಟ್ಟಗಳೂ ಅಲ್ಲಾಡಿಹೋಗುತ್ತವೆ. ಆದರೆ ಎಂಥ ಕಷ್ಟದಲ್ಲಿಯೂ ಧೀರರ ನಿಶ್ಚಲವಾದ ಮನಸ್ಸು ಅಲ್ಲಾಡುವುದಿಲ್ಲ.‘</strong></p>.<p>ಈ ಸುಭಾಷಿತದ ಜೊತೆಗೆ ಮಂಕುತಿಮ್ಮನ ಕಗ್ಗದ ಪದ್ಯವೊಂದು ನೆನಪಾಗುತ್ತದೆ:</p>.<p>ಒರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ ।<br />ಧರ್ಮಸಂಕಟಗಳಲಿ, ಜೀವಸಮರದಲಿ ।।<br />ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ ।<br />ನಿರ್ಮಿತ್ರನಿರಲು ಕಲಿ – ಮಂಕುತಿಮ್ಮ ।।</p>.<p>ಕಷ್ಟಗಳು ಬಂದಾಗಲೇ ನಮ್ಮ ಶಕ್ತಿ ಎಷ್ಟು ಎಂದು ಗೊತ್ತಾಗುವುದು. ನಮಗೆ ಅನಾರೋಗ್ಯ ಬಂದಾಗ ಅದು ಎಷ್ಟು ತಡೆದುಕೊಳ್ಳಬಲ್ಲದು ಎನ್ನುವುದರಿಂದನಮ್ಮ ದೇಹದ ಶಕ್ತಿ ಗೊತ್ತಾಗುವುದು. ಈಗ ಕೋವಿಡ್ –19ರ ಸಂದರ್ಭದಲ್ಲಿ ಎಲ್ಲರೂ ಮಾತನಾಡುತ್ತಿರುವುದು ರೋಗನಿರೋಧಕಶಕ್ತಿಯ ಬಗ್ಗೆ. ರೋಗನಿರೋಧಶಕ್ತಿಯೊಂದೇ ಈ ಕಾಯಿಲೆಯನ್ನು ಗೆಲ್ಲಲು ಇರುವ ರಾಮಬಾಣ ಎಂದೆಲ್ಲ ಕೇಳುತ್ತಿರುತ್ತೇವೆ. ಇಂಥ ಶಕ್ತಿ ನಮ್ಮ ಜೀವನಕ್ಕೂ ಅನ್ವಯವಾಗುತ್ತದೆ. ಕಷ್ಟಗಳನ್ನು ಸ್ವೀಕರಿಸಿ, ಎದುರಿಸಿ, ಜಯಿಸುವ ಗುಣ.</p>.<p>ಬಿರುಗಾಳಿ ಬೀಸಿದಾಗ ಮರಗಳ ಶಕ್ತಿ ಎಷ್ಟೆಂದು ಗೊತ್ತಾಗಿಬಿಡುತ್ತದೆ. ಕೆಲವೊಂದು ಮರಗಳು ನೆಲಕ್ಕೆ ಉರುಳುತ್ತವೆ. ಬೇರು ಆಳದಲ್ಲಿರುವ, ಕಾಂಡಗಳನ್ನು ದಷ್ಟಪುಟ್ಟವಾಗಿಟ್ಟುಕೊಂಡಿರುವ ಮರಗಳು ಎಂಥ ಗಾಳಿಗೂ ಜಗ್ಗುವುದಿಲ್ಲ.</p>.<p>ಇಲ್ಲಿ ಸುಭಾಷಿತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುತ್ತಿದೆ. ಪ್ರಳಯಕಾಲದಲ್ಲಿ ಬೀಸುವ ಗಾಳಿಗೆ ಪರ್ವತಗಳೇ ಉರುಳಿಹೋಗುತ್ತವೆಯಂತೆ. ಆದರೆ ಧೀರರು, ಎಂದರೆ ಧೈರ್ಯವಂತರು ಮಾತ್ರ ಎಂಥ ಕಷ್ಟಪರಂಪರೆಯಲ್ಲೂ ಅಲುಗಾಡದೆ ಸ್ಥಿರವಾಗಿರುತ್ತಾರೆ.</p>.<p>ರಾಮ ಎಂಥ ಸಮಯದಲ್ಲೂ ಧೃತಿಗೆಡಲಿಲ್ಲ; ದ್ರೌಪದಿ ಕೂಡ ಎಷ್ಟೆಲ್ಲ ಕಷ್ಟಗಳೂ ಬಂದರೂ ಧೈರ್ಯವಾಗಿ ಎದುರಿಸಿದಳು. ಕುಂತಿಯೂ ಇದಕ್ಕೆ ಒಳ್ಳೆಯ ಉದಾಹರಣೆ.</p>.<p>ಜೀವನ ಎಂದಮೇಲೆ ಕಷ್ಟಗಳು ಬಂದೇ ಬರುತ್ತವೆ. ಅವನ್ನು ಧೈರ್ಯವಾಗಿ ಎದುರಿಸಲೇ ಬೇಕು. ನಾವು ಕಲಿತಿರುವ ವಿದ್ಯೆ, ನಮ್ಮ ಧೈರ್ಯ–ವಿವೇಕಗಳು ಎಷ್ಟು ಗಟ್ಟಿಯಾಗಿವೆ ಎಂದು ಗೊತ್ತಾಗುವುದೇ ಕಷ್ಟಗಳ ಸಮಯದಲ್ಲಿ.</p>.<p>ಜೀವಸಮರದಲಿ, ಎಂದರೆ ಜೀವನ ಎಂಬ ಯುದ್ಧದಲ್ಲಿ ನೀನೊಬ್ಬನೇ ನಿಲ್ಲತಕ್ಕದ್ದು ಎನ್ನುತ್ತಿದ್ದಾರೆ, ಡಿವಿಜಿ. ಕಷ್ಟಕಾಲದಲ್ಲಿ ಅವರು ನನ್ನ ಜೊತೆಯಲ್ಲಿ ಇಲ್ಲ, ಇವರು ನನ್ನ ಜೊತೆಯಲ್ಲಿ ಇಲ್ಲ – ಎಂದು ಬಯಸದೆ, ಕೊರಗದೆ ನೀನೊಬ್ಬನೇ ನಿನ್ನ ಯುದ್ಧವನ್ನು ಮಾಡು. ಇದೇ ಜೀವನಧರ್ಮಯೋಗ ಎಂದಿದ್ದಾರೆ, ಅವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಲಂತಿ ಗಿರಯಃ ಕಾಮಂ ಯುಗಾಂತಪವನಾಹತಾಃ ।</strong></p>.<p><strong>ಕೃಚ್ಛ್ರೇsಪಿ ನ ಚಲತ್ಯೇವ ಧೀರಾಣಾಂ ನಿಶ್ಚಲಂ ಮನಃ ।।</strong></p>.<p><strong>ಇದರ ತಾತ್ಪರ್ಯ ಹೀಗೆ: ‘ಪ್ರಳಯಮಾರುತಗಳು ಬೀಸಿ ಬಡಿದಾಗ ಬೆಟ್ಟಗಳೂ ಅಲ್ಲಾಡಿಹೋಗುತ್ತವೆ. ಆದರೆ ಎಂಥ ಕಷ್ಟದಲ್ಲಿಯೂ ಧೀರರ ನಿಶ್ಚಲವಾದ ಮನಸ್ಸು ಅಲ್ಲಾಡುವುದಿಲ್ಲ.‘</strong></p>.<p>ಈ ಸುಭಾಷಿತದ ಜೊತೆಗೆ ಮಂಕುತಿಮ್ಮನ ಕಗ್ಗದ ಪದ್ಯವೊಂದು ನೆನಪಾಗುತ್ತದೆ:</p>.<p>ಒರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ ।<br />ಧರ್ಮಸಂಕಟಗಳಲಿ, ಜೀವಸಮರದಲಿ ।।<br />ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ ।<br />ನಿರ್ಮಿತ್ರನಿರಲು ಕಲಿ – ಮಂಕುತಿಮ್ಮ ।।</p>.<p>ಕಷ್ಟಗಳು ಬಂದಾಗಲೇ ನಮ್ಮ ಶಕ್ತಿ ಎಷ್ಟು ಎಂದು ಗೊತ್ತಾಗುವುದು. ನಮಗೆ ಅನಾರೋಗ್ಯ ಬಂದಾಗ ಅದು ಎಷ್ಟು ತಡೆದುಕೊಳ್ಳಬಲ್ಲದು ಎನ್ನುವುದರಿಂದನಮ್ಮ ದೇಹದ ಶಕ್ತಿ ಗೊತ್ತಾಗುವುದು. ಈಗ ಕೋವಿಡ್ –19ರ ಸಂದರ್ಭದಲ್ಲಿ ಎಲ್ಲರೂ ಮಾತನಾಡುತ್ತಿರುವುದು ರೋಗನಿರೋಧಕಶಕ್ತಿಯ ಬಗ್ಗೆ. ರೋಗನಿರೋಧಶಕ್ತಿಯೊಂದೇ ಈ ಕಾಯಿಲೆಯನ್ನು ಗೆಲ್ಲಲು ಇರುವ ರಾಮಬಾಣ ಎಂದೆಲ್ಲ ಕೇಳುತ್ತಿರುತ್ತೇವೆ. ಇಂಥ ಶಕ್ತಿ ನಮ್ಮ ಜೀವನಕ್ಕೂ ಅನ್ವಯವಾಗುತ್ತದೆ. ಕಷ್ಟಗಳನ್ನು ಸ್ವೀಕರಿಸಿ, ಎದುರಿಸಿ, ಜಯಿಸುವ ಗುಣ.</p>.<p>ಬಿರುಗಾಳಿ ಬೀಸಿದಾಗ ಮರಗಳ ಶಕ್ತಿ ಎಷ್ಟೆಂದು ಗೊತ್ತಾಗಿಬಿಡುತ್ತದೆ. ಕೆಲವೊಂದು ಮರಗಳು ನೆಲಕ್ಕೆ ಉರುಳುತ್ತವೆ. ಬೇರು ಆಳದಲ್ಲಿರುವ, ಕಾಂಡಗಳನ್ನು ದಷ್ಟಪುಟ್ಟವಾಗಿಟ್ಟುಕೊಂಡಿರುವ ಮರಗಳು ಎಂಥ ಗಾಳಿಗೂ ಜಗ್ಗುವುದಿಲ್ಲ.</p>.<p>ಇಲ್ಲಿ ಸುಭಾಷಿತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುತ್ತಿದೆ. ಪ್ರಳಯಕಾಲದಲ್ಲಿ ಬೀಸುವ ಗಾಳಿಗೆ ಪರ್ವತಗಳೇ ಉರುಳಿಹೋಗುತ್ತವೆಯಂತೆ. ಆದರೆ ಧೀರರು, ಎಂದರೆ ಧೈರ್ಯವಂತರು ಮಾತ್ರ ಎಂಥ ಕಷ್ಟಪರಂಪರೆಯಲ್ಲೂ ಅಲುಗಾಡದೆ ಸ್ಥಿರವಾಗಿರುತ್ತಾರೆ.</p>.<p>ರಾಮ ಎಂಥ ಸಮಯದಲ್ಲೂ ಧೃತಿಗೆಡಲಿಲ್ಲ; ದ್ರೌಪದಿ ಕೂಡ ಎಷ್ಟೆಲ್ಲ ಕಷ್ಟಗಳೂ ಬಂದರೂ ಧೈರ್ಯವಾಗಿ ಎದುರಿಸಿದಳು. ಕುಂತಿಯೂ ಇದಕ್ಕೆ ಒಳ್ಳೆಯ ಉದಾಹರಣೆ.</p>.<p>ಜೀವನ ಎಂದಮೇಲೆ ಕಷ್ಟಗಳು ಬಂದೇ ಬರುತ್ತವೆ. ಅವನ್ನು ಧೈರ್ಯವಾಗಿ ಎದುರಿಸಲೇ ಬೇಕು. ನಾವು ಕಲಿತಿರುವ ವಿದ್ಯೆ, ನಮ್ಮ ಧೈರ್ಯ–ವಿವೇಕಗಳು ಎಷ್ಟು ಗಟ್ಟಿಯಾಗಿವೆ ಎಂದು ಗೊತ್ತಾಗುವುದೇ ಕಷ್ಟಗಳ ಸಮಯದಲ್ಲಿ.</p>.<p>ಜೀವಸಮರದಲಿ, ಎಂದರೆ ಜೀವನ ಎಂಬ ಯುದ್ಧದಲ್ಲಿ ನೀನೊಬ್ಬನೇ ನಿಲ್ಲತಕ್ಕದ್ದು ಎನ್ನುತ್ತಿದ್ದಾರೆ, ಡಿವಿಜಿ. ಕಷ್ಟಕಾಲದಲ್ಲಿ ಅವರು ನನ್ನ ಜೊತೆಯಲ್ಲಿ ಇಲ್ಲ, ಇವರು ನನ್ನ ಜೊತೆಯಲ್ಲಿ ಇಲ್ಲ – ಎಂದು ಬಯಸದೆ, ಕೊರಗದೆ ನೀನೊಬ್ಬನೇ ನಿನ್ನ ಯುದ್ಧವನ್ನು ಮಾಡು. ಇದೇ ಜೀವನಧರ್ಮಯೋಗ ಎಂದಿದ್ದಾರೆ, ಅವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>