<p><span style="color:#B22222;"><em><strong>ಹತಂ ಜ್ಞಾನಂ ಕ್ರಿಯಾಶೂನ್ಯಂ ಹತಾ ಚಾಜ್ಞಾನಿನಃ ಕ್ರಿಯಾ।</strong></em></span><br /><span style="color:#B22222;"><em><strong>ಧಾವನ್ನಪ್ಯಂಧಕೋ ನಷ್ಟಃ ಪಶ್ಯನ್ನಪಿ ಚ ಪಂಗುಕಃ।।</strong></em></span></p>.<p><strong>ಇದರ ತಾತ್ಪರ್ಯ ಹೀಗೆ:</strong>‘ಕ್ರಿಯೆಯಿಲ್ಲದ ತಿಳಿವು ನಷ್ಟವಾದಂತೆ ವ್ಯರ್ಥ. ತಿಳಿವಿಲ್ಲದವರ ಕ್ರಿಯೆಯೂ ವ್ಯರ್ಥವೇ ಹೌದು. ಕುರುಡನು ಓಡಿದರೂ ನಷ್ಟನಾಗುತ್ತಾನೆ; ಕುಂಟನು ನೋಡುತ್ತಿದ್ದರೂ ಫಲವಿಲ್ಲದೆ ನಷ್ಟನಾಗುತ್ತಾನೆ.‘</p>.<p>ಯಾವುದಾದರೂ ಕೆಲಸವೊಂದು ಯಶಸ್ಸನ್ನು ಪಡೆಯಬೇಕಾದರೆ ಕ್ರಿಯೆ ಮತ್ತು ಜ್ಞಾನ – ಎರಡೂ ಬೇಕು. ಇದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು.</p>.<p>ನಮ್ಮಲ್ಲಿ ಕೆಲವರು ಇರುತ್ತಾರೆ; ಅವರಿಗೆ ವಿಷಯಜ್ಞಾನ ಚೆನ್ನಾಗಿರುತ್ತದೆ. ಹತ್ತಾರು ದಿಕ್ಕುಗಳಿಂದ ವಿಷಯವನ್ನು ಅರ್ಥಮಾಡಿಕೊಳ್ಳಬಲ್ಲವರಾಗಿರುತ್ತಾರೆ. ಆದರೆ ನಿಷ್ಕ್ರಿಯರಾಗಿರುತ್ತಾರೆ; ಅವರು ಕಾರ್ಯಕ್ಕೆ ಕೈ ಹಾಕುವುದೇ ಇಲ್ಲ. ಹೀಗಾಗಿ ಅವರಿಗೆ ಎಷ್ಟೆಲ್ಲ ತಿಳಿವಳಿಕೆ ಇದ್ದರೂ ಅದು ಪ್ರಯೋಜನಕ್ಕೆ ಬರದೆ ವ್ಯರ್ಥವಾಗುತ್ತಿರುತ್ತದೆ. ಸುಭಾಷಿತ ಇಂಥವರನ್ನು ಕುಂಟನಿಗೆ ಹೋಲಿಸಿದೆ. ಕುಂಟನಿಗೆ ಕಣ್ಣು ಇದೆ; ಆದರೆ ಅವನು ಓಡಲಾರ. ಕಣ್ಣು ಎಂದರೆ ತಿಳಿವಳಿಕೆ; ಕಾಲಿಲ್ಲದಿರುವುದು ಜಡತೆಗೆ ಸಂಕೇತ.</p>.<p>ಇನ್ನು ಕೆಲವರು ಇರುತ್ತಾರೆ; ಅವರಿಗೆ ವಿಷಯದ ತಲೆಬುಡವೇ ಗೊತ್ತಿರುವುದಿಲ್ಲ. ಆದರೆ ಯಾವ ಕೆಲಸಕ್ಕೂ ಒಮ್ಮೆಲೇ ಹಾರುತ್ತಾರೆ. ತಿಳಿವಳಿಕೆಯೇ ಇರದ ಕಾರಣ ಇವರು ಮಾಡುವ ಕೆಲಸಗಳೆಲ್ಲವೂ ವ್ಯರ್ಥವೇ ಆಗುವುದು ಸಹಜ. ಇಂಥವರನ್ನು ಸುಭಾಷಿತ ಕುರುಡನಿಗೆ ಹೋಲಿಸುತ್ತಿದೆ. ಕುರುಡನಿಗೆ ಕಣ್ಣು ಇಲ್ಲ; ಆದರೆ ಅವನು ಓಡುತ್ತಿದ್ದಾನೆ. ಆಗ ಅವನಿಗೆ ಅಪಾಯ ಎದುರಾಗುವುದು ಸಹಜ. ಕಣ್ಣನ್ನು ಇಲ್ಲಿ ತಿಳಿವಳಿಕೆಗೆ ಸಂಕೇತವಾಗಿ ಸೂಚಿಸಿದೆ. ಓಡುವುದು ಅವನ ಉತ್ಸಾಹವನ್ನೂ ಕ್ರಿಯಾಶೀಲತೆಯನ್ನೂ ಸೂಚಿಸುತ್ತದೆ.</p>.<p>ಇಲ್ಲಿ ಸುಭಾಷಿತ ಕುರುಡನನ್ನೂ ಕುಂಟನನ್ನೂ ಬಳಸಿಕೊಂಡಿರುವುದು ವ್ಯಕ್ತಿಗಳ ಗುಣ–ಸ್ವಭಾವಗಳ ಫಲವನ್ನು ನಿರೂಪಿಸುವ ಸಂಕೇತಗಳನ್ನಾಗಿ ಮಾತ್ರ; ಯಾರನ್ನೂ ಹಂಗಿಸುವುದು ಅದರ ಉದ್ದೇಶ ಅಲ್ಲ ಎಂಬುದನ್ನು ಗಮನಿಸಬೇಕು.</p>.<p>ಅರಿವು ಮತ್ತು ಕ್ರಿಯಾಶೀಲತೆ – ಎರಡನ್ನೂ ದಕ್ಕಿಸಿಕೊಂಡಾಗ ಮಾತ್ರವೇ ವ್ಯಕ್ತಿತ್ವದ ಪರಿಪೂರ್ಣತೆ; ಯಾವುದೋ ಒಂದು ಮಾತ್ರವೇ ಇದ್ದರೆ ಪ್ರಯೋಜವಿಲ್ಲ. ಕಾಲುಗಳಷ್ಟೆ ಇದ್ದರೂ ಪ್ರಯೋಜನವಿಲ್ಲ; ಕಣ್ಣಗಳಷ್ಟೆ ಇದ್ದರೂ ಪ್ರಯೋಜವಿಲ್ಲ. ನಮಗೆ ಕಣ್ಣುಗಳೂ ಬೇಕು; ಕಾಲುಗಳೂ ಬೇಕು. ಆಗಷ್ಟೆ ನಮ್ಮ ಬಾಳಿನ ಪ್ರಯಾಣ ಸುಗಮವಾಗಿ ನಡೆಯುತ್ತದೆ. ಕಣ್ಣು–ಕಾಲುಗಳ ಜೊತೆಗೆ ಹೃದಯವೂ ಬೇಕೆನ್ನಿ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="color:#B22222;"><em><strong>ಹತಂ ಜ್ಞಾನಂ ಕ್ರಿಯಾಶೂನ್ಯಂ ಹತಾ ಚಾಜ್ಞಾನಿನಃ ಕ್ರಿಯಾ।</strong></em></span><br /><span style="color:#B22222;"><em><strong>ಧಾವನ್ನಪ್ಯಂಧಕೋ ನಷ್ಟಃ ಪಶ್ಯನ್ನಪಿ ಚ ಪಂಗುಕಃ।।</strong></em></span></p>.<p><strong>ಇದರ ತಾತ್ಪರ್ಯ ಹೀಗೆ:</strong>‘ಕ್ರಿಯೆಯಿಲ್ಲದ ತಿಳಿವು ನಷ್ಟವಾದಂತೆ ವ್ಯರ್ಥ. ತಿಳಿವಿಲ್ಲದವರ ಕ್ರಿಯೆಯೂ ವ್ಯರ್ಥವೇ ಹೌದು. ಕುರುಡನು ಓಡಿದರೂ ನಷ್ಟನಾಗುತ್ತಾನೆ; ಕುಂಟನು ನೋಡುತ್ತಿದ್ದರೂ ಫಲವಿಲ್ಲದೆ ನಷ್ಟನಾಗುತ್ತಾನೆ.‘</p>.<p>ಯಾವುದಾದರೂ ಕೆಲಸವೊಂದು ಯಶಸ್ಸನ್ನು ಪಡೆಯಬೇಕಾದರೆ ಕ್ರಿಯೆ ಮತ್ತು ಜ್ಞಾನ – ಎರಡೂ ಬೇಕು. ಇದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು.</p>.<p>ನಮ್ಮಲ್ಲಿ ಕೆಲವರು ಇರುತ್ತಾರೆ; ಅವರಿಗೆ ವಿಷಯಜ್ಞಾನ ಚೆನ್ನಾಗಿರುತ್ತದೆ. ಹತ್ತಾರು ದಿಕ್ಕುಗಳಿಂದ ವಿಷಯವನ್ನು ಅರ್ಥಮಾಡಿಕೊಳ್ಳಬಲ್ಲವರಾಗಿರುತ್ತಾರೆ. ಆದರೆ ನಿಷ್ಕ್ರಿಯರಾಗಿರುತ್ತಾರೆ; ಅವರು ಕಾರ್ಯಕ್ಕೆ ಕೈ ಹಾಕುವುದೇ ಇಲ್ಲ. ಹೀಗಾಗಿ ಅವರಿಗೆ ಎಷ್ಟೆಲ್ಲ ತಿಳಿವಳಿಕೆ ಇದ್ದರೂ ಅದು ಪ್ರಯೋಜನಕ್ಕೆ ಬರದೆ ವ್ಯರ್ಥವಾಗುತ್ತಿರುತ್ತದೆ. ಸುಭಾಷಿತ ಇಂಥವರನ್ನು ಕುಂಟನಿಗೆ ಹೋಲಿಸಿದೆ. ಕುಂಟನಿಗೆ ಕಣ್ಣು ಇದೆ; ಆದರೆ ಅವನು ಓಡಲಾರ. ಕಣ್ಣು ಎಂದರೆ ತಿಳಿವಳಿಕೆ; ಕಾಲಿಲ್ಲದಿರುವುದು ಜಡತೆಗೆ ಸಂಕೇತ.</p>.<p>ಇನ್ನು ಕೆಲವರು ಇರುತ್ತಾರೆ; ಅವರಿಗೆ ವಿಷಯದ ತಲೆಬುಡವೇ ಗೊತ್ತಿರುವುದಿಲ್ಲ. ಆದರೆ ಯಾವ ಕೆಲಸಕ್ಕೂ ಒಮ್ಮೆಲೇ ಹಾರುತ್ತಾರೆ. ತಿಳಿವಳಿಕೆಯೇ ಇರದ ಕಾರಣ ಇವರು ಮಾಡುವ ಕೆಲಸಗಳೆಲ್ಲವೂ ವ್ಯರ್ಥವೇ ಆಗುವುದು ಸಹಜ. ಇಂಥವರನ್ನು ಸುಭಾಷಿತ ಕುರುಡನಿಗೆ ಹೋಲಿಸುತ್ತಿದೆ. ಕುರುಡನಿಗೆ ಕಣ್ಣು ಇಲ್ಲ; ಆದರೆ ಅವನು ಓಡುತ್ತಿದ್ದಾನೆ. ಆಗ ಅವನಿಗೆ ಅಪಾಯ ಎದುರಾಗುವುದು ಸಹಜ. ಕಣ್ಣನ್ನು ಇಲ್ಲಿ ತಿಳಿವಳಿಕೆಗೆ ಸಂಕೇತವಾಗಿ ಸೂಚಿಸಿದೆ. ಓಡುವುದು ಅವನ ಉತ್ಸಾಹವನ್ನೂ ಕ್ರಿಯಾಶೀಲತೆಯನ್ನೂ ಸೂಚಿಸುತ್ತದೆ.</p>.<p>ಇಲ್ಲಿ ಸುಭಾಷಿತ ಕುರುಡನನ್ನೂ ಕುಂಟನನ್ನೂ ಬಳಸಿಕೊಂಡಿರುವುದು ವ್ಯಕ್ತಿಗಳ ಗುಣ–ಸ್ವಭಾವಗಳ ಫಲವನ್ನು ನಿರೂಪಿಸುವ ಸಂಕೇತಗಳನ್ನಾಗಿ ಮಾತ್ರ; ಯಾರನ್ನೂ ಹಂಗಿಸುವುದು ಅದರ ಉದ್ದೇಶ ಅಲ್ಲ ಎಂಬುದನ್ನು ಗಮನಿಸಬೇಕು.</p>.<p>ಅರಿವು ಮತ್ತು ಕ್ರಿಯಾಶೀಲತೆ – ಎರಡನ್ನೂ ದಕ್ಕಿಸಿಕೊಂಡಾಗ ಮಾತ್ರವೇ ವ್ಯಕ್ತಿತ್ವದ ಪರಿಪೂರ್ಣತೆ; ಯಾವುದೋ ಒಂದು ಮಾತ್ರವೇ ಇದ್ದರೆ ಪ್ರಯೋಜವಿಲ್ಲ. ಕಾಲುಗಳಷ್ಟೆ ಇದ್ದರೂ ಪ್ರಯೋಜನವಿಲ್ಲ; ಕಣ್ಣಗಳಷ್ಟೆ ಇದ್ದರೂ ಪ್ರಯೋಜವಿಲ್ಲ. ನಮಗೆ ಕಣ್ಣುಗಳೂ ಬೇಕು; ಕಾಲುಗಳೂ ಬೇಕು. ಆಗಷ್ಟೆ ನಮ್ಮ ಬಾಳಿನ ಪ್ರಯಾಣ ಸುಗಮವಾಗಿ ನಡೆಯುತ್ತದೆ. ಕಣ್ಣು–ಕಾಲುಗಳ ಜೊತೆಗೆ ಹೃದಯವೂ ಬೇಕೆನ್ನಿ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>