<p>ಯೇನ ಕೇನ ಪ್ರಕಾರೇಣ ಯಸ್ಯ ಕಸ್ಯಾಪಿ ದೇಹಿನಃ ।</p>.<p>ಸಂತೋಷಂ ಜನಯೇತ್ ಪ್ರಾಜ್ಞಸ್ತದೇವೇಶ್ವರಪೂಜನಮ್ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>’ಯಾವುದೇ ರೀತಿಯಲ್ಲಾದರೂ ಬೇರೆ ಒಬ್ಬ ವ್ಯಕ್ತಿಗಾದರೂ ಸಂತೋಷವನ್ನು ಉಂಟುಮಾಡುವಂಥ ಕೆಲಸವನ್ನು ಮಾಡುವುದು ಪ್ರಜ್ಞಾವಂತನ ಲಕ್ಷಣ. ತನ್ನ ಸುತ್ತಲಿನವರಲ್ಲಿ ಸಂತೋಷವನ್ನು ಹರಡುವುದೇ ದಿಟವಾದ ದೇವರ ಪೂಜೆ.‘</p>.<p>ಸಂತೋಷ ಎನ್ನುವುದು ತುಂಬ ದೊಡ್ಡ ಸಂಗತಿ. ಎಲ್ಲ ಜೀವಿಗಳೂ ಬಯಸುವ ಸಂಗತಿ ಅದು. ಆದರೆ ಸಂತೋಷವನ್ನು ದಕ್ಕಿಸಿಕೊಳ್ಳುವುದು ಸುಲಭವಲ್ಲ. ಇದಕ್ಕೆ ವಿಘ್ನಗಳು ಹತ್ತಾರು. ಕೆಲವೊಮ್ಮೆ ನಮಗೆ ನಾವೇ ತೊಂದರೆಯನ್ನು ಮಾಡಿಕೊಳ್ಳುತ್ತಿರುತ್ತೇವೆ; ಇನ್ನು ಕೆಲವೊಮ್ಮೆ ಇತರರೂ ತೊಂದರೆಯನ್ನು ಉಂಟುಮಾಡುತ್ತಿರುತ್ತಾರೆ.</p>.<p>ಹೀಗಿದ್ದರೂ ನಾವೆಲ್ಲರೂ ನಿರಂತರವಾಗಿ ಸಂತೋಷಕ್ಕಾಗಿಯೇ ಪರಿತಪಿಸುತ್ತಿರುತ್ತೇವೆ. ಬೇರೆಯವರ ಸಂತೋಷಕ್ಕೆ ನಾವು ಅಡ್ಡಿಯಾಗುವುದು ಕೂಡ ಅದರಲ್ಲಿ ನಮಗೆ ಸಂತೋಷ ಸಿಗುತ್ತದೆ ಎನ್ನುವ ಕಾರಣದಿಂದಲೇ. ಸುಭಾಷಿತ ಈ ವಿಷಯವನ್ನು ತೆಗೆದುಕೊಂಡೇ ಹೇಳುತ್ತಿರುವುದು: ಬೇರೆಯವರ ಸಂತೋಷವನ್ನು ಕಸಿದುಕೊಳ್ಳುವಂಥದ್ದು ನಮ್ಮ ಸಂತೋಷದ ಮೂಲಕಾರಣ ಆಗಬಾರದು; ಇನ್ನೊಬ್ಬರಿಗೆ ಸಂತೋಷವನ್ನು ನೀಡುವಂತೆ ನಡೆದುಕೊಳ್ಳುವುದೇ ನಮ್ಮ ವ್ಯಕ್ತಿತ್ವದ ಗುರಿಯಾಗಬೇಕು. ಇದೇ ಪ್ರಜ್ಞಾವಂತನ ಲಕ್ಷಣ. ಪ್ರಜ್ಞಾವಂತಿಕೆ ಎಂದರೇನು ಇದು: ಇನ್ನೊಬ್ಬರ ಸಂತೋಷಕ್ಕೆ ಕಾರಣವಾಗುವುದು – ಎನ್ನುತ್ತಿದೆ ಸುಭಾಷಿತ.</p>.<p>ಅಧಿಕಾರಿಗಳ ಕರ್ತವ್ಯವೇ ಜನರಿಗೆ ನೆರವಾಗುವುದು. ಆ ಮೂಲಕ ಅವರ ದುಃಖವನ್ನು ಹೊಗಲಾಡಿಸಿ, ಅವರ ಜೀವನದಲ್ಲಿ ಸಂತೋಷವನ್ನು ತುಂಬುವುದು. ಹೀಗೆಯೇ ರಾಜಕಾರಣದ ಉದ್ದೇಶವೂ ಜನರಿಗೆ ಸಂತೋಷದ ಜೀವನವನ್ನು ಒದಗಿಸುವುದು. ಆದರೆ ಅಧಿಕಾರಿಗಳಾಗಲೀ ರಾಜಕಾರಣಿಗಳಾಗಲೀ ತಮ್ಮ ಈ ಕರ್ತವ್ಯವನ್ನು ನೆರವೇರಿಸುತ್ತಿದ್ದಾರೆಯೆ? ಇವರ ತಮ್ಮತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುತ್ತಿದಿದ್ದರೆ ಸಮಾಜ ಇಂದು ಇಷ್ಟೊಂದು ಸಂಕಟದಲ್ಲಿ ಇರಬೇಕಾಗುತ್ತಿತ್ತೆ?</p>.<p>ಪುಣ್ಯಸಂಪಾದನೆಯ ಶ್ರೇಷ್ಠಮಾರ್ಗ ಎಂದರೆ ಅದು ದೇವರ ಪೂಜೆ ಎಂಬ ಶ್ರದ್ಧೆ ನಮ್ಮದು. ದೇವರ ಪೂಜೆಯ ಮೂಲಕ ನಮ್ಮ ಎಲ್ಲ ಪಾಪಗಳನ್ನೂ ಕಳೆದುಕೊಳ್ಳಬಹುದು ಎನ್ನುವಷ್ಟರ ಮಟ್ಟಿಗೆ ಈ ಶ್ರದ್ಧೆ ಹರಡಿದೆ. ಆದರೆ ಸುಭಾಷಿತ ಹೇಳುತ್ತಿದೆ: ನಾಲ್ಕು ಜನರ ಜೀವನಕ್ಕೆ ಸಂತೋಷವನ್ನು ನೀಡುವುದೇ ನಿಜವಾದ ದೇವರ ಪೂಜೆ.</p>.<p>ನಮ್ಮ ಪರಿಸರದಲ್ಲಿ ಸಂತೋಷವನ್ನು ಪಸರಿಸುವಂಥ ರೀತಿಯಲ್ಲಿ ನಮ್ಮ ನಡೆ–ನುಡಿಗಳನ್ನು ರೂಪಿಸಿಕೊಳ್ಳಬೇಕು. ಆಗಲೇ ನಮ್ಮ ಜೀವನಕ್ಕೂ ಸಂತೋಷ ಸಿಗುವುದು. ಕುಟುಂಬ ಮತ್ತು ಸಮಾಜದ ಸಂತೋಷದಲ್ಲಿಯೇ ನಮ್ಮ ಸಂತೋಷವೂ ಸೇರಿಕೊಂಡಿದೆ ಎಂಬ ಸತ್ಯವನ್ನು ನಾವು ಮರೆಯಬಾರದು.</p>.<p>ನಾವೆಲ್ಲರೂ ದಿಟವಾದ ಈಶ್ವರಪೂಜೆಯಲ್ಲಿ ಒಂದಾಗುವ ಈ ಸಮಾಜಯಜ್ಞ ಎಂಬ ಕರ್ತವ್ಯವೇ ಭೂಲೋಕವನ್ನೇ ಸ್ವರ್ಗವನ್ನಾಗಿಸಬಲ್ಲದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯೇನ ಕೇನ ಪ್ರಕಾರೇಣ ಯಸ್ಯ ಕಸ್ಯಾಪಿ ದೇಹಿನಃ ।</p>.<p>ಸಂತೋಷಂ ಜನಯೇತ್ ಪ್ರಾಜ್ಞಸ್ತದೇವೇಶ್ವರಪೂಜನಮ್ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>’ಯಾವುದೇ ರೀತಿಯಲ್ಲಾದರೂ ಬೇರೆ ಒಬ್ಬ ವ್ಯಕ್ತಿಗಾದರೂ ಸಂತೋಷವನ್ನು ಉಂಟುಮಾಡುವಂಥ ಕೆಲಸವನ್ನು ಮಾಡುವುದು ಪ್ರಜ್ಞಾವಂತನ ಲಕ್ಷಣ. ತನ್ನ ಸುತ್ತಲಿನವರಲ್ಲಿ ಸಂತೋಷವನ್ನು ಹರಡುವುದೇ ದಿಟವಾದ ದೇವರ ಪೂಜೆ.‘</p>.<p>ಸಂತೋಷ ಎನ್ನುವುದು ತುಂಬ ದೊಡ್ಡ ಸಂಗತಿ. ಎಲ್ಲ ಜೀವಿಗಳೂ ಬಯಸುವ ಸಂಗತಿ ಅದು. ಆದರೆ ಸಂತೋಷವನ್ನು ದಕ್ಕಿಸಿಕೊಳ್ಳುವುದು ಸುಲಭವಲ್ಲ. ಇದಕ್ಕೆ ವಿಘ್ನಗಳು ಹತ್ತಾರು. ಕೆಲವೊಮ್ಮೆ ನಮಗೆ ನಾವೇ ತೊಂದರೆಯನ್ನು ಮಾಡಿಕೊಳ್ಳುತ್ತಿರುತ್ತೇವೆ; ಇನ್ನು ಕೆಲವೊಮ್ಮೆ ಇತರರೂ ತೊಂದರೆಯನ್ನು ಉಂಟುಮಾಡುತ್ತಿರುತ್ತಾರೆ.</p>.<p>ಹೀಗಿದ್ದರೂ ನಾವೆಲ್ಲರೂ ನಿರಂತರವಾಗಿ ಸಂತೋಷಕ್ಕಾಗಿಯೇ ಪರಿತಪಿಸುತ್ತಿರುತ್ತೇವೆ. ಬೇರೆಯವರ ಸಂತೋಷಕ್ಕೆ ನಾವು ಅಡ್ಡಿಯಾಗುವುದು ಕೂಡ ಅದರಲ್ಲಿ ನಮಗೆ ಸಂತೋಷ ಸಿಗುತ್ತದೆ ಎನ್ನುವ ಕಾರಣದಿಂದಲೇ. ಸುಭಾಷಿತ ಈ ವಿಷಯವನ್ನು ತೆಗೆದುಕೊಂಡೇ ಹೇಳುತ್ತಿರುವುದು: ಬೇರೆಯವರ ಸಂತೋಷವನ್ನು ಕಸಿದುಕೊಳ್ಳುವಂಥದ್ದು ನಮ್ಮ ಸಂತೋಷದ ಮೂಲಕಾರಣ ಆಗಬಾರದು; ಇನ್ನೊಬ್ಬರಿಗೆ ಸಂತೋಷವನ್ನು ನೀಡುವಂತೆ ನಡೆದುಕೊಳ್ಳುವುದೇ ನಮ್ಮ ವ್ಯಕ್ತಿತ್ವದ ಗುರಿಯಾಗಬೇಕು. ಇದೇ ಪ್ರಜ್ಞಾವಂತನ ಲಕ್ಷಣ. ಪ್ರಜ್ಞಾವಂತಿಕೆ ಎಂದರೇನು ಇದು: ಇನ್ನೊಬ್ಬರ ಸಂತೋಷಕ್ಕೆ ಕಾರಣವಾಗುವುದು – ಎನ್ನುತ್ತಿದೆ ಸುಭಾಷಿತ.</p>.<p>ಅಧಿಕಾರಿಗಳ ಕರ್ತವ್ಯವೇ ಜನರಿಗೆ ನೆರವಾಗುವುದು. ಆ ಮೂಲಕ ಅವರ ದುಃಖವನ್ನು ಹೊಗಲಾಡಿಸಿ, ಅವರ ಜೀವನದಲ್ಲಿ ಸಂತೋಷವನ್ನು ತುಂಬುವುದು. ಹೀಗೆಯೇ ರಾಜಕಾರಣದ ಉದ್ದೇಶವೂ ಜನರಿಗೆ ಸಂತೋಷದ ಜೀವನವನ್ನು ಒದಗಿಸುವುದು. ಆದರೆ ಅಧಿಕಾರಿಗಳಾಗಲೀ ರಾಜಕಾರಣಿಗಳಾಗಲೀ ತಮ್ಮ ಈ ಕರ್ತವ್ಯವನ್ನು ನೆರವೇರಿಸುತ್ತಿದ್ದಾರೆಯೆ? ಇವರ ತಮ್ಮತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುತ್ತಿದಿದ್ದರೆ ಸಮಾಜ ಇಂದು ಇಷ್ಟೊಂದು ಸಂಕಟದಲ್ಲಿ ಇರಬೇಕಾಗುತ್ತಿತ್ತೆ?</p>.<p>ಪುಣ್ಯಸಂಪಾದನೆಯ ಶ್ರೇಷ್ಠಮಾರ್ಗ ಎಂದರೆ ಅದು ದೇವರ ಪೂಜೆ ಎಂಬ ಶ್ರದ್ಧೆ ನಮ್ಮದು. ದೇವರ ಪೂಜೆಯ ಮೂಲಕ ನಮ್ಮ ಎಲ್ಲ ಪಾಪಗಳನ್ನೂ ಕಳೆದುಕೊಳ್ಳಬಹುದು ಎನ್ನುವಷ್ಟರ ಮಟ್ಟಿಗೆ ಈ ಶ್ರದ್ಧೆ ಹರಡಿದೆ. ಆದರೆ ಸುಭಾಷಿತ ಹೇಳುತ್ತಿದೆ: ನಾಲ್ಕು ಜನರ ಜೀವನಕ್ಕೆ ಸಂತೋಷವನ್ನು ನೀಡುವುದೇ ನಿಜವಾದ ದೇವರ ಪೂಜೆ.</p>.<p>ನಮ್ಮ ಪರಿಸರದಲ್ಲಿ ಸಂತೋಷವನ್ನು ಪಸರಿಸುವಂಥ ರೀತಿಯಲ್ಲಿ ನಮ್ಮ ನಡೆ–ನುಡಿಗಳನ್ನು ರೂಪಿಸಿಕೊಳ್ಳಬೇಕು. ಆಗಲೇ ನಮ್ಮ ಜೀವನಕ್ಕೂ ಸಂತೋಷ ಸಿಗುವುದು. ಕುಟುಂಬ ಮತ್ತು ಸಮಾಜದ ಸಂತೋಷದಲ್ಲಿಯೇ ನಮ್ಮ ಸಂತೋಷವೂ ಸೇರಿಕೊಂಡಿದೆ ಎಂಬ ಸತ್ಯವನ್ನು ನಾವು ಮರೆಯಬಾರದು.</p>.<p>ನಾವೆಲ್ಲರೂ ದಿಟವಾದ ಈಶ್ವರಪೂಜೆಯಲ್ಲಿ ಒಂದಾಗುವ ಈ ಸಮಾಜಯಜ್ಞ ಎಂಬ ಕರ್ತವ್ಯವೇ ಭೂಲೋಕವನ್ನೇ ಸ್ವರ್ಗವನ್ನಾಗಿಸಬಲ್ಲದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>