<p>ಕಾ ದುರ್ಲಭಾ ನರಾಣಾಂ</p>.<p>ಹರಿಭಕ್ತಿಃ ಪಾತಕಂ ಚ ಕಿಂ ಹಿಂಸಾ ।।</p>.<p>ಕೋ ಹಿ ಭಗವತ್ಪ್ರಿಯಃ ಸ್ಯಾತ್</p>.<p>ಯೋನ್ಯಂ ನೋದ್ವೇಜಯೇದನುದ್ವಿಗ್ನಃ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಜನರಿಗೆ ಯಾವುದು ದುರ್ಲಭ? ಹರಿಭಕ್ತಿ. ಯಾವುದು ಪಾಪಜನಕ? ಹಿಂಸೆ. ಯಾವನು ಭಗವಂತನಿಗೆ ಪ್ರಿಯನಾಗುತ್ತಾನೆ? ಯಾವನು ತಾನೂ ಉದ್ವೇಗಗೊಳ್ಳದೆ ಇನ್ನೊಬ್ಬರಿಗೂ ಉದ್ವೇಗವನ್ನು ಉಂಟುಮಾಡುವುದಿಲ್ಲವೋ ಅವನು.’</p>.<p>ದುರ್ಲಭ ಎಂದರೆ ದೊರೆಯುವುದು ಕಷ್ಟವಾದುದು ಎಂದರ್ಥ. ಜನರಿಗೆ ಯಾವುದು ದುರ್ಲಭ ಎಂದರೆ ಭಗವಂತನಲ್ಲಿ ಭಕ್ತಿ ಎಂದು ಹೇಳುತ್ತಿದೆ ಸುಭಾಷಿತ. ನಮಗೆ ಈ ಮಾತನ್ನು ಕೇಳಿ ಆಶ್ವರ್ಯವಾಗಬಹುದು. ಇಂದು ಎಲ್ಲೆಲ್ಲೂ ದೇವಾಲಯಗಳು ಭಕ್ತರಿಂದ ತುಂಬಿರುತ್ತವೆ; ತೀರ್ಥಕ್ಷೇತ್ರಗಳಲ್ಲಿ ಕಾಲಿಡುವುದಕ್ಕೂ ಸ್ಥಳವಿಲ್ಲದಷ್ಟು ಆಸ್ತಿಕರು ತುಂಬಿರುತ್ತಾರೆ. ಇಂಥದ್ದರಲ್ಲಿ ಭಕ್ತಿ ಎನ್ನುವುದು ಹೇಗೆ ದುಲರ್ಭವಾದೀತು – ಎಂದು ಅನಿಸುವುದು ಸಹಜ. ಇಲ್ಲಿ ಸುಭಾಷಿತ ಹೇಳುತ್ತಿರುವಂಥದ್ದು ನಿಜವಾದ ಭಕ್ತಿ; ಭಕ್ತಿಯ ತೋರಿಕೆ ಅಲ್ಲ.</p>.<p>ಸುಭಾಷಿತ ಕೇಳಿರುವ ಎರಡನೆಯ ಪ್ರಶ್ನೆ ಎಂದರೆ, ಯಾವುದರಿಂದ ಪಾಪ ಹುಟ್ಟುತ್ತದೆ? ಸುಭಾಷಿತ ಸ್ಪಷ್ಟವಾಗಿ ಹೇಳುತ್ತಿದೆ: ಹಿಂಸೆಯೇ ಪಾಪಜನಕ. ಹಿಂಸೆ ಎಂದರೆ ಏನು? ಯಾರನ್ನಾದರೂ ದೈಹಿಕವಾಗಿ ತೊಂದರೆಗೆ ಒಡ್ಡಿದರೆ ಅದನ್ನು ಹಿಂಸೆ ಎಂದು ಕರೆಯವುದು ಸಾಮಾನ್ಯವಾದ ರೂಢಿ. ಆದರೆ ಹಿಂಸೆಯ ಅರ್ಥ ಇಷ್ಟೇ ಅಲ್ಲ; ಮಾನಸಿಕವಾಗಿ ಯಾರನ್ನಾದರೂ ಸಂಕಟಕ್ಕೆ ಒಳಪಡಿಸಿದರೂ ಅದು ಹಿಂಸೆಯೇ ಎಂದೆನಿಸಿಕೊಳ್ಳುತ್ತದೆ. ಕಾರಣವಿಲ್ಲದೆ ಟೀಕಿಸುವುದು, ಬೈಯುವುದು, ಹಂಗಿಸುವುದು – ಇವೆಲ್ಲವೂ ಹಿಂಸೆಯೇ. ಇನ್ನು ಹೊಡೆಯುವುದು ಮುಂತಾದ ದೈಹಿಕ ದಾಳಿಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ. ಹೀಗೆ ಬೇರೊಬ್ಬರನ್ನು ಹಿಂಸೆಗೆ ತುತ್ತಾಗಿಸುವುದರಿಂದ ನಮಗೆ ಪಾಪ ಸುತ್ತಿಕೊಳ್ಳುತ್ತದೆ ಎಂದು ಸುಭಾಷಿತ ಹೇಳುತ್ತಿದೆ.</p>.<p>ಸುಭಾಷಿತ ಕೇಳುತ್ತಿರುವ ಮೂರನೆಯ ಪ್ರಶ್ನೆ ಸ್ವಾರಸ್ಯಕರವಾಗಿದೆ. ದೇವರಿಗೆ ಯಾರು ಪ್ರಿಯನಾಗುತ್ತಾನೆ? ನಮ್ಮ ತಂದೆತಾಯಿಗಳಿಗೋ ಅಣ್ಣತಮ್ಮಂದಿರಿಗೋ ಅಕ್ಕತಂಗಿಯರಿಗೋ ಕಚೇರಿಯಲ್ಲಿ ಮೇಲಧಿಕಾರಿಗೋ ಪಕ್ಷದ ಅಧ್ಯಕ್ಷರಿಗೋ – ಯಾರು ಪ್ರಿಯವಾಗುತ್ತಾರೆ ಎಂದರೆ ಸುಲಭವಾಗಿ ಹೇಳಬಹುದು. ಆದರೆ ದೇವರಿಗೆ ಯಾರು ಪ್ರಿಯ ಎಂದರೆ ಹೇಗೆ ಹೇಳುವುದು?</p>.<p>ಆದರೆ ಸುಭಾಷಿತ ಹೇಳುತ್ತಿದೆ: ಯಾವನು ಸ್ವಯಂ ಉದ್ವೇಗಕ್ಕೆ ಒಳಗಾಗುವುದಿಲ್ಲವೋ, ಯಾವನು ಇನ್ನೊಬ್ಬರಿಗೂ ಉದ್ವೇಗವನ್ನು ಉಂಟುಮಾಡುವುದಿಲ್ಲವೋ ಅವನು ಭಗವಂತನಿಗೆ ಪ್ರಿಯ.</p>.<p>ಉದ್ವೇಗ ಎಂದರೆ ದುಗುಡ, ಬುದ್ಧಿ ತನ್ನ ನೆಲೆಯನ್ನು ಕಂಡುಕೊಳ್ಳದಿರುವುದು, ವಿಚಲಿತವಾದ ಮನಸ್ಸು. ಇಂಥ ಸ್ಥಿತಿ ಯಾರಿಗೇ ಇದ್ದರೂ – ಅದು ನಮಗಾಗಲೀ ಇನ್ನೊಬ್ಬರಿಗಾಗಲೀ – ಅವರು ನೆಮ್ಮದಿಯಾಗಿರಲಾರರು; ಒಂದೋ ಅನಾಹುತಕ್ಕೆ ತುತ್ತಾಗುತ್ತಾರೆ, ಮತ್ತೊಂದೋ ಅನಾಹುತವನ್ನು ಉಂಟುಮಾಡುತ್ತಾರೆ. ಹೀಗಾಗಿಯೇ ಸುಭಾಷಿತ ಹೇಳುತ್ತಿರುವುದು, ಇಂಥ ಸ್ಥಿತಿಯಿಂದ ಮುಕ್ತರಾದವರು ದೇವರಿಗೂ ಪ್ರಿಯವಾಗುತ್ತಾರೆ ಎಂದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾ ದುರ್ಲಭಾ ನರಾಣಾಂ</p>.<p>ಹರಿಭಕ್ತಿಃ ಪಾತಕಂ ಚ ಕಿಂ ಹಿಂಸಾ ।।</p>.<p>ಕೋ ಹಿ ಭಗವತ್ಪ್ರಿಯಃ ಸ್ಯಾತ್</p>.<p>ಯೋನ್ಯಂ ನೋದ್ವೇಜಯೇದನುದ್ವಿಗ್ನಃ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಜನರಿಗೆ ಯಾವುದು ದುರ್ಲಭ? ಹರಿಭಕ್ತಿ. ಯಾವುದು ಪಾಪಜನಕ? ಹಿಂಸೆ. ಯಾವನು ಭಗವಂತನಿಗೆ ಪ್ರಿಯನಾಗುತ್ತಾನೆ? ಯಾವನು ತಾನೂ ಉದ್ವೇಗಗೊಳ್ಳದೆ ಇನ್ನೊಬ್ಬರಿಗೂ ಉದ್ವೇಗವನ್ನು ಉಂಟುಮಾಡುವುದಿಲ್ಲವೋ ಅವನು.’</p>.<p>ದುರ್ಲಭ ಎಂದರೆ ದೊರೆಯುವುದು ಕಷ್ಟವಾದುದು ಎಂದರ್ಥ. ಜನರಿಗೆ ಯಾವುದು ದುರ್ಲಭ ಎಂದರೆ ಭಗವಂತನಲ್ಲಿ ಭಕ್ತಿ ಎಂದು ಹೇಳುತ್ತಿದೆ ಸುಭಾಷಿತ. ನಮಗೆ ಈ ಮಾತನ್ನು ಕೇಳಿ ಆಶ್ವರ್ಯವಾಗಬಹುದು. ಇಂದು ಎಲ್ಲೆಲ್ಲೂ ದೇವಾಲಯಗಳು ಭಕ್ತರಿಂದ ತುಂಬಿರುತ್ತವೆ; ತೀರ್ಥಕ್ಷೇತ್ರಗಳಲ್ಲಿ ಕಾಲಿಡುವುದಕ್ಕೂ ಸ್ಥಳವಿಲ್ಲದಷ್ಟು ಆಸ್ತಿಕರು ತುಂಬಿರುತ್ತಾರೆ. ಇಂಥದ್ದರಲ್ಲಿ ಭಕ್ತಿ ಎನ್ನುವುದು ಹೇಗೆ ದುಲರ್ಭವಾದೀತು – ಎಂದು ಅನಿಸುವುದು ಸಹಜ. ಇಲ್ಲಿ ಸುಭಾಷಿತ ಹೇಳುತ್ತಿರುವಂಥದ್ದು ನಿಜವಾದ ಭಕ್ತಿ; ಭಕ್ತಿಯ ತೋರಿಕೆ ಅಲ್ಲ.</p>.<p>ಸುಭಾಷಿತ ಕೇಳಿರುವ ಎರಡನೆಯ ಪ್ರಶ್ನೆ ಎಂದರೆ, ಯಾವುದರಿಂದ ಪಾಪ ಹುಟ್ಟುತ್ತದೆ? ಸುಭಾಷಿತ ಸ್ಪಷ್ಟವಾಗಿ ಹೇಳುತ್ತಿದೆ: ಹಿಂಸೆಯೇ ಪಾಪಜನಕ. ಹಿಂಸೆ ಎಂದರೆ ಏನು? ಯಾರನ್ನಾದರೂ ದೈಹಿಕವಾಗಿ ತೊಂದರೆಗೆ ಒಡ್ಡಿದರೆ ಅದನ್ನು ಹಿಂಸೆ ಎಂದು ಕರೆಯವುದು ಸಾಮಾನ್ಯವಾದ ರೂಢಿ. ಆದರೆ ಹಿಂಸೆಯ ಅರ್ಥ ಇಷ್ಟೇ ಅಲ್ಲ; ಮಾನಸಿಕವಾಗಿ ಯಾರನ್ನಾದರೂ ಸಂಕಟಕ್ಕೆ ಒಳಪಡಿಸಿದರೂ ಅದು ಹಿಂಸೆಯೇ ಎಂದೆನಿಸಿಕೊಳ್ಳುತ್ತದೆ. ಕಾರಣವಿಲ್ಲದೆ ಟೀಕಿಸುವುದು, ಬೈಯುವುದು, ಹಂಗಿಸುವುದು – ಇವೆಲ್ಲವೂ ಹಿಂಸೆಯೇ. ಇನ್ನು ಹೊಡೆಯುವುದು ಮುಂತಾದ ದೈಹಿಕ ದಾಳಿಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ. ಹೀಗೆ ಬೇರೊಬ್ಬರನ್ನು ಹಿಂಸೆಗೆ ತುತ್ತಾಗಿಸುವುದರಿಂದ ನಮಗೆ ಪಾಪ ಸುತ್ತಿಕೊಳ್ಳುತ್ತದೆ ಎಂದು ಸುಭಾಷಿತ ಹೇಳುತ್ತಿದೆ.</p>.<p>ಸುಭಾಷಿತ ಕೇಳುತ್ತಿರುವ ಮೂರನೆಯ ಪ್ರಶ್ನೆ ಸ್ವಾರಸ್ಯಕರವಾಗಿದೆ. ದೇವರಿಗೆ ಯಾರು ಪ್ರಿಯನಾಗುತ್ತಾನೆ? ನಮ್ಮ ತಂದೆತಾಯಿಗಳಿಗೋ ಅಣ್ಣತಮ್ಮಂದಿರಿಗೋ ಅಕ್ಕತಂಗಿಯರಿಗೋ ಕಚೇರಿಯಲ್ಲಿ ಮೇಲಧಿಕಾರಿಗೋ ಪಕ್ಷದ ಅಧ್ಯಕ್ಷರಿಗೋ – ಯಾರು ಪ್ರಿಯವಾಗುತ್ತಾರೆ ಎಂದರೆ ಸುಲಭವಾಗಿ ಹೇಳಬಹುದು. ಆದರೆ ದೇವರಿಗೆ ಯಾರು ಪ್ರಿಯ ಎಂದರೆ ಹೇಗೆ ಹೇಳುವುದು?</p>.<p>ಆದರೆ ಸುಭಾಷಿತ ಹೇಳುತ್ತಿದೆ: ಯಾವನು ಸ್ವಯಂ ಉದ್ವೇಗಕ್ಕೆ ಒಳಗಾಗುವುದಿಲ್ಲವೋ, ಯಾವನು ಇನ್ನೊಬ್ಬರಿಗೂ ಉದ್ವೇಗವನ್ನು ಉಂಟುಮಾಡುವುದಿಲ್ಲವೋ ಅವನು ಭಗವಂತನಿಗೆ ಪ್ರಿಯ.</p>.<p>ಉದ್ವೇಗ ಎಂದರೆ ದುಗುಡ, ಬುದ್ಧಿ ತನ್ನ ನೆಲೆಯನ್ನು ಕಂಡುಕೊಳ್ಳದಿರುವುದು, ವಿಚಲಿತವಾದ ಮನಸ್ಸು. ಇಂಥ ಸ್ಥಿತಿ ಯಾರಿಗೇ ಇದ್ದರೂ – ಅದು ನಮಗಾಗಲೀ ಇನ್ನೊಬ್ಬರಿಗಾಗಲೀ – ಅವರು ನೆಮ್ಮದಿಯಾಗಿರಲಾರರು; ಒಂದೋ ಅನಾಹುತಕ್ಕೆ ತುತ್ತಾಗುತ್ತಾರೆ, ಮತ್ತೊಂದೋ ಅನಾಹುತವನ್ನು ಉಂಟುಮಾಡುತ್ತಾರೆ. ಹೀಗಾಗಿಯೇ ಸುಭಾಷಿತ ಹೇಳುತ್ತಿರುವುದು, ಇಂಥ ಸ್ಥಿತಿಯಿಂದ ಮುಕ್ತರಾದವರು ದೇವರಿಗೂ ಪ್ರಿಯವಾಗುತ್ತಾರೆ ಎಂದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>