<p><strong>ಕಪಾಲಸ್ಥಂ ಯಥಾ ತೋಯಂ ಶ್ವದೃತೌ ಚ ಯಥಾ ಪಯಃ ।</strong></p>.<p><strong>ಹೇಯಂ ದುಃಸ್ಥಾನದೋಷೇಣ ವೃತ್ತಹೀನಂ ತಥಾ ಶ್ರುತಮ್ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ತಲೆಬುರುಡೆಯಲ್ಲಿರುವ ನೀರು, ನಾಯಿಯ ಚರ್ಮದಲ್ಲಿ ತಂದಿರುವ ಹಾಲು ಹೇಗೆ ಸ್ಥಾನದೋಷದಿಂದ ಅಸಹ್ಯವೋ ಅಥವಾ ತ್ಯಾಜ್ಯಾವೋ ಆಗುತ್ತದೆಯೊ ಹಾಗೆಯೇ ನಡತೆಯಿಲ್ಲದವನ ವಿದ್ಯೆಯೂ ಅಸಹ್ಯವೂ ತ್ಯಾಜ್ಯವೂ ಆಗುತ್ತದೆ.’</p>.<p>ನಮಗೆ ತುಂಬ ಹಸಿವು. ಏನು ಸಿಕ್ಕರೂ ಕೂಡಲೇ ತಿನ್ನುವಷ್ಟು ಹಸಿವು. ಆ ಸಂದರ್ಭದಲ್ಲಿ ಯಾರಾದರೂ ಅನ್ನವನ್ನು ನೆಲದ ಮೇಲೆ ಬಡಿಸಿದರೆ ನಾವು ಅದನ್ನು ತಿನ್ನುತ್ತೇವೆಯೆ?</p>.<p>ಏನನ್ನು ತಿನ್ನುತ್ತೇವೆ ಎಂಬುದಷ್ಟೆ ಮುಖ್ಯವಲ್ಲ; ಹೇಗೆ ತಿನ್ನುತ್ತೇವೆ ಎಂಬುದೂ ಇಲ್ಲಿ ಮುಖ್ಯವಾಗುತ್ತದೆ ಅಲ್ಲವೆ?</p>.<p>ಸುಭಾಷಿತ ಇಂಥ ಸಂಗತಿಯನ್ನೇ ಹೇಳುತ್ತಿರುವುದು.</p>.<p>ವಿದ್ಯೆ ಎಂಬುದು ತುಂಬ ದೊಡ್ಡದು; ಪವಿತ್ರವಾದುದುದು; ನಿಜ. ವಿದ್ಯೆಯನ್ನು ಸಂಪಾದಿಸುವುದೂ ಸುಲಭವಲ್ಲ; ಅದನ್ನು ಮಹಾಸಾಧನೆಯಿಂದಲೇ ಪಡೆದುಕೊಳ್ಳಬೇಕಾಗುತ್ತದೆ. ಹೀಗೆಂದು ವಿದ್ಯೆಯನ್ನು ಪಡೆದಿರುವ ವಿದ್ಯಾವಂತನೊಬ್ಬ ಹೇಗೆ ಬೇಕಾದರೂ ನಡೆದುಕೊಳ್ಳಬಹುದೆ? ಅವನಿಗೆ ಯಾವುದೇ ನಿರ್ಬಂಧಗಳು ಅನ್ವಯವಾಗುವುದಿಲ್ಲವೆ? ಸುಭಾಷಿತ ಹೇಳುತ್ತಿದೆ: ನಡತೆಯಿಲ್ಲದವನ ವಿದ್ಯೆ ಅದು ಅಸಹ್ಯವೂ ಹೌದು, ತ್ಯಾಜ್ಯವೂ ಹೌದು.</p>.<p>ಇಂದು ನಾವು ಸ್ವಘೋಷಿತ ವಿದ್ಯಾವಂತರಿಂದ ನೋಡುತ್ತಿರುವುದು ಬಹುಪಾಲು ಇಂಥ ಅಸಹ್ಯಕರ ನಡೆವಳಿಕೆಯನ್ನೇ ಹೌದು. ಮಾತಿನಲ್ಲಿ ಸಂಯಮ ಇಲ್ಲ, ಹೊಣೆಗಾರಿಕೆ ಇಲ್ಲ; ಆ ಕ್ಷಣ ಏನು ತೋಚುತ್ತದೆಯೋ ಅದನ್ನು ಒರಟಾಗಿ ಹೇಳುವಂಥ ಧೋರಣೆ ಇಂದು ಎಲ್ಲೆಲ್ಲೂ ಹೆಚ್ಚುತ್ತಿದೆ; ಸಾಮಾಜಿಕ ಜಾಲತಾಣಗಳನ್ನು ನೋಡಿದರೆ ಈ ಮಾತಿಗೆ ಸ್ಪಷ್ಟ ಸಾಕ್ಷ್ಯ ಸಿಗುತ್ತದೆ.</p>.<p>ವಿದ್ಯಾವಂತನಿಗೆ ಹೊಣೆಗಾರಿಕೆ ಹೆಚ್ಚು. ಯೋಚಿಸುವ ಶಕ್ತಿಯನ್ನು ಅವನಿಗೆ ವಿದ್ಯೆ ಕೊಟ್ಟಿರುತ್ತದೆ. ಅದನ್ನು ಅವನು ಬಳಸಿಕೊಂಡು ತನ್ನ ನಡೆವಳಿಕೆಯನ್ನು ರೂಢಿಸಿಕೊಳ್ಳಬೇಕು; ಸುಂದರವಾಗಿಸಿಕೊಳ್ಳಬೇಕು; ಸಂಸ್ಕಾರಯುತವನ್ನಾಗಿಸಿಕೊಳ್ಳಬೇಕು. ಆದರೆ ಹಲವರು ಈ ನಿಲುವಿಗೆ ವಿರುದ್ಧವಾಗಿದ್ದಾರೆ ಎಂಬುದೇ ಇಂದಿನ ಆತಂಕ. ಸುಭಾಷಿತ ಅದನ್ನೇ ಇಲ್ಲಿ ಹೇಳುತ್ತಿರುವುದು: ನಡತೆಯಿಲ್ಲದವನ ವಿದ್ಯೆ ಅಸಹ್ಯವೂ ಹೌದು, ತ್ಯಾಜ್ಯವೂ ಹೌದು. ನಡತೆ ಎಂಬುದು ತುಂಬ ವಿಶಾಲವಾದ ವಿವರ. ನಾವು ಮನೆಯಲ್ಲಿ ಹೇಗಿರಬೇಕು ಎಂಬುದನ್ನೂ ಅದು ಸೂಚಿಸುತ್ತದೆ, ಸಮಾಜದಲ್ಲಿ ಹೇಗಿರಬೇಕೆಂದೂ ಸೂಚಿಸುತ್ತದೆ.</p>.<p>ನೀರು ನಮಗೆ ಅತ್ಯಂತ ಆವಶ್ಯಕ. ಹೀಗೆಂದು ನಾವು ತಲೆಬುರುಡೆಯಲ್ಲಿರುವ ನೀರನ್ನು ಕುಡಿಯುವುದಿಲ್ಲವಷ್ಟೆ! ಹಾಲು ಕೂಡ ನಮಗೆ ತುಂಬ ಮುಖ್ಯವಾದ ಆಹಾರ. ಆದರೆ ನಾಯಿಯ ಚರ್ಮದಲ್ಲಿ ಯಾರಾದರೂ ಹಾಲನ್ನು ತಂದುಕೊಟ್ಟರೆ ನಾವು ಕುಡಿಯುತ್ತೇವೆಯೆ?</p>.<p>ಹೀಗೆಯೇ ಒಬ್ಬ ವ್ಯಕ್ತಿ ವಿದ್ಯಾವಂತನೇ ಆಗಿರಬಹುದು; ಅವನಲ್ಲಿ ನಾಲ್ಕಾರು ಪದವಿಪತ್ರಗಳೂ ಇರಬಹುದು. ಆದರೆ ಅವನು ಅಯೋಗ್ಯನಾಗಿದ್ದರೆ, ನೀಚನಾಗಿದ್ದರೆ, ದುಷ್ಟನಾಗಿದ್ದರೆ – ಅವನು ನಮ್ಮ ಪಾಲಿಗೆ ಅಸಹ್ಯವೂ ಹೌದು, ತ್ಯಾಜ್ಯವೂ ಹೌದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಪಾಲಸ್ಥಂ ಯಥಾ ತೋಯಂ ಶ್ವದೃತೌ ಚ ಯಥಾ ಪಯಃ ।</strong></p>.<p><strong>ಹೇಯಂ ದುಃಸ್ಥಾನದೋಷೇಣ ವೃತ್ತಹೀನಂ ತಥಾ ಶ್ರುತಮ್ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ತಲೆಬುರುಡೆಯಲ್ಲಿರುವ ನೀರು, ನಾಯಿಯ ಚರ್ಮದಲ್ಲಿ ತಂದಿರುವ ಹಾಲು ಹೇಗೆ ಸ್ಥಾನದೋಷದಿಂದ ಅಸಹ್ಯವೋ ಅಥವಾ ತ್ಯಾಜ್ಯಾವೋ ಆಗುತ್ತದೆಯೊ ಹಾಗೆಯೇ ನಡತೆಯಿಲ್ಲದವನ ವಿದ್ಯೆಯೂ ಅಸಹ್ಯವೂ ತ್ಯಾಜ್ಯವೂ ಆಗುತ್ತದೆ.’</p>.<p>ನಮಗೆ ತುಂಬ ಹಸಿವು. ಏನು ಸಿಕ್ಕರೂ ಕೂಡಲೇ ತಿನ್ನುವಷ್ಟು ಹಸಿವು. ಆ ಸಂದರ್ಭದಲ್ಲಿ ಯಾರಾದರೂ ಅನ್ನವನ್ನು ನೆಲದ ಮೇಲೆ ಬಡಿಸಿದರೆ ನಾವು ಅದನ್ನು ತಿನ್ನುತ್ತೇವೆಯೆ?</p>.<p>ಏನನ್ನು ತಿನ್ನುತ್ತೇವೆ ಎಂಬುದಷ್ಟೆ ಮುಖ್ಯವಲ್ಲ; ಹೇಗೆ ತಿನ್ನುತ್ತೇವೆ ಎಂಬುದೂ ಇಲ್ಲಿ ಮುಖ್ಯವಾಗುತ್ತದೆ ಅಲ್ಲವೆ?</p>.<p>ಸುಭಾಷಿತ ಇಂಥ ಸಂಗತಿಯನ್ನೇ ಹೇಳುತ್ತಿರುವುದು.</p>.<p>ವಿದ್ಯೆ ಎಂಬುದು ತುಂಬ ದೊಡ್ಡದು; ಪವಿತ್ರವಾದುದುದು; ನಿಜ. ವಿದ್ಯೆಯನ್ನು ಸಂಪಾದಿಸುವುದೂ ಸುಲಭವಲ್ಲ; ಅದನ್ನು ಮಹಾಸಾಧನೆಯಿಂದಲೇ ಪಡೆದುಕೊಳ್ಳಬೇಕಾಗುತ್ತದೆ. ಹೀಗೆಂದು ವಿದ್ಯೆಯನ್ನು ಪಡೆದಿರುವ ವಿದ್ಯಾವಂತನೊಬ್ಬ ಹೇಗೆ ಬೇಕಾದರೂ ನಡೆದುಕೊಳ್ಳಬಹುದೆ? ಅವನಿಗೆ ಯಾವುದೇ ನಿರ್ಬಂಧಗಳು ಅನ್ವಯವಾಗುವುದಿಲ್ಲವೆ? ಸುಭಾಷಿತ ಹೇಳುತ್ತಿದೆ: ನಡತೆಯಿಲ್ಲದವನ ವಿದ್ಯೆ ಅದು ಅಸಹ್ಯವೂ ಹೌದು, ತ್ಯಾಜ್ಯವೂ ಹೌದು.</p>.<p>ಇಂದು ನಾವು ಸ್ವಘೋಷಿತ ವಿದ್ಯಾವಂತರಿಂದ ನೋಡುತ್ತಿರುವುದು ಬಹುಪಾಲು ಇಂಥ ಅಸಹ್ಯಕರ ನಡೆವಳಿಕೆಯನ್ನೇ ಹೌದು. ಮಾತಿನಲ್ಲಿ ಸಂಯಮ ಇಲ್ಲ, ಹೊಣೆಗಾರಿಕೆ ಇಲ್ಲ; ಆ ಕ್ಷಣ ಏನು ತೋಚುತ್ತದೆಯೋ ಅದನ್ನು ಒರಟಾಗಿ ಹೇಳುವಂಥ ಧೋರಣೆ ಇಂದು ಎಲ್ಲೆಲ್ಲೂ ಹೆಚ್ಚುತ್ತಿದೆ; ಸಾಮಾಜಿಕ ಜಾಲತಾಣಗಳನ್ನು ನೋಡಿದರೆ ಈ ಮಾತಿಗೆ ಸ್ಪಷ್ಟ ಸಾಕ್ಷ್ಯ ಸಿಗುತ್ತದೆ.</p>.<p>ವಿದ್ಯಾವಂತನಿಗೆ ಹೊಣೆಗಾರಿಕೆ ಹೆಚ್ಚು. ಯೋಚಿಸುವ ಶಕ್ತಿಯನ್ನು ಅವನಿಗೆ ವಿದ್ಯೆ ಕೊಟ್ಟಿರುತ್ತದೆ. ಅದನ್ನು ಅವನು ಬಳಸಿಕೊಂಡು ತನ್ನ ನಡೆವಳಿಕೆಯನ್ನು ರೂಢಿಸಿಕೊಳ್ಳಬೇಕು; ಸುಂದರವಾಗಿಸಿಕೊಳ್ಳಬೇಕು; ಸಂಸ್ಕಾರಯುತವನ್ನಾಗಿಸಿಕೊಳ್ಳಬೇಕು. ಆದರೆ ಹಲವರು ಈ ನಿಲುವಿಗೆ ವಿರುದ್ಧವಾಗಿದ್ದಾರೆ ಎಂಬುದೇ ಇಂದಿನ ಆತಂಕ. ಸುಭಾಷಿತ ಅದನ್ನೇ ಇಲ್ಲಿ ಹೇಳುತ್ತಿರುವುದು: ನಡತೆಯಿಲ್ಲದವನ ವಿದ್ಯೆ ಅಸಹ್ಯವೂ ಹೌದು, ತ್ಯಾಜ್ಯವೂ ಹೌದು. ನಡತೆ ಎಂಬುದು ತುಂಬ ವಿಶಾಲವಾದ ವಿವರ. ನಾವು ಮನೆಯಲ್ಲಿ ಹೇಗಿರಬೇಕು ಎಂಬುದನ್ನೂ ಅದು ಸೂಚಿಸುತ್ತದೆ, ಸಮಾಜದಲ್ಲಿ ಹೇಗಿರಬೇಕೆಂದೂ ಸೂಚಿಸುತ್ತದೆ.</p>.<p>ನೀರು ನಮಗೆ ಅತ್ಯಂತ ಆವಶ್ಯಕ. ಹೀಗೆಂದು ನಾವು ತಲೆಬುರುಡೆಯಲ್ಲಿರುವ ನೀರನ್ನು ಕುಡಿಯುವುದಿಲ್ಲವಷ್ಟೆ! ಹಾಲು ಕೂಡ ನಮಗೆ ತುಂಬ ಮುಖ್ಯವಾದ ಆಹಾರ. ಆದರೆ ನಾಯಿಯ ಚರ್ಮದಲ್ಲಿ ಯಾರಾದರೂ ಹಾಲನ್ನು ತಂದುಕೊಟ್ಟರೆ ನಾವು ಕುಡಿಯುತ್ತೇವೆಯೆ?</p>.<p>ಹೀಗೆಯೇ ಒಬ್ಬ ವ್ಯಕ್ತಿ ವಿದ್ಯಾವಂತನೇ ಆಗಿರಬಹುದು; ಅವನಲ್ಲಿ ನಾಲ್ಕಾರು ಪದವಿಪತ್ರಗಳೂ ಇರಬಹುದು. ಆದರೆ ಅವನು ಅಯೋಗ್ಯನಾಗಿದ್ದರೆ, ನೀಚನಾಗಿದ್ದರೆ, ದುಷ್ಟನಾಗಿದ್ದರೆ – ಅವನು ನಮ್ಮ ಪಾಲಿಗೆ ಅಸಹ್ಯವೂ ಹೌದು, ತ್ಯಾಜ್ಯವೂ ಹೌದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>