<p><strong>ದರಿದ್ರಾನ್ ಭರ ಕೌಂತೇಯ ನ ಸಮೃದ್ಧಾನ್ ಕದಾಚನ ।<br />ವ್ಯಾಧಿತಸ್ಯೌಷಧಂ ಪಥ್ಯಂ ನೀರೋಗಸ್ಯ ಕಿಮೌಷಧೈಃ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಯಾವಾಗಲೂ ಬಡವರಿಗೆ ಆಧಾರವಾಗಿರಬೇಕೇ ವಿನಾ ಶ್ರೀಮಂತರಿಗಲ್ಲ; ರೋಗಿಗೆ ಔಷಧ ಬೇಕೆ ಹೊರತು ಆರೋಗ್ಯವಂತನಿಗೆ ಔಷಧದಿಂದ ಆಗಬೇಕಾಗುದೇನು?’</p>.<p>ಯಾರಿಗೆ ಸಹಾಯದ ಆವಶ್ಯಕತೆ ಇದೆಯೋ ಅವರಿಗೆ ಮಾಡಬೇಕಾಗಿದೆಯೆ ಹೊರತು ಬಲವಂತರಿಗೆ ಅಲ್ಲ ಎಂಬುದನ್ನು ಮಹಾಭಾರತದ ಈ ಶ್ಲೋಕ ಹೇಳುತ್ತಿದೆ.</p>.<p>ಸಹಾಯ ಎಂಬುದು ಅಬಲರಿಗೆ ಸಿಗಬೇಕಾಗಿರುವ ನೆರವು. ಇದು ಹಣ, ವಿದ್ಯೆ, ಅನ್ನ – ಎಲ್ಲ ರೀತಿಯ ಸಹಾಯಗಳಿಗೂ ಅನ್ವಯಿಸುತ್ತದೆ. ಹಣದ ಆವಶ್ಯಕತೆ ಬಡವನಿಗೆ ಇರುತ್ತೆಯೆ ವಿನಾ ಶ್ರೀಮಂತನಿಗೆ ಅಲ್ಲ; ಅಕ್ಷರಗಳ ಪರಿಚಯವನ್ನು ಮಾಡಿಸಬೇಕಾದದ್ದು ಅವಿದ್ಯಾವಂತನಿಗೆ ವಿನಾ ವಿದ್ಯಾವಂತನಿಗೆ ಅಲ್ಲ; ಹಸಿದಿರುವವನಿಗೆ ಆಹಾರದ ಆವಶ್ಯಕತೆಯಿರುತ್ತದೆಯೇ ವಿನಾ ಹೊಟ್ಟೆ ತುಂಬಿರುವವನಿಗೆ ಅಲ್ಲ.</p>.<p>ಈ ಶ್ಲೋಕಕ್ಕೆ ಪೂರಕವಾಗಿ ಇನ್ನೊಂದು ಸುಭಾಷಿತವನ್ನೂ ನೋಡಬಹುದು:</p>.<p><strong>ವೃಥಾ ವೃಷ್ಟಿಃ ಸಮುದ್ರೇಷು ವೃಥಾ ತೃಪ್ತಸ್ಯ ಭೋಜನಮ್ ।</strong></p>.<p><strong>ವೃಥಾ ದಾನಂ ಸಮರ್ಥೇಭ್ಯೋ ವೃಥಾ ದೀಪೋ ದಿವಾಪಿ ಚ ।।</strong></p>.<p>‘ಸಮುದ್ರದಲ್ಲಿ ಮಳೆಯೂ, ಹೊಟ್ಟೆ ತುಂಬಿದವನಿಗೆ ಊಟವೂ ವ್ಯರ್ಥ; ಸಮರ್ಥರಿಗೆ ದಾನಮಾಡುವುದು ವ್ಯರ್ಥ; ಹಗಲು ಹೊತ್ತಿನಲ್ಲಿ ದೀಪ ವ್ಯರ್ಥ’ – ಎಂಬುದು ಈ ಸುಭಾಷಿತದ ತಾತ್ಪರ್ಯ.</p>.<p>ಒಬ್ಬ ತಾಯಿಗೆ ನಾಲ್ವರು ಮಕ್ಕಳಿದ್ದಾರೆಂದುಕೊಳ್ಳಿ. ಅದರಲ್ಲಿ ಒಬ್ಬ ಮಗನೋ ಅಥವಾ ಮಗಳೋ ಸ್ವಲ್ಪ ದಡ್ಡನೋ ಅಥವಾ ದುರ್ಬಲನೋ ಆಗಿದ್ದಾನೆ ಎಂದಿಟ್ಟುಕೊಳ್ಳಿ. ಆ ತಾಯಿ ಎಲ್ಲ ಮಕ್ಕಳಿಗಿಂತಲೂ ಈ ಅಶಕ್ತ ಮಗುವಿಗೆ ಹೆಚ್ಚಿನ ಗಮನವನ್ನು ಕೊಡುತ್ತಾಳೆ. ಹೀಗೆಂದು ಅವಳು ಮಕ್ಕಳಲ್ಲಿ ತಾರತಮ್ಯ ಮಾಡುತ್ತಾಳೆ ಎಂದಲ್ಲ; ಯಾರಿಗೆ ಎಷ್ಟು ಪ್ರೀತಿ–ಕಾಳಜಿಗಳು ಅವಳಿಂದ ಬೇಕೋ ಅದಕ್ಕೆ ತಕ್ಕ ಪ್ರಮಾಣದಲ್ಲಿ ಅವಳು ಒದಗಿಸುತ್ತಾಳೆ. ಇದು ನಿಜವಾದ ಮಾತೃವಾತ್ಸಲ್ಯ.</p>.<p>ಆದರೆ ನಾವು ಹೆಚ್ಚಿನ ಸಂದರ್ಭದಲ್ಲಿ ಹೊಟ್ಟೆ ತುಂಬಿದವರಿಗೇ ಅನ್ನವನ್ನು ನೀಡುತ್ತಿರುತ್ತೇವೆ; ಹಸಿದವರ ಕಡೆಗೆ ನಮ್ಮ ಗಮನ ಹೋಗುವುದಿಲ್ಲ. ಸುಭಾಷಿತ ಇಂಥ ಮನೋಧರ್ಮವನ್ನೇ ಪ್ರಶ್ನಿಸುತ್ತಿರುವುದು. ಔಷಧ ಬೇಕಾಗಿರುವುದು ಅನಾರೋಗ್ಯದಲ್ಲಿರುವವನಿಗೆ; ಅದನ್ನು ಬಿಟ್ಟು ಆರೋಗ್ಯವಾಗಿರುವವನಿಗೆ ಔಷಧವನ್ನು ಕುಡಿಸಿದರೆ ಏನು ಪ್ರಯೋಜನ? ಅದರಿಂದ ಅವನಿಗೆ ಪ್ರಯೋಜನಕ್ಕಿಂತಲೂ ತೊಂದರೆಯೇ ಆಗಬಹುದಷ್ಟೆ!</p>.<p>ನಾವು ಸಹಾಯ ಮಾಡುವುದೇ ದೊಡ್ಡದಲ್ಲ, ಅದನ್ನು ಅರ್ಹರಿಗೆ ಮಾಡುವುದರಲ್ಲಿಯೇ ಅದರ ನಿಜವಾದ ಸಾರ್ಥಕತೆ ಇರುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದರಿದ್ರಾನ್ ಭರ ಕೌಂತೇಯ ನ ಸಮೃದ್ಧಾನ್ ಕದಾಚನ ।<br />ವ್ಯಾಧಿತಸ್ಯೌಷಧಂ ಪಥ್ಯಂ ನೀರೋಗಸ್ಯ ಕಿಮೌಷಧೈಃ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಯಾವಾಗಲೂ ಬಡವರಿಗೆ ಆಧಾರವಾಗಿರಬೇಕೇ ವಿನಾ ಶ್ರೀಮಂತರಿಗಲ್ಲ; ರೋಗಿಗೆ ಔಷಧ ಬೇಕೆ ಹೊರತು ಆರೋಗ್ಯವಂತನಿಗೆ ಔಷಧದಿಂದ ಆಗಬೇಕಾಗುದೇನು?’</p>.<p>ಯಾರಿಗೆ ಸಹಾಯದ ಆವಶ್ಯಕತೆ ಇದೆಯೋ ಅವರಿಗೆ ಮಾಡಬೇಕಾಗಿದೆಯೆ ಹೊರತು ಬಲವಂತರಿಗೆ ಅಲ್ಲ ಎಂಬುದನ್ನು ಮಹಾಭಾರತದ ಈ ಶ್ಲೋಕ ಹೇಳುತ್ತಿದೆ.</p>.<p>ಸಹಾಯ ಎಂಬುದು ಅಬಲರಿಗೆ ಸಿಗಬೇಕಾಗಿರುವ ನೆರವು. ಇದು ಹಣ, ವಿದ್ಯೆ, ಅನ್ನ – ಎಲ್ಲ ರೀತಿಯ ಸಹಾಯಗಳಿಗೂ ಅನ್ವಯಿಸುತ್ತದೆ. ಹಣದ ಆವಶ್ಯಕತೆ ಬಡವನಿಗೆ ಇರುತ್ತೆಯೆ ವಿನಾ ಶ್ರೀಮಂತನಿಗೆ ಅಲ್ಲ; ಅಕ್ಷರಗಳ ಪರಿಚಯವನ್ನು ಮಾಡಿಸಬೇಕಾದದ್ದು ಅವಿದ್ಯಾವಂತನಿಗೆ ವಿನಾ ವಿದ್ಯಾವಂತನಿಗೆ ಅಲ್ಲ; ಹಸಿದಿರುವವನಿಗೆ ಆಹಾರದ ಆವಶ್ಯಕತೆಯಿರುತ್ತದೆಯೇ ವಿನಾ ಹೊಟ್ಟೆ ತುಂಬಿರುವವನಿಗೆ ಅಲ್ಲ.</p>.<p>ಈ ಶ್ಲೋಕಕ್ಕೆ ಪೂರಕವಾಗಿ ಇನ್ನೊಂದು ಸುಭಾಷಿತವನ್ನೂ ನೋಡಬಹುದು:</p>.<p><strong>ವೃಥಾ ವೃಷ್ಟಿಃ ಸಮುದ್ರೇಷು ವೃಥಾ ತೃಪ್ತಸ್ಯ ಭೋಜನಮ್ ।</strong></p>.<p><strong>ವೃಥಾ ದಾನಂ ಸಮರ್ಥೇಭ್ಯೋ ವೃಥಾ ದೀಪೋ ದಿವಾಪಿ ಚ ।।</strong></p>.<p>‘ಸಮುದ್ರದಲ್ಲಿ ಮಳೆಯೂ, ಹೊಟ್ಟೆ ತುಂಬಿದವನಿಗೆ ಊಟವೂ ವ್ಯರ್ಥ; ಸಮರ್ಥರಿಗೆ ದಾನಮಾಡುವುದು ವ್ಯರ್ಥ; ಹಗಲು ಹೊತ್ತಿನಲ್ಲಿ ದೀಪ ವ್ಯರ್ಥ’ – ಎಂಬುದು ಈ ಸುಭಾಷಿತದ ತಾತ್ಪರ್ಯ.</p>.<p>ಒಬ್ಬ ತಾಯಿಗೆ ನಾಲ್ವರು ಮಕ್ಕಳಿದ್ದಾರೆಂದುಕೊಳ್ಳಿ. ಅದರಲ್ಲಿ ಒಬ್ಬ ಮಗನೋ ಅಥವಾ ಮಗಳೋ ಸ್ವಲ್ಪ ದಡ್ಡನೋ ಅಥವಾ ದುರ್ಬಲನೋ ಆಗಿದ್ದಾನೆ ಎಂದಿಟ್ಟುಕೊಳ್ಳಿ. ಆ ತಾಯಿ ಎಲ್ಲ ಮಕ್ಕಳಿಗಿಂತಲೂ ಈ ಅಶಕ್ತ ಮಗುವಿಗೆ ಹೆಚ್ಚಿನ ಗಮನವನ್ನು ಕೊಡುತ್ತಾಳೆ. ಹೀಗೆಂದು ಅವಳು ಮಕ್ಕಳಲ್ಲಿ ತಾರತಮ್ಯ ಮಾಡುತ್ತಾಳೆ ಎಂದಲ್ಲ; ಯಾರಿಗೆ ಎಷ್ಟು ಪ್ರೀತಿ–ಕಾಳಜಿಗಳು ಅವಳಿಂದ ಬೇಕೋ ಅದಕ್ಕೆ ತಕ್ಕ ಪ್ರಮಾಣದಲ್ಲಿ ಅವಳು ಒದಗಿಸುತ್ತಾಳೆ. ಇದು ನಿಜವಾದ ಮಾತೃವಾತ್ಸಲ್ಯ.</p>.<p>ಆದರೆ ನಾವು ಹೆಚ್ಚಿನ ಸಂದರ್ಭದಲ್ಲಿ ಹೊಟ್ಟೆ ತುಂಬಿದವರಿಗೇ ಅನ್ನವನ್ನು ನೀಡುತ್ತಿರುತ್ತೇವೆ; ಹಸಿದವರ ಕಡೆಗೆ ನಮ್ಮ ಗಮನ ಹೋಗುವುದಿಲ್ಲ. ಸುಭಾಷಿತ ಇಂಥ ಮನೋಧರ್ಮವನ್ನೇ ಪ್ರಶ್ನಿಸುತ್ತಿರುವುದು. ಔಷಧ ಬೇಕಾಗಿರುವುದು ಅನಾರೋಗ್ಯದಲ್ಲಿರುವವನಿಗೆ; ಅದನ್ನು ಬಿಟ್ಟು ಆರೋಗ್ಯವಾಗಿರುವವನಿಗೆ ಔಷಧವನ್ನು ಕುಡಿಸಿದರೆ ಏನು ಪ್ರಯೋಜನ? ಅದರಿಂದ ಅವನಿಗೆ ಪ್ರಯೋಜನಕ್ಕಿಂತಲೂ ತೊಂದರೆಯೇ ಆಗಬಹುದಷ್ಟೆ!</p>.<p>ನಾವು ಸಹಾಯ ಮಾಡುವುದೇ ದೊಡ್ಡದಲ್ಲ, ಅದನ್ನು ಅರ್ಹರಿಗೆ ಮಾಡುವುದರಲ್ಲಿಯೇ ಅದರ ನಿಜವಾದ ಸಾರ್ಥಕತೆ ಇರುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>