ಸ್ನೇಹಿತನ ಕಷ್ಟಕ್ಕೆ ಸ್ಪಂದಿಸದ, ಅವನಿಗೆ ಸಹಾಯವನ್ನು ನೀಡದ ‘ಸ್ನೇಹಿತ’ ಎಂಬ ವ್ಯಕ್ತಿಯನ್ನು ಸುಭಾಷಿತ ಕ್ರೂರಿ ಎಂದು ಘೋಷಿಸಿದೆ. ಮುಳುಗುತ್ತಿರುವ ವ್ಯಕ್ತಿಯೊಬ್ಬನನ್ನು ಕಾಪಾಡುವುದು ಮನುಷ್ಯಧರ್ಮ. ಹೀಗಿರುವಾಗ ಸ್ನೇಹದ ಲಕ್ಷಣವೇ ಹೊಣೆಗಾರಿಕೆ, ಪ್ರೀತಿ, ಕಾಳಜಿಗಳು ಆಗಿರುವಾಗ, ಸ್ನೇಹಿತನ ನೆರವಾಗಿ ಧಾವಿಸದ ಸ್ನೇಹಕ್ಕೆ ಅರ್ಥವಾದರೂ ಹೇಗೆ ಉಳಿದೀತು?