ನಾವು ಏನೇನೋ ಶಾಸ್ತ್ರಗಳನ್ನು ಕಲಿಯುತ್ತೇವೆ. ಕೆಲವನ್ನು ಅನ್ನದ ಸಂಪಾದನೆಗೆ, ಮತ್ತೆ ಕೆಲವನ್ನು ತಿಳಿವಳಿಕೆಯ ಸಂಪಾದನೆಗೆ, ಇನ್ನು ಕೆಲವನ್ನು ಕೀರ್ತಿಯ ಸಂಪಾದನೆಗಾಗಿ, ಕೆಲವನ್ನು ಸಂತೋಷದ ಸಂಪಾದನೆಗಾಗಿ. ಸುಭಾಷಿತ ಹೇಳುತ್ತಿದೆ, ಈ ಎಲ್ಲ ಶಾಸ್ತ್ರಗಳೂ ವ್ಯರ್ಥ; ಕೇವಲ ಶಿವಭಕ್ತಿಯೊಂದೇ ನಿಜವಾದ ಶಾಸ್ತ್ರ, ಕಾವ್ಯ ಎಂದು. ನಮ್ಮನ್ನು ಎಂಥ ಕಷ್ಟದ ಸಂದರ್ಭದಲ್ಲೂ ಕಾಪಾಡಬಲ್ಲಂಥದ್ದೂ ಎಂಥ ಸಮಯದಲ್ಲೂ ಸಂತೋಷವನ್ನು ನೀಡುವಂಥದ್ದೂ ಶಿವಭಕ್ತಿಯೊಂದೇ ಎಂದು ಘೋಷಿಸುತ್ತಿದೆ.