<p>ಪ್ರಾರಬ್ಧವ್ಯೇ ನಿರುದ್ಯೋಗೋ ಜಾಗರ್ತವ್ಯೇ ಪ್ರಸುಪ್ತಕಃ ।</p>.<p>ವಿಶ್ವಸ್ತವ್ಯೇ ಭಯಸ್ಥಾನೇ ಹಾ! ನರಃ ಕೋ ನ ಹನ್ಯತೇ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಯಾವಾಗ ಒಂದು ಕಾರ್ಯವನ್ನು ಆರಂಭಿಸಬೇಕೋ ಆಗ ಸುಮ್ಮನಿರುತ್ತಾನೆ; ಎಚ್ಚರವಾಗಿರಬೇಕಾದಾಗ ಕಣ್ಣುಮುಚ್ಚಿ ಮಲಗಿರುತ್ತಾನೆ; ಮತ್ತು ಭಯಪಡಬೇಕಾದ ವಸ್ತುವನ್ನು ವಿಶ್ವಾಸಯೋಗ್ಯ ಎಂದು ತಿಳಿದುಕೊಳ್ಳುತ್ತಾನೆ. ಅಯ್ಯೋ! ಅಂಥ ಮನುಷ್ಯನು ಹಾಳಾಗದೆ ಹೇಗೆ ತಾನೆ ಉಳಿದಾನು?’</p>.<p>ಪ್ರತಿ ಕೆಲಸದ ಯಶಸ್ಸಿನ ಹಿಂದೆ ಹಲವಾರು ಕಾರಣಗಳು ಇರುತ್ತವೆ. ಅವುಗಳಲ್ಲಿ ಒಂದು ಆ ಕೆಲಸದ ಆವಶ್ಯಕತೆಗಳಿಗೆ ತಕ್ಕಂತೆ ಅದರಲ್ಲಿ ತೊಡಗುವುದು. ಇದನ್ನೇ ಸುಭಾಷಿತ ಹೇಳುತ್ತಿರುವುದು.</p>.<p>ಪ್ರಸ್ತುತ ಸಂದರ್ಭಕ್ಕೆ ಅನ್ವಯಿಸಿ ಈ ಶ್ಲೋಕವನ್ನು ಅರ್ಥೈಸಬಹುದಾದರೆ ಅದನ್ನು ಹೀಗೆ ಹೇಳಬಹುದು: ಯಾವಾಗ ಮಾಸ್ಕನ್ನು ಹಾಕಿಕೊಳ್ಳಬೇಕೊ ಆಗ ಹಾಕಿಕೊಳ್ಳದೆ, ಯಾವಾಗ ಬೇಡವೋ ಆಗ ಧರಿಸಿದವರು ಕೊವಿಡ್ ಬಾಧೆಗೆ ತುತ್ತಾಗುವ ಸಾಧ್ಯತೆ ಹೆಚ್ಚು!</p>.<p>ಸುಭಾಷಿತವೇ ಅಂಥ ಕೆಲವು ಸಂದರ್ಭಗಳನ್ನು ಕಾಣಿಸಿದೆ.</p>.<p>ಕೆಲಸವನ್ನು ಯಾವಾಗ ಆರಂಭಿಸಬೇಕೋ ಆಗ ನಾವು ಅದನ್ನು ಆರಂಭಿಸದಿದ್ದರೆ ಏನಾಗುತ್ತದೆ? ರೈತನೊಬ್ಬ ಯಾವಾಗ ಹೊಲವನ್ನು ಬಿತ್ತನೆಗೆ ಸಿದ್ಧಮಾಡಿಟ್ಟುಕೊಳ್ಳಬೇಕೋ ಆಗಲೇ ಅದನ್ನು ಸಿದ್ಧಮಾಡಿಟ್ಟುಕೊಳ್ಳಬೇಕು. ವಿದ್ಯಾರ್ಥಿಯೊಬ್ಬ ಯಾವಾಗ ಪರೀಕ್ಷೆಗೆ ಸಿದ್ಧವಾಗಬೇಕೋ ಆಗಲೇ ಸಿದ್ಧವಾಗಬೇಕು. ಹೀಗೆ ಪ್ರತಿಯೊಂದು ಕೆಲಸವನ್ನು ಆರಂಭಿಸಲೂ ಯುಕ್ತಕಾಲ ಎಂಬುದು ಇರುತ್ತದೆ. ಆ ಸಮಯದಲ್ಲಿಯೇ ನಾವು ಅದನ್ನು ಮಾಡಬೇಕು. ಹೀಗಲ್ಲದೆ ಆ ಸಮಯದಲ್ಲಿ ನಾವು ನಿಷ್ಕ್ರಿಯರಾಗಿದ್ದರೆ ಕೆಲಸದಲ್ಲಿ ಯಶಸ್ಸು ಸಿಗದು.</p>.<p>ಇದೇ ರೀತಿಯಲ್ಲಿ ಯಾವಾಗ ಎಚ್ಚರವಾಗಿರಬೇಕೋ ಆಗ ಎಚ್ಚರವಾಗಿರದಿದ್ದರೆ ಏನಾಗುತ್ತದೆ? ಕೆಲಸ ಕೆಡುತ್ತದೆಯಷ್ಟೆ! ಪರೀಕ್ಷೆಯ ಹಾಲ್ನಲ್ಲಿ ನಾವು ನಿದ್ರೆಮಾಡಲು ತೊಡಗಿದರೆ ನಮ್ಮ ಫಲಿತಾಂಶ ಏನಾದೀತು? ವಾಹನವನ್ನು ನಡೆಸುತ್ತಿರುವಾಗ ಮೈ ಎಲ್ಲ ಕಣ್ಣಾಗಿ ಎಚ್ಚರವಾಗಿರಬೇಕಾಗುತ್ತದೆ. ಆಗ ನಿದ್ರೆಗೆ ಜಾರಿದರೆ!?</p>.<p>ಕೆಲವೊಂದು ವಿಷಯಗಳ ಬಗ್ಗೆ ಭಯವನ್ನು ಪಡಬೇಕು, ಕೆಲವೊಂದು ಸಂಗತಿಗಳ ಬಗ್ಗೆ ಭಯವನ್ನು ಬಿಡಬೇಕು. ಈ ಎರಡೂ ಅದಲು ಬದಲಾದರೆ ನಮಗೆ ತೊಂದರೆ ತಪ್ಪದು. ತರಕಾರಿಯನ್ನು ಕತ್ತರಿಸಲು ಚಾಕು ಬೇಕು. ಆದರೆ ಅದನ್ನು ಬಳಸುವಾಗ ಎಚ್ಚರಿಕೆಯೂ ಬೇಕು. ತರಕಾರಿಯನ್ನು ಕತ್ತರಿಸುವಾಗ ಕೈ ಕೂಡ ಕತ್ತರಿಸಲ್ಪಟರೆ ಹೇಗೆ – ಎಂದು ಭಯಪಟ್ಟರೆ ಪ್ರಯೋಜನ ಸಿಗದು; ಏನಾಗುತ್ತದೆ ಬಿಡು – ಎಂದು ಉಡಾಫೆ ಮಾಡಿದರೆ ತೊಂದರೆ ತಪ್ಪದು. ನಾವು ಹರಿತವಾದುದರಿಂದಲೇ ನಮ್ಮ ಕೆಲಸವನ್ನು ಸಾಧಿಸಕೊಳ್ಳಬೇಕು. ಹೀಗಾಗಿ ಅದಕ್ಕೆ ಬೇಕಾದ ಎಚ್ಚರಿಕೆಗಳನ್ನು ಪಾಲಿಸಬೇಕು. ಆಗಷ್ಟೆ ತೊಂದರೆ ಇರದ ಪ್ರಯೋಜನ ನಮ್ಮ ಪಾಲಿಗೆ ಒದಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಾರಬ್ಧವ್ಯೇ ನಿರುದ್ಯೋಗೋ ಜಾಗರ್ತವ್ಯೇ ಪ್ರಸುಪ್ತಕಃ ।</p>.<p>ವಿಶ್ವಸ್ತವ್ಯೇ ಭಯಸ್ಥಾನೇ ಹಾ! ನರಃ ಕೋ ನ ಹನ್ಯತೇ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಯಾವಾಗ ಒಂದು ಕಾರ್ಯವನ್ನು ಆರಂಭಿಸಬೇಕೋ ಆಗ ಸುಮ್ಮನಿರುತ್ತಾನೆ; ಎಚ್ಚರವಾಗಿರಬೇಕಾದಾಗ ಕಣ್ಣುಮುಚ್ಚಿ ಮಲಗಿರುತ್ತಾನೆ; ಮತ್ತು ಭಯಪಡಬೇಕಾದ ವಸ್ತುವನ್ನು ವಿಶ್ವಾಸಯೋಗ್ಯ ಎಂದು ತಿಳಿದುಕೊಳ್ಳುತ್ತಾನೆ. ಅಯ್ಯೋ! ಅಂಥ ಮನುಷ್ಯನು ಹಾಳಾಗದೆ ಹೇಗೆ ತಾನೆ ಉಳಿದಾನು?’</p>.<p>ಪ್ರತಿ ಕೆಲಸದ ಯಶಸ್ಸಿನ ಹಿಂದೆ ಹಲವಾರು ಕಾರಣಗಳು ಇರುತ್ತವೆ. ಅವುಗಳಲ್ಲಿ ಒಂದು ಆ ಕೆಲಸದ ಆವಶ್ಯಕತೆಗಳಿಗೆ ತಕ್ಕಂತೆ ಅದರಲ್ಲಿ ತೊಡಗುವುದು. ಇದನ್ನೇ ಸುಭಾಷಿತ ಹೇಳುತ್ತಿರುವುದು.</p>.<p>ಪ್ರಸ್ತುತ ಸಂದರ್ಭಕ್ಕೆ ಅನ್ವಯಿಸಿ ಈ ಶ್ಲೋಕವನ್ನು ಅರ್ಥೈಸಬಹುದಾದರೆ ಅದನ್ನು ಹೀಗೆ ಹೇಳಬಹುದು: ಯಾವಾಗ ಮಾಸ್ಕನ್ನು ಹಾಕಿಕೊಳ್ಳಬೇಕೊ ಆಗ ಹಾಕಿಕೊಳ್ಳದೆ, ಯಾವಾಗ ಬೇಡವೋ ಆಗ ಧರಿಸಿದವರು ಕೊವಿಡ್ ಬಾಧೆಗೆ ತುತ್ತಾಗುವ ಸಾಧ್ಯತೆ ಹೆಚ್ಚು!</p>.<p>ಸುಭಾಷಿತವೇ ಅಂಥ ಕೆಲವು ಸಂದರ್ಭಗಳನ್ನು ಕಾಣಿಸಿದೆ.</p>.<p>ಕೆಲಸವನ್ನು ಯಾವಾಗ ಆರಂಭಿಸಬೇಕೋ ಆಗ ನಾವು ಅದನ್ನು ಆರಂಭಿಸದಿದ್ದರೆ ಏನಾಗುತ್ತದೆ? ರೈತನೊಬ್ಬ ಯಾವಾಗ ಹೊಲವನ್ನು ಬಿತ್ತನೆಗೆ ಸಿದ್ಧಮಾಡಿಟ್ಟುಕೊಳ್ಳಬೇಕೋ ಆಗಲೇ ಅದನ್ನು ಸಿದ್ಧಮಾಡಿಟ್ಟುಕೊಳ್ಳಬೇಕು. ವಿದ್ಯಾರ್ಥಿಯೊಬ್ಬ ಯಾವಾಗ ಪರೀಕ್ಷೆಗೆ ಸಿದ್ಧವಾಗಬೇಕೋ ಆಗಲೇ ಸಿದ್ಧವಾಗಬೇಕು. ಹೀಗೆ ಪ್ರತಿಯೊಂದು ಕೆಲಸವನ್ನು ಆರಂಭಿಸಲೂ ಯುಕ್ತಕಾಲ ಎಂಬುದು ಇರುತ್ತದೆ. ಆ ಸಮಯದಲ್ಲಿಯೇ ನಾವು ಅದನ್ನು ಮಾಡಬೇಕು. ಹೀಗಲ್ಲದೆ ಆ ಸಮಯದಲ್ಲಿ ನಾವು ನಿಷ್ಕ್ರಿಯರಾಗಿದ್ದರೆ ಕೆಲಸದಲ್ಲಿ ಯಶಸ್ಸು ಸಿಗದು.</p>.<p>ಇದೇ ರೀತಿಯಲ್ಲಿ ಯಾವಾಗ ಎಚ್ಚರವಾಗಿರಬೇಕೋ ಆಗ ಎಚ್ಚರವಾಗಿರದಿದ್ದರೆ ಏನಾಗುತ್ತದೆ? ಕೆಲಸ ಕೆಡುತ್ತದೆಯಷ್ಟೆ! ಪರೀಕ್ಷೆಯ ಹಾಲ್ನಲ್ಲಿ ನಾವು ನಿದ್ರೆಮಾಡಲು ತೊಡಗಿದರೆ ನಮ್ಮ ಫಲಿತಾಂಶ ಏನಾದೀತು? ವಾಹನವನ್ನು ನಡೆಸುತ್ತಿರುವಾಗ ಮೈ ಎಲ್ಲ ಕಣ್ಣಾಗಿ ಎಚ್ಚರವಾಗಿರಬೇಕಾಗುತ್ತದೆ. ಆಗ ನಿದ್ರೆಗೆ ಜಾರಿದರೆ!?</p>.<p>ಕೆಲವೊಂದು ವಿಷಯಗಳ ಬಗ್ಗೆ ಭಯವನ್ನು ಪಡಬೇಕು, ಕೆಲವೊಂದು ಸಂಗತಿಗಳ ಬಗ್ಗೆ ಭಯವನ್ನು ಬಿಡಬೇಕು. ಈ ಎರಡೂ ಅದಲು ಬದಲಾದರೆ ನಮಗೆ ತೊಂದರೆ ತಪ್ಪದು. ತರಕಾರಿಯನ್ನು ಕತ್ತರಿಸಲು ಚಾಕು ಬೇಕು. ಆದರೆ ಅದನ್ನು ಬಳಸುವಾಗ ಎಚ್ಚರಿಕೆಯೂ ಬೇಕು. ತರಕಾರಿಯನ್ನು ಕತ್ತರಿಸುವಾಗ ಕೈ ಕೂಡ ಕತ್ತರಿಸಲ್ಪಟರೆ ಹೇಗೆ – ಎಂದು ಭಯಪಟ್ಟರೆ ಪ್ರಯೋಜನ ಸಿಗದು; ಏನಾಗುತ್ತದೆ ಬಿಡು – ಎಂದು ಉಡಾಫೆ ಮಾಡಿದರೆ ತೊಂದರೆ ತಪ್ಪದು. ನಾವು ಹರಿತವಾದುದರಿಂದಲೇ ನಮ್ಮ ಕೆಲಸವನ್ನು ಸಾಧಿಸಕೊಳ್ಳಬೇಕು. ಹೀಗಾಗಿ ಅದಕ್ಕೆ ಬೇಕಾದ ಎಚ್ಚರಿಕೆಗಳನ್ನು ಪಾಲಿಸಬೇಕು. ಆಗಷ್ಟೆ ತೊಂದರೆ ಇರದ ಪ್ರಯೋಜನ ನಮ್ಮ ಪಾಲಿಗೆ ಒದಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>