<p>ಏಕಃ ಪ್ರಸೂಯತೇ ಜಂತುರೇಕ ಏವ ಪ್ರಲೀಯತೇ ।</p>.<p>ಏಕೋsನುಭುಂಕ್ತೇ ಸುಕೃತಮೇಕ ಏವ ಚ ದುಷ್ಕೃತಮ್ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>’ಪ್ರಾಣಿಯು ಲೋಕದಲ್ಲಿ ಏಕಾಕಿಯಾಗಿ ಹುಟ್ಟುತ್ತಾನೆ; ಸಾಯುವುದು ಕೂಡ ಒಬ್ಬನೇ. ಒಬ್ಬನೇ ತಾನು ಮಾಡಿದ ಪುಣ್ಯವನ್ನು ಅನುಭವಿಸುತ್ತಾನೆ; ಹೀಗೆಯೇ ಕೆಟ್ಟದ್ದನ್ನೂ ತಾನೇ ಅನುಭವಿಸುತ್ತಾನೆ.’</p>.<p>ಮೇಲ್ನೋಟಕ್ಕೆ ಈ ಸುಭಾಷಿತ ನೈರಾಶ್ಯವನ್ನು ಹೇಳುತ್ತಿದೆ ಎಂದೆನಿಸುತ್ತದೆ. ಆದರೆ ಆಲೋಚಿದರೆ ಗೊತ್ತಾಗುತ್ತದೆ, ಇದು ವಾಸ್ತವವನ್ನು ಮಾತನಾಡುತ್ತಿದೆ, ಆದರ್ಶವನ್ನೂ ಬೋಧಿಸುತ್ತಿದೆ.</p>.<p>ಮನುಷ್ಯ ಹುಟ್ಟುವುದು ಒಂಟಿಯಾಗಿಯೇ. ಅವನು ಹತ್ತು ಜನರಿರುವ ಮನೆಯಲ್ಲಿ ಹುಟ್ಟಿರಬಹುದು. ಆದರೆ ಹುಟ್ಟುವುದು ಮಾತ್ರ ಒಂಟಿಯಾಗಿಯೇ. ಹೀಗೆಯೇ ಅವನು ಜೀವನದಲ್ಲಿ ಸಾವಿರ ಜನರ ಮಧ್ಯೆ ಇರಬಹುದು; ಆದರೆ ಸಾಯುವುದು ಕೂಡ ಒಂಟಿಯಾಗಿಯೇ. ಇದು ಸೃಷ್ಟಿಯ ನಿಯಮ. ನಮ್ಮಿಂದ ಈ ನಿಯಮವನ್ನು ಬದಲಾಯಿಸಲು ಶಕ್ಯವಿಲ್ಲ.</p>.<p>ಹಾಗಾದರೆ ಈಗ ನಾವು ಏನು ಮಾಡಬೇಕು? ಸುಭಾಷಿತ ನಮ್ಮನ್ನು ಹೆದರಿಸುತ್ತಿದೆಯೆ?</p>.<p>ಹುಟ್ಟನ್ನು ಮತ್ತು ಸಾವನ್ನು ಹೇಳಿದ ಮೇಲೆ ಸುಭಾಷಿತ ಏನನ್ನು ಹೇಳಿದೆ ಎಂಬುದನ್ನು ಗಮನಿಸಬೇಕಾಗುತ್ತದೆ.</p>.<p>‘ಒಬ್ಬನೇ ತಾನು ಮಾಡಿದ ಪುಣ್ಯವನ್ನು ಅನುಭವಿಸುತ್ತಾನೆ; ಹೀಗೆಯೇ ಕೆಟ್ಟದ್ದನ್ನೂ ತಾನೇ ಅನುಭವಿಸುತ್ತಾನೆ’ – ಇದು ಸುಭಾಷಿತದ ಮುಂದಿನ ಮಾತು.</p>.<p>ನಾವು ಹೇಗೆ ಒಬ್ಬರೇ ಹುಟ್ಟಿ, ಒಬ್ಬರೇ ಸಾಯುತ್ತೇವೆಯೋ ಹಾಗೆಯೇ ನಾವು ಮಾಡುವ ಪಾಪ–ಪುಣ್ಯಗಳ ಫಲವನ್ನೂ ಒಬ್ಬರೇ ಅನುಭವಿಸಬೇಕಾಗುತ್ತದೆ – ಎಂಬುದು ಇದರ ಅರ್ಥ.</p>.<p>ಒಳ್ಳೆಯ ಕೆಲಸವನ್ನು ಮಾಡಿದರೆ ಪುಣ್ಯ ಬರುತ್ತದೆ, ಕೆಟ್ಟ ಕೆಲಸವನ್ನು ಮಾಡಿದರೆ ಪಾಪ ಬರುತ್ತದೆ – ಎಂಬುದು ನಮ್ಮ ನಂಬಿಕೆ. ನಾವು ಬಹುಪಾಲು ಸಮಯದಲ್ಲಿ ಒಳ್ಳೆಯ ಕೆಲಸವನ್ನು ಮಾಡುವುದಾಗಲೀ, ಕೆಟ್ಟ ಕೆಲಸವನ್ನು ಮಾಡುವುದಾಗಲೀ ನಮ್ಮ ಕುಟುಂಬದವರಿಗಾಗಿಯೋ ನಮ್ಮ ಆತ್ಮೀಯರಿಗಾಗಿಯೇ ಆಗಿರುತ್ತದೆಯಷ್ಟೆ. ನಮ್ಮ ಈ ಕೆಲಸಗಳಿಂದ ಅವರಿಗೆ ಒಳ್ಳೆಯದೋ ಕೆಟ್ಟದ್ದೋ ಆಗಬಹುದು, ಸಂತೋಷವೋ ದುಃಖವೋ ಆಗಬಹುದು. ಆದರೆ ಈ ಕೆಲಸಗಳ ನಿಜವಾದ ಫಲವನ್ನು ಅನುಭವಿಸಬೇಕಾದವರು ನಾವೇ. ಇದನ್ನೇ ಸುಭಾಷಿತ ಹೇಳುತ್ತಿರುವುದು. ನಾವು ಈ ಕೂಡಲೇ ಕಣ್ಣಿಗೆ ಕಾಣುವ ಸುಖ–ದುಃಖಗಳನ್ನು ಮಾತ್ರವೇ ಗಮನದಲ್ಲಿಟ್ಟುಕೊಂಡು ಕೆಲಸಗಳಲ್ಲಿ ತೊಡಗುತ್ತೇವೆ. ಆದರೆ ಅವು ಕಣ್ಣಿಗೆ ಕಾಣದ ಫಲಗಳನ್ನು, ಅದೂ ನಮ್ಮ ಪಾಪ–ಪುಣ್ಯಗಳ ಖಾತೆಯಲ್ಲಿ ಜಮೆ ಆಗುತ್ತಿರುತ್ತದೆ; ಅದನ್ನು ನಾವು ಮರೆಯಬಾರದು.</p>.<p>ಆದುದರಿಂದ ನಾವು ನಮ್ಮ ಹೆಂಡತಿ–ಮಕ್ಕಳೋ, ಅಪ್ಪ–ಅಮ್ಮ, ಮಗ–ಸೊಸೆ, ಪಾರ್ಟಿ–ಪಂಥ ಚೆನ್ನಾಗಿರಲೆಂದು ಮಾಡಬಾರದ ಕೆಲಸಗಳನ್ನು ಮಾಡಿದರೆ, ಇಂದಲ್ಲ ನಾಳೆ, ಅವುಗಳ ಫಲವನ್ನು ಮಾತ್ರ ನಾವೇ ಅನುಭವಿಸಬೇಕಾಗುತ್ತದೆ. ಹೀಗಾಗಿ ಎಚ್ಚರದಿಂದ ನಡೆದುಕೊಳ್ಳಿ; ಪಾಪ–ಪುಣ್ಯಗಳ ಬಗ್ಗೆ ಆಲೋಚಿಸಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಏಕಃ ಪ್ರಸೂಯತೇ ಜಂತುರೇಕ ಏವ ಪ್ರಲೀಯತೇ ।</p>.<p>ಏಕೋsನುಭುಂಕ್ತೇ ಸುಕೃತಮೇಕ ಏವ ಚ ದುಷ್ಕೃತಮ್ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>’ಪ್ರಾಣಿಯು ಲೋಕದಲ್ಲಿ ಏಕಾಕಿಯಾಗಿ ಹುಟ್ಟುತ್ತಾನೆ; ಸಾಯುವುದು ಕೂಡ ಒಬ್ಬನೇ. ಒಬ್ಬನೇ ತಾನು ಮಾಡಿದ ಪುಣ್ಯವನ್ನು ಅನುಭವಿಸುತ್ತಾನೆ; ಹೀಗೆಯೇ ಕೆಟ್ಟದ್ದನ್ನೂ ತಾನೇ ಅನುಭವಿಸುತ್ತಾನೆ.’</p>.<p>ಮೇಲ್ನೋಟಕ್ಕೆ ಈ ಸುಭಾಷಿತ ನೈರಾಶ್ಯವನ್ನು ಹೇಳುತ್ತಿದೆ ಎಂದೆನಿಸುತ್ತದೆ. ಆದರೆ ಆಲೋಚಿದರೆ ಗೊತ್ತಾಗುತ್ತದೆ, ಇದು ವಾಸ್ತವವನ್ನು ಮಾತನಾಡುತ್ತಿದೆ, ಆದರ್ಶವನ್ನೂ ಬೋಧಿಸುತ್ತಿದೆ.</p>.<p>ಮನುಷ್ಯ ಹುಟ್ಟುವುದು ಒಂಟಿಯಾಗಿಯೇ. ಅವನು ಹತ್ತು ಜನರಿರುವ ಮನೆಯಲ್ಲಿ ಹುಟ್ಟಿರಬಹುದು. ಆದರೆ ಹುಟ್ಟುವುದು ಮಾತ್ರ ಒಂಟಿಯಾಗಿಯೇ. ಹೀಗೆಯೇ ಅವನು ಜೀವನದಲ್ಲಿ ಸಾವಿರ ಜನರ ಮಧ್ಯೆ ಇರಬಹುದು; ಆದರೆ ಸಾಯುವುದು ಕೂಡ ಒಂಟಿಯಾಗಿಯೇ. ಇದು ಸೃಷ್ಟಿಯ ನಿಯಮ. ನಮ್ಮಿಂದ ಈ ನಿಯಮವನ್ನು ಬದಲಾಯಿಸಲು ಶಕ್ಯವಿಲ್ಲ.</p>.<p>ಹಾಗಾದರೆ ಈಗ ನಾವು ಏನು ಮಾಡಬೇಕು? ಸುಭಾಷಿತ ನಮ್ಮನ್ನು ಹೆದರಿಸುತ್ತಿದೆಯೆ?</p>.<p>ಹುಟ್ಟನ್ನು ಮತ್ತು ಸಾವನ್ನು ಹೇಳಿದ ಮೇಲೆ ಸುಭಾಷಿತ ಏನನ್ನು ಹೇಳಿದೆ ಎಂಬುದನ್ನು ಗಮನಿಸಬೇಕಾಗುತ್ತದೆ.</p>.<p>‘ಒಬ್ಬನೇ ತಾನು ಮಾಡಿದ ಪುಣ್ಯವನ್ನು ಅನುಭವಿಸುತ್ತಾನೆ; ಹೀಗೆಯೇ ಕೆಟ್ಟದ್ದನ್ನೂ ತಾನೇ ಅನುಭವಿಸುತ್ತಾನೆ’ – ಇದು ಸುಭಾಷಿತದ ಮುಂದಿನ ಮಾತು.</p>.<p>ನಾವು ಹೇಗೆ ಒಬ್ಬರೇ ಹುಟ್ಟಿ, ಒಬ್ಬರೇ ಸಾಯುತ್ತೇವೆಯೋ ಹಾಗೆಯೇ ನಾವು ಮಾಡುವ ಪಾಪ–ಪುಣ್ಯಗಳ ಫಲವನ್ನೂ ಒಬ್ಬರೇ ಅನುಭವಿಸಬೇಕಾಗುತ್ತದೆ – ಎಂಬುದು ಇದರ ಅರ್ಥ.</p>.<p>ಒಳ್ಳೆಯ ಕೆಲಸವನ್ನು ಮಾಡಿದರೆ ಪುಣ್ಯ ಬರುತ್ತದೆ, ಕೆಟ್ಟ ಕೆಲಸವನ್ನು ಮಾಡಿದರೆ ಪಾಪ ಬರುತ್ತದೆ – ಎಂಬುದು ನಮ್ಮ ನಂಬಿಕೆ. ನಾವು ಬಹುಪಾಲು ಸಮಯದಲ್ಲಿ ಒಳ್ಳೆಯ ಕೆಲಸವನ್ನು ಮಾಡುವುದಾಗಲೀ, ಕೆಟ್ಟ ಕೆಲಸವನ್ನು ಮಾಡುವುದಾಗಲೀ ನಮ್ಮ ಕುಟುಂಬದವರಿಗಾಗಿಯೋ ನಮ್ಮ ಆತ್ಮೀಯರಿಗಾಗಿಯೇ ಆಗಿರುತ್ತದೆಯಷ್ಟೆ. ನಮ್ಮ ಈ ಕೆಲಸಗಳಿಂದ ಅವರಿಗೆ ಒಳ್ಳೆಯದೋ ಕೆಟ್ಟದ್ದೋ ಆಗಬಹುದು, ಸಂತೋಷವೋ ದುಃಖವೋ ಆಗಬಹುದು. ಆದರೆ ಈ ಕೆಲಸಗಳ ನಿಜವಾದ ಫಲವನ್ನು ಅನುಭವಿಸಬೇಕಾದವರು ನಾವೇ. ಇದನ್ನೇ ಸುಭಾಷಿತ ಹೇಳುತ್ತಿರುವುದು. ನಾವು ಈ ಕೂಡಲೇ ಕಣ್ಣಿಗೆ ಕಾಣುವ ಸುಖ–ದುಃಖಗಳನ್ನು ಮಾತ್ರವೇ ಗಮನದಲ್ಲಿಟ್ಟುಕೊಂಡು ಕೆಲಸಗಳಲ್ಲಿ ತೊಡಗುತ್ತೇವೆ. ಆದರೆ ಅವು ಕಣ್ಣಿಗೆ ಕಾಣದ ಫಲಗಳನ್ನು, ಅದೂ ನಮ್ಮ ಪಾಪ–ಪುಣ್ಯಗಳ ಖಾತೆಯಲ್ಲಿ ಜಮೆ ಆಗುತ್ತಿರುತ್ತದೆ; ಅದನ್ನು ನಾವು ಮರೆಯಬಾರದು.</p>.<p>ಆದುದರಿಂದ ನಾವು ನಮ್ಮ ಹೆಂಡತಿ–ಮಕ್ಕಳೋ, ಅಪ್ಪ–ಅಮ್ಮ, ಮಗ–ಸೊಸೆ, ಪಾರ್ಟಿ–ಪಂಥ ಚೆನ್ನಾಗಿರಲೆಂದು ಮಾಡಬಾರದ ಕೆಲಸಗಳನ್ನು ಮಾಡಿದರೆ, ಇಂದಲ್ಲ ನಾಳೆ, ಅವುಗಳ ಫಲವನ್ನು ಮಾತ್ರ ನಾವೇ ಅನುಭವಿಸಬೇಕಾಗುತ್ತದೆ. ಹೀಗಾಗಿ ಎಚ್ಚರದಿಂದ ನಡೆದುಕೊಳ್ಳಿ; ಪಾಪ–ಪುಣ್ಯಗಳ ಬಗ್ಗೆ ಆಲೋಚಿಸಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>