<p>ವೃಕ್ಷಾಂಶ್ಚಿತ್ವಾ ಪಶೂನ್ ಹತ್ವಾ ಕೃತ್ವಾ ರುಧಿರಕರ್ದಮಮ್ ।</p>.<p>ಯದ್ಯೇವ ಗಮ್ಯತೇ ಸ್ವರ್ಗೇ ನರಕಃ ಕೇನ ಗಮ್ಯತೇ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಮರಗಳನ್ನು ಕಡಿದು, ಪ್ರಾಣಿಗಳನ್ನು ಕೊಂದು, ರಕ್ತದ ಕೆಸರು ಮಾಡಿ, ಸ್ವರ್ಗವನ್ನು ಪಡೆಯುವೆ ಎಂದರೆ, ನರಕಕ್ಕೆ ಹೋಗುವವರು ಯಾರು?’</p>.<p>ಇದೊಂದು ಮಾರ್ಮಿಕವಾದ ಸುಭಾಷಿತ. ನಮ್ಮ ಸದ್ಯದ ಪರಿಸ್ಥಿತಿಯ ಬಗ್ಗೆ ಸೂಚನೆಯನ್ನು ಕೊಡುವಂತಿದೆ.</p>.<p>ಪರಿಸರ ನಾಶದ ಬಗ್ಗೆ ನಾವಿಂದು ಮಾತನಾಡುತ್ತಿದ್ದೇವೆ. ಆದರೆ ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಸಂಸ್ಕೃತಿಯಲ್ಲಿದ್ದ ಪರಿಸರಕಾಳಜಿಯ ಬಗ್ಗೆ ನಾವು ಹೆಮ್ಮೆ ಪಡುವಂತಿದೆ. ಈ ಶ್ಲೋಕ ಪಂಚತಂತ್ರದ್ದು. ಹಲವು ಶತಮಾನಗಳ ಹಿಂದೆ ರಚಿತವಾದ ಕೃತಿ ಇದು. ಆಗ ಖಂಡಿತವಾಗಿಯೂ ಪರಿಸರದ ಸ್ಥಿತಿ ಈಗಿನಂತೆ ಇರಲಿಲ್ಲ; ಅರಣ್ಯಪ್ರದೇಶ ವಿಸ್ತಾರವಾಗಿತ್ತು; ಪರಿಸರಮಾಲಿನ್ಯವೂ ಇಂದಿನಂತೆ ಇದ್ದಿರಲಾರದು. ಹೀಗಿದ್ದರೂ ಅಂದಿನವರು ಪರಿಸರದ ಬಗ್ಗೆ ಎಷ್ಟು ಎಚ್ಚರವನ್ನು ವಹಿಸುತ್ತಿದ್ದರು ಎಂಬದನ್ನು ಈ ಶ್ಲೋಕ ಸೂಚಿಸುತ್ತದೆ.</p>.<p>ನಾವಿಂದು ಮರಗಳನ್ನು ಕತ್ತರಿಸುತ್ತಿದ್ದೇವೆ. ಎಂದರೆ ಅರಣ್ಯಗಳನ್ನು ನಾಶ ಮಾಡುತ್ತಿದ್ದೇವೆ. ಅರಣ್ಯನಾಶ ಎಂದರೆ ಅರಣ್ಯದಲ್ಲಿರುವ ಮರಗಳು ಮಾತ್ರವೇ ಅಲ್ಲ, ಅಲ್ಲಿರುವ ಪಶು–ಪಕ್ಷಿಗಳನ್ನೂ ನಾಶ ಮಾಡುತ್ತಬಂದಿದ್ದೇವೆ.</p>.<p>ನಮಗೆ ಭೂಮಿಯ ಮೇಲೆ ಹೇಗೆ ಬದುಕುವುದಕ್ಕೆ ಹಕ್ಕಿದೆಯೋ ಅಂತೆಯೇ ಇಲ್ಲಿರುವ ಪ್ರತಿಯೊಂದು ಮರ, ಗಿಡ, ಪಶು, ಪಕ್ಷಿ, ಕೀಟ – ಸೃಷ್ಟಿಯ ಎಲ್ಲ ಜೀವಿಗಳಿಗೂ ಇದೆ. ಆದರೆ ನಾವು ನಮ್ಮ ಸ್ವಾರ್ಥದಿಂದ ಅವುಗಳನ್ನು ಕೊಲ್ಲುತ್ತಿದ್ದೇವೆ. ಇದರಿಂದ ನಮ್ಮ ಬದುಕು ಕೂಡ ವಿನಾಶದತ್ತ ಹೆಜ್ಜೆ ಇಡುವಂತಾಗಿದೆ.</p>.<p>ಸುಭಾಷಿತ ಇಲ್ಲಿ ವ್ಯಂಗ್ಯದಲ್ಲಿ ನಮ್ಮನ್ನು ತಿವಿಯುತ್ತಿದೆ. ಮರಗಳನ್ನು ಕಡಿಯುವುದು, ಪ್ರಾಣಿಗಳನ್ನು ಕೊಲ್ಲುವುದು – ಇಂಥವನ್ನು ನಾವು ಪುಣ್ಯಸಂಪಾದನೆ ಎಂದು ಮಾಡುತ್ತಿದ್ದೇವೆ. ಪುಣ್ಯಸಂಪಾದನೆ ಎಂದರೆ ಏನು? ಸ್ವರ್ಗಪ್ರಾಪ್ತಿಯೇ ಅಲ್ಲವೆ? ಸುಭಾಷಿತ ಕೇಳುತ್ತಿದೆ, ಇಂಥ ನೀಚಕಾರ್ಯವನ್ನು ಮಾಡಿದವರೇ ಸ್ವರ್ಗಕ್ಕೆ ಹೋಗುವಂತಾದರೆ, ಇನ್ನು ನರಕಕ್ಕೆ ಹೋಗುವವರು ಯಾರು?</p>.<p><br />ಪರೋಪಕಾರಾಯ ಫಲಂತಿ ವೃಕ್ಷಾಃ<br />ಪರೋಪಕಾರಾಯ ವಹಂತಿ ನದ್ಯಃ ।<br />ಪರೋಪಕಾರಾಯ ದುಹಂತಿ ಗಾವಃ<br />ಪರೋಪಕಾರಾರ್ಥಮಿದಂ ಶರೀರಮ್ ।।</p>.<p>ಪರೋಪಕಾರಕ್ಕಾಗಿ ಮರಗಳು ಹಣ್ಣನ್ನು ಕೊಡುತ್ತವೆ; ನದಿಗಳು ಹರಿಯುವುದು ಕೂಡ ಪರೋಪಕಾರಕ್ಕಾಗಿಯೇ; ಹಸುಗಳು ಹಾಲನ್ನು ನೀಡುವುದು ಸಹ ಪರೋಪಕಾರವೇ. ಅಂತೆಯೇ ನಾವು ಮನುಷ್ಯರು ಕೂಡ ನಮ್ಮ ಶರೀರವನ್ನು ಪರೋಪಕಾರಕ್ಕೆ ಮೀಸಲಾಗಿಡಬೇಕು. ಅದೇ ನ್ಯಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವೃಕ್ಷಾಂಶ್ಚಿತ್ವಾ ಪಶೂನ್ ಹತ್ವಾ ಕೃತ್ವಾ ರುಧಿರಕರ್ದಮಮ್ ।</p>.<p>ಯದ್ಯೇವ ಗಮ್ಯತೇ ಸ್ವರ್ಗೇ ನರಕಃ ಕೇನ ಗಮ್ಯತೇ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಮರಗಳನ್ನು ಕಡಿದು, ಪ್ರಾಣಿಗಳನ್ನು ಕೊಂದು, ರಕ್ತದ ಕೆಸರು ಮಾಡಿ, ಸ್ವರ್ಗವನ್ನು ಪಡೆಯುವೆ ಎಂದರೆ, ನರಕಕ್ಕೆ ಹೋಗುವವರು ಯಾರು?’</p>.<p>ಇದೊಂದು ಮಾರ್ಮಿಕವಾದ ಸುಭಾಷಿತ. ನಮ್ಮ ಸದ್ಯದ ಪರಿಸ್ಥಿತಿಯ ಬಗ್ಗೆ ಸೂಚನೆಯನ್ನು ಕೊಡುವಂತಿದೆ.</p>.<p>ಪರಿಸರ ನಾಶದ ಬಗ್ಗೆ ನಾವಿಂದು ಮಾತನಾಡುತ್ತಿದ್ದೇವೆ. ಆದರೆ ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಸಂಸ್ಕೃತಿಯಲ್ಲಿದ್ದ ಪರಿಸರಕಾಳಜಿಯ ಬಗ್ಗೆ ನಾವು ಹೆಮ್ಮೆ ಪಡುವಂತಿದೆ. ಈ ಶ್ಲೋಕ ಪಂಚತಂತ್ರದ್ದು. ಹಲವು ಶತಮಾನಗಳ ಹಿಂದೆ ರಚಿತವಾದ ಕೃತಿ ಇದು. ಆಗ ಖಂಡಿತವಾಗಿಯೂ ಪರಿಸರದ ಸ್ಥಿತಿ ಈಗಿನಂತೆ ಇರಲಿಲ್ಲ; ಅರಣ್ಯಪ್ರದೇಶ ವಿಸ್ತಾರವಾಗಿತ್ತು; ಪರಿಸರಮಾಲಿನ್ಯವೂ ಇಂದಿನಂತೆ ಇದ್ದಿರಲಾರದು. ಹೀಗಿದ್ದರೂ ಅಂದಿನವರು ಪರಿಸರದ ಬಗ್ಗೆ ಎಷ್ಟು ಎಚ್ಚರವನ್ನು ವಹಿಸುತ್ತಿದ್ದರು ಎಂಬದನ್ನು ಈ ಶ್ಲೋಕ ಸೂಚಿಸುತ್ತದೆ.</p>.<p>ನಾವಿಂದು ಮರಗಳನ್ನು ಕತ್ತರಿಸುತ್ತಿದ್ದೇವೆ. ಎಂದರೆ ಅರಣ್ಯಗಳನ್ನು ನಾಶ ಮಾಡುತ್ತಿದ್ದೇವೆ. ಅರಣ್ಯನಾಶ ಎಂದರೆ ಅರಣ್ಯದಲ್ಲಿರುವ ಮರಗಳು ಮಾತ್ರವೇ ಅಲ್ಲ, ಅಲ್ಲಿರುವ ಪಶು–ಪಕ್ಷಿಗಳನ್ನೂ ನಾಶ ಮಾಡುತ್ತಬಂದಿದ್ದೇವೆ.</p>.<p>ನಮಗೆ ಭೂಮಿಯ ಮೇಲೆ ಹೇಗೆ ಬದುಕುವುದಕ್ಕೆ ಹಕ್ಕಿದೆಯೋ ಅಂತೆಯೇ ಇಲ್ಲಿರುವ ಪ್ರತಿಯೊಂದು ಮರ, ಗಿಡ, ಪಶು, ಪಕ್ಷಿ, ಕೀಟ – ಸೃಷ್ಟಿಯ ಎಲ್ಲ ಜೀವಿಗಳಿಗೂ ಇದೆ. ಆದರೆ ನಾವು ನಮ್ಮ ಸ್ವಾರ್ಥದಿಂದ ಅವುಗಳನ್ನು ಕೊಲ್ಲುತ್ತಿದ್ದೇವೆ. ಇದರಿಂದ ನಮ್ಮ ಬದುಕು ಕೂಡ ವಿನಾಶದತ್ತ ಹೆಜ್ಜೆ ಇಡುವಂತಾಗಿದೆ.</p>.<p>ಸುಭಾಷಿತ ಇಲ್ಲಿ ವ್ಯಂಗ್ಯದಲ್ಲಿ ನಮ್ಮನ್ನು ತಿವಿಯುತ್ತಿದೆ. ಮರಗಳನ್ನು ಕಡಿಯುವುದು, ಪ್ರಾಣಿಗಳನ್ನು ಕೊಲ್ಲುವುದು – ಇಂಥವನ್ನು ನಾವು ಪುಣ್ಯಸಂಪಾದನೆ ಎಂದು ಮಾಡುತ್ತಿದ್ದೇವೆ. ಪುಣ್ಯಸಂಪಾದನೆ ಎಂದರೆ ಏನು? ಸ್ವರ್ಗಪ್ರಾಪ್ತಿಯೇ ಅಲ್ಲವೆ? ಸುಭಾಷಿತ ಕೇಳುತ್ತಿದೆ, ಇಂಥ ನೀಚಕಾರ್ಯವನ್ನು ಮಾಡಿದವರೇ ಸ್ವರ್ಗಕ್ಕೆ ಹೋಗುವಂತಾದರೆ, ಇನ್ನು ನರಕಕ್ಕೆ ಹೋಗುವವರು ಯಾರು?</p>.<p><br />ಪರೋಪಕಾರಾಯ ಫಲಂತಿ ವೃಕ್ಷಾಃ<br />ಪರೋಪಕಾರಾಯ ವಹಂತಿ ನದ್ಯಃ ।<br />ಪರೋಪಕಾರಾಯ ದುಹಂತಿ ಗಾವಃ<br />ಪರೋಪಕಾರಾರ್ಥಮಿದಂ ಶರೀರಮ್ ।।</p>.<p>ಪರೋಪಕಾರಕ್ಕಾಗಿ ಮರಗಳು ಹಣ್ಣನ್ನು ಕೊಡುತ್ತವೆ; ನದಿಗಳು ಹರಿಯುವುದು ಕೂಡ ಪರೋಪಕಾರಕ್ಕಾಗಿಯೇ; ಹಸುಗಳು ಹಾಲನ್ನು ನೀಡುವುದು ಸಹ ಪರೋಪಕಾರವೇ. ಅಂತೆಯೇ ನಾವು ಮನುಷ್ಯರು ಕೂಡ ನಮ್ಮ ಶರೀರವನ್ನು ಪರೋಪಕಾರಕ್ಕೆ ಮೀಸಲಾಗಿಡಬೇಕು. ಅದೇ ನ್ಯಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>